ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನಿನ ಮ್ಯುಟೇಷನ್‌ಗೆ ಲಂಚ: ಗುರುಮಠಕಲ್‌ ತಹಶೀಲ್ದಾರ್ ಎಸಿಬಿ ಬಲೆಗೆ, ಬಂಧನ

₹5 ಸಾವಿರ ಲಂಚ ಪಡೆಯುವಾಗ ಕಚೇರಿ ಮೇಲೆ ದಾಳಿ
Last Updated 23 ಫೆಬ್ರುವರಿ 2021, 4:56 IST
ಅಕ್ಷರ ಗಾತ್ರ

ಯಾದಗಿರಿ: ಗುರುಮಠಕಲ್‌ ತಹಶೀಲ್ದಾರ್ ಸಂಗಮೇಶ ಜಿಡಗಿ ಅವರನ್ನು ಜಮೀನಿನ ಮ್ಯುಟೇಷನ್‌ ಬದಲಾವಣೆಗಾಗಿ ₹5 ಸಾವಿರ ಲಂಚ ಪಡೆಯುವಾಗ ಬಂಧಿಸಲಾಗಿದೆ ಎಂದುಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್‌ಪಿಮಹೇಶ ಮೇಘಣ್ಣನವರು ತಿಳಿಸಿದ್ದಾರೆ.

ಅಜಲಾಪುರ ಗ್ರಾಮದ ದೊಡ್ಡಬನ್ನಪ್ಪ ದೂರು ನೀಡಿದ್ದರು. ‘ತಂದೆ ಹೆಸರಿನಲ್ಲಿದ್ದ ಹೊಲವನ್ನು ದೊಡ್ಡಬನ್ನಪ್ಪ ಹೆಸರಿಗೆ ವರ್ಗಾಯಿಸಲು ತಹಶೀಲ್ದಾರ್‌ ಮೊದಲು ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹10 ಸಾವಿರಕ್ಕೆ ಒಪ್ಪಿದ್ದರು. ಸೋಮವಾರ ₹5 ಸಾವಿರ ಪಡೆಯುವಾಗ ಸಿಕ್ಕಿಬಿದ್ದರು‘ ಎಂದು ಹೇಳಿದರು.

‘2020ರ ಫೆಬ್ರುವರಿಯಲ್ಲಿ ಜಮೀನಿನ ಮ್ಯುಟೇಷನ್‌ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದೆ.ಅಂದಿನಿಂದಲೂ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು. ಹೀಗಾಗಿ ಎಸಿಬಿಗೆ ದೂರು ನೀಡಿದೆ’ ಎಂದು ದೂರುದಾರ ದೊಡ್ಡಬನ್ನಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT