<p><strong>ಬೆಂಗಳೂರು</strong>: ಬಡವರ ಹೊಟ್ಟೆ ತುಂಬಿಸುವಾಗ ನಮಗೆ ಅನ್ನಪೂರ್ಣೇಶ್ವರಿ ಕಾಣುತ್ತಾಳೆಯೇ ಹೊರತು ಇಂದಿರಾ ಅಲ್ಲ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.</p>.<p>ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಅವರು, 'ಸಿ.ಟಿ.ರವಿ ಅವರಂತಹ ನಾಯಕರು ಪಕ್ಷ, ಸಂಘಟನೆಯಲ್ಲಿ ತಳಮಟ್ಟದಿಂದ ಕಾರ್ಯಕರ್ತರಾಗಿ ಬೆಳೆದು ಬಂದವರು. ಕುಟುಂಬದ ಸರ್ ನೇಮ್ನಿಂದ ಪಕ್ಷದಲ್ಲಿ ಸ್ಥಾನ ಗಳಿಸಿಕೊಂಡವರಲ್ಲ. ಆದ್ದರಿಂದ, ನಮಗೆ ಬಡವರ ಹೊಟ್ಟೆ ತುಂಬಿಸುವಾಗ ಅನ್ನಪೂರ್ಣೇಶ್ವರಿ ಕಾಣುತ್ತಾಳೆ, ಇಂದಿರಾ ಅಲ್ಲ.' ಎಂದು ತಿಳಿಸಿದ್ದಾರೆ.</p>.<p>ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ, ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸಿ.ಟಿ.ರವಿ ವಿನಂತಿಸಿದ್ದರು.</p>.<p>ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಡವರ ಹೊಟ್ಟೆ ತುಂಬಿಸುವಾಗ ನಮಗೆ ಅನ್ನಪೂರ್ಣೇಶ್ವರಿ ಕಾಣುತ್ತಾಳೆಯೇ ಹೊರತು ಇಂದಿರಾ ಅಲ್ಲ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.</p>.<p>ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ಅವರು, 'ಸಿ.ಟಿ.ರವಿ ಅವರಂತಹ ನಾಯಕರು ಪಕ್ಷ, ಸಂಘಟನೆಯಲ್ಲಿ ತಳಮಟ್ಟದಿಂದ ಕಾರ್ಯಕರ್ತರಾಗಿ ಬೆಳೆದು ಬಂದವರು. ಕುಟುಂಬದ ಸರ್ ನೇಮ್ನಿಂದ ಪಕ್ಷದಲ್ಲಿ ಸ್ಥಾನ ಗಳಿಸಿಕೊಂಡವರಲ್ಲ. ಆದ್ದರಿಂದ, ನಮಗೆ ಬಡವರ ಹೊಟ್ಟೆ ತುಂಬಿಸುವಾಗ ಅನ್ನಪೂರ್ಣೇಶ್ವರಿ ಕಾಣುತ್ತಾಳೆ, ಇಂದಿರಾ ಅಲ್ಲ.' ಎಂದು ತಿಳಿಸಿದ್ದಾರೆ.</p>.<p>ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ, ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸಿ.ಟಿ.ರವಿ ವಿನಂತಿಸಿದ್ದರು.</p>.<p>ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>