ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ, ಬೆಳೆ ಹಾನಿ ಪ್ರಕರಣಗಳಲ್ಲಿ ಮಳೆ ಯಾಶ್ರಿತ ಜಮೀನುಗಳಿಗೆ ಪ್ರತಿ ಹೆಕ್ಟೇರ್ಗೆ ₹ 6,800, ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರ್ಗೆ ₹ 13,500 ಮತ್ತು ಬಹುವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ಗೆ ₹ 18,000 ಪರಿಹಾರ ನೀಡಲಾಗುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಅನುಕ್ರಮವಾಗಿ ₹ 6,800, ₹ 11,500 ಮತ್ತು ₹ 10,000 ಸೇರಿಸಿ ವಿತರಿಸುತ್ತಿದೆ. ಪ್ರಾಣಹಾನಿಗೆ ₹ 4 ಲಕ್ಷ ಹಾಗೂ ಮನೆ ಕುಸಿತಕ್ಕೆ ₹ 95,100 ಮಾತ್ರ ಪರಿಹಾರ ಇದೆ ಎಂದು ಹೇಳಿದರು.