‘ಕೃಷಿಯು ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ಕೃಷಿ ನೀತಿಗಳನ್ನು ರೂಪಿಸುವಾಗ ರಾಜ್ಯಗಳ ಜತೆ, ಸಂಸತ್ತಿನೊಳಗೆ ಎಲ್ಲೂ ಚರ್ಚೆಯನ್ನೇ ನಡೆಸಲಿಲ್ಲ. ಜಿಎಸ್ಟಿ ಜಾರಿಯಾದ ಬಳಿಕ ನರ ಸತ್ತಂತಿರುವ ರಾಜ್ಯಗಳು ತೀವ್ರ ಭಯದಲ್ಲಿದ್ದು, ಅವೂ ಕೂಡಾಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿಲ್ಲ.ರಾಜ್ಯ, ಸಂವಿಧಾನ, ಒಕ್ಕೂಟ ವ್ಯವಸ್ಥೆ ಎಲ್ಲದರ ಸೂತ್ರವನ್ನು ಕಿತ್ತು ಹಾಕಲಾಗಿದೆ. ಇದು ಅತಿ ಕೆಟ್ಟ ಬೆಳವಣಿಗೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.