ಸರ್ಕಾರಿ ಆಸ್ಪತ್ರೆಗಳೇ ಇನ್ನುಮುಂದೆ ಡಯಾಲಿಸಿಸ್ ಘಟಕಗಳನ್ನು ನಿರ್ವಹಿಸಲಿವೆ. ಔಷಧ, ನೀರು, ವಿದ್ಯುತ್ ಸೇರಿದಂತೆ ಡಯಾಲಿಸಿಸ್ ಘಟಕಗಳಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸದೆಯೇ ಬಿಆರ್ಎಸ್ ಏಜೆನ್ಸಿ ಸೇವೆ ಒದಗಿಸುತ್ತಿದೆ ಎಂಬ ದೂರು ಸಲ್ಲಿಕೆಯಾಗಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕ ಚಿತ್ರದುರ್ಗ, ವಿಜಯಪುರ, ಕಲಬುರ್ಗಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಘಟಕಗಳಲ್ಲಿ ಸೇವೆ ವ್ಯತ್ಯಯವಾಗಿತ್ತು. ಕೆಲವು ಘಟಕಗಳು ತಾತ್ಕಾಲಿಕವಾಗಿ ಸ್ಥಗಿತವಾಗಿದ್ದವು.