ಗುಂಡ್ಲುಪೇಟೆ: ಭಾರತ್ ಜೊಡೊ ಯಾತ್ರೆ ಗುಂಡ್ಲುಪೇಟೆ ಪೇಟೆ ಪ್ರವೇಶಿಸಿದ್ದು, ರಾಹುಲ್ ಗಾಂಧಿ ಹಾಗೂ ಪಾದಯಾತ್ರಿಗಳನ್ನು ರಾಜ್ಯ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ವೇದಿಕೆಗೆ ಬಂದ ರಾಹುಲ್ ಗಾಂಧಿ ಅವರಿಗೆ ಸಾಹಿತಿ ದೇವನೂರು ಮಹಾದೇವ ಅವರು ಭಾರತದ ಸಂವಿಧಾನದ ಪ್ರತಿಯನ್ನು ಹಸ್ತಾಂತರಿಸಿದರು. ಸ್ವರಾಜ್ ಪಾರ್ಟಿಯ ಯೋಗೇಂದ್ರ ಯಾದವ್ ಅವರು ಸಂವಿಧಾನದ ಪೀಠಿಕೆಯ ಪ್ರತಿಯನ್ನು ಹಸ್ತಾಂತರಿಸಿದರು.
ನಗಾರಿಯನ್ನು ಬಾರಿಸುವುದರ ಮೂಲಕ ರಾಹುಲ್ ಗಾಂಧಿ ಅವರು ಸಮಾವೇಶ ಉದ್ಘಾಟಿಸಿದರು.
ಭಾರತ ಐಕ್ಯತಾ ಯಾತ್ರೆಗೆ ಬೆಂಬಲಿಸಿರುವ ಕನ್ನಡ ಮಣ್ಣಿನ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತಿ ದೇವನೂರು ಮಹಾದೇವ ಅವರು @RahulGandhi ಅವರೊಂದಿಗೆ.