ರಾಜ್ಯ ಸರ್ಕಾರ ₹ 992 ಕೋಟಿ ವೆಚ್ಚದಲ್ಲಿ 8,100 ಕೊಠಡಿಗಳನ್ನು ನಿರ್ಮಿಸುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲ ಕೊಠಡಿಗಳಿಗೂ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ವಿವೇಕ ಎಂದು ಹೆಸರಿಡಲು ಹಾಗೂ ವಿವೇಕಾನಂದರ ಪರಿಕಲ್ಪನೆಗೆ ಪೂರಕವಾದ ಏಕ ರೂಪದ ಬಣ್ಣ, ಅವರ ಭಾವಚಿತ್ರ, ತತ್ವ, ಸಂದೇಶಗಳನ್ನು ಬರೆಸಲು ಆಲೋಚನೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.