ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪ್ರಜಾಪ್ರಭುತ್ವ ಎಂದರೆ ಬಹುಸಂಖ್ಯಾತರ ಆಡಳಿತ. ಆದರೆ, ಮಠಾಧೀಶರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ತಾವು ಒಂದು ಜಾತಿ, ಕೋಮು ಅಥವಾ ವ್ಯಕ್ತಿಗೆ ಸೀಮಿತವಾದ ಗುರುಗಳಲ್ಲ, ಎಲ್ಲ ಜನರಿಗೂ ಮಾರ್ಗದರ್ಶಕರು ಎಂಬುದನ್ನಾದರೂ ಈ ಸ್ವಾಮೀಜಿಗಳು ತಿಳಿಯಬೇಕು’ ಎಂದಿದ್ದಾರೆ.