‘ಕೋವಿಡ್ ಸೋಂಕಿತರ ಹಿತ ಕಾಪಾಡುವಲ್ಲಿ ಆದ ವೈಫಲ್ಯವನ್ನು ಸರ್ಕಾರ ಒಪ್ಪಿದೆ. ಬೆಡ್, ಚಿಕಿತ್ಸೆ, ಆಕ್ಸಿಜನ್, ಔಷಧ ನೀಡುವಲ್ಲಿ ಸೋತಿದ್ದಲ್ಲದೆ, ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನೂ ನಿಯಂತ್ರಿಸದಿರುವುದು ಅವುಗಳ ಲಾಬಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಸಚಿವ ಸುಧಾಕರ್ ಅವರೇ ಉತ್ತರಿಸಿ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.