ರಾಜ್ಯದಲ್ಲಿ ಸಾಮರಸ್ಯ ಹದಗೆಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾನು ಬಿಜೆಪಿಯವರಿಗೆ ಮನವಿ ಮಾಡ್ತೀನಿ. ಮತೀಯ ಭಾವನೆ ಏಕೆ?ಅಮಿತ್ ಶಾ ಕೂಡಾ ಲೋಕಸಭೆಯಲ್ಲಿ ಮಾತನಾಡುತ್ತಾ,ಹಿಂಸೆಯಿಂದ ಚುನಾವಣೆ ಗೆಲ್ಲೋದಿಲ್ಲ. ನಾವು ತತ್ವ, ಸಿದ್ಧಾಂತದ ಮೇಲೆ ಚುನಾವಣೆ ಗೆಲ್ಲುತ್ತೇವೆ ಎಂದಿದ್ದಾರೆ. ದೊಡ್ಡವರೇ ಹಾಗೆಹೇಳುವಾಗ ನೀವು ಯಾಕೆ ಇಲ್ಲಿ ಈ ಕಟ್ಟು, ಆ ಕಟ್ಟು, ಚರಕ ಕಟ್ಟು, ತಲೆ ಕಟ್ಟು, ಮಲೆ ಕಟ್ಟು ಎಂದು ಸುಮ್ಮನೆ ಬೇಡದಿರುವ ವಿಷಯಗಳನ್ನೆಲ್ಲ ವಿವಾದ ಮಾಡುತ್ತಿದ್ದೀರಿ' ಎಂದು ಕೇಳಿದರು.