<p><strong>ತುಮಕೂರು:</strong> ನಗರದ ಹೊರವಲಯ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು (ಐಐಎಚ್ಆರ್) ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹೊಸ ಹುಣಸೆ ಹಣ್ಣಿನ ತಳಿಯನ್ನು ಗುರುತಿಸಿದೆ.</p>.<p>ಹುಣಸೆ ಬೆಳೆದ`ಲಕ್ಷ್ಮಣ' ಎಂಬ ರೈತನ ಹೆಸರನ್ನೇ ಈ ತಳಿಗೆ ಇಡಲಾಗಿದೆ. ಈ ತಳಿಯ ಹುಣಸೆಯಲ್ಲಿ ತಿರುಳು ಹೆಚ್ಚಾಗಿದ್ದು, ಹುಳಿ ಅಧಿಕ ಪ್ರಮಾಣದಲ್ಲಿರುತ್ತದೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಕರುಣಾಕರನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಹುಣಸೆ ಜತೆ ‘ಶ್ರೀ’ ಎಂಬ ಹೊಸ ತಳಿಯ ಹಲಸಿನ ಹಣ್ಣನ್ನೂ ಪರಿಚಯಿಸಿದೆ ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಐಐಎಚ್ಆರ್ನಲ್ಲಿ ಶನಿವಾರ ಈ ತಳಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ತುಮಕೂರು ತಾಲ್ಲೂಕು ಗೂಳೂರು ಹೋಬಳಿ ಎ.ಕೆ.ಕಾವಲ್ ಗ್ರಾಮದ ರವೀಂದ್ರ ಅವರ ಜಮೀನಿನಲ್ಲಿ ಈ ತಳಿ ಗುರುತಿಸಲಾಗಿದೆ. ಈ ಮರಕ್ಕೆ ಈಗ 12 ವರ್ಷ.</p>.<p class="Subhead"><strong>ಹಲಸಿನ ವೈಶಿಷ್ಟ್ಯ: </strong>ಹಣ್ಣಿನ ತೊಳೆ ಕೆಂಪು ಬಣ್ಣದಿಂದ ಕೂಡಿದ್ದು, ತಿನ್ನಲು ಬಲು ರುಚಿಕರ. ಕೆಂಪು ಬಣ್ಣದ ಹಲಸು ಮೇ ನಂತರ ಹಣ್ಣಾಗುತ್ತದೆ. ಆದರೆ ಹೊಸದಾಗಿ ಗುರುತಿಸಿರುವ ‘ಶ್ರೀ’ ಹಲಸು ಫೆಬ್ರುವರಿ ವೇಳೆಗೆ ಹಣ್ಣಾಗುವುದು ವಿಶೇಷ. ಹಳದಿ, ಬಿಳಿ ಬಣ್ಣದ ಹಲಸು ಮಾರ್ಚ್ ವೇಳೆಗೆ ಹಣ್ಣಾಗುತ್ತದೆ.</p>.<p>‘ಶ್ರೀ ತಳಿಯ ಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ ಪೋಷಕಾಂಶ ಅಧಿಕ ಪ್ರಮಾಣದಲ್ಲಿ ಇದೆ. 100 ಗ್ರಾ ಹಣ್ಣಿನಲ್ಲಿ ಶೇ 8.6ರಷ್ಟು ಈ ಅಂಶ ಇದೆ. ಇದು ಆಂಟಿ ಆಕ್ಸಿಡೆಂಟ್ ಹೊಂದಿದೆ’ ಎಂದು ಕರುಣಾಕರನ್ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈಗಾಗಲೇ ‘ಸಿದ್ದು’ ಹಾಗೂ ‘ಶಂಕರ’ ಹೆಸರಿನಲ್ಲಿ ಕೆಂಪು ಹಲಸಿನ ತಳಿಗಳು ಬಿಡುಗಡೆಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ನಗರದ ಹೊರವಲಯ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು (ಐಐಎಚ್ಆರ್) ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಹೊಸ ಹುಣಸೆ ಹಣ್ಣಿನ ತಳಿಯನ್ನು ಗುರುತಿಸಿದೆ.</p>.<p>ಹುಣಸೆ ಬೆಳೆದ`ಲಕ್ಷ್ಮಣ' ಎಂಬ ರೈತನ ಹೆಸರನ್ನೇ ಈ ತಳಿಗೆ ಇಡಲಾಗಿದೆ. ಈ ತಳಿಯ ಹುಣಸೆಯಲ್ಲಿ ತಿರುಳು ಹೆಚ್ಚಾಗಿದ್ದು, ಹುಳಿ ಅಧಿಕ ಪ್ರಮಾಣದಲ್ಲಿರುತ್ತದೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಕರುಣಾಕರನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಹುಣಸೆ ಜತೆ ‘ಶ್ರೀ’ ಎಂಬ ಹೊಸ ತಳಿಯ ಹಲಸಿನ ಹಣ್ಣನ್ನೂ ಪರಿಚಯಿಸಿದೆ ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಐಐಎಚ್ಆರ್ನಲ್ಲಿ ಶನಿವಾರ ಈ ತಳಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ತುಮಕೂರು ತಾಲ್ಲೂಕು ಗೂಳೂರು ಹೋಬಳಿ ಎ.ಕೆ.ಕಾವಲ್ ಗ್ರಾಮದ ರವೀಂದ್ರ ಅವರ ಜಮೀನಿನಲ್ಲಿ ಈ ತಳಿ ಗುರುತಿಸಲಾಗಿದೆ. ಈ ಮರಕ್ಕೆ ಈಗ 12 ವರ್ಷ.</p>.<p class="Subhead"><strong>ಹಲಸಿನ ವೈಶಿಷ್ಟ್ಯ: </strong>ಹಣ್ಣಿನ ತೊಳೆ ಕೆಂಪು ಬಣ್ಣದಿಂದ ಕೂಡಿದ್ದು, ತಿನ್ನಲು ಬಲು ರುಚಿಕರ. ಕೆಂಪು ಬಣ್ಣದ ಹಲಸು ಮೇ ನಂತರ ಹಣ್ಣಾಗುತ್ತದೆ. ಆದರೆ ಹೊಸದಾಗಿ ಗುರುತಿಸಿರುವ ‘ಶ್ರೀ’ ಹಲಸು ಫೆಬ್ರುವರಿ ವೇಳೆಗೆ ಹಣ್ಣಾಗುವುದು ವಿಶೇಷ. ಹಳದಿ, ಬಿಳಿ ಬಣ್ಣದ ಹಲಸು ಮಾರ್ಚ್ ವೇಳೆಗೆ ಹಣ್ಣಾಗುತ್ತದೆ.</p>.<p>‘ಶ್ರೀ ತಳಿಯ ಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ ಪೋಷಕಾಂಶ ಅಧಿಕ ಪ್ರಮಾಣದಲ್ಲಿ ಇದೆ. 100 ಗ್ರಾ ಹಣ್ಣಿನಲ್ಲಿ ಶೇ 8.6ರಷ್ಟು ಈ ಅಂಶ ಇದೆ. ಇದು ಆಂಟಿ ಆಕ್ಸಿಡೆಂಟ್ ಹೊಂದಿದೆ’ ಎಂದು ಕರುಣಾಕರನ್ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈಗಾಗಲೇ ‘ಸಿದ್ದು’ ಹಾಗೂ ‘ಶಂಕರ’ ಹೆಸರಿನಲ್ಲಿ ಕೆಂಪು ಹಲಸಿನ ತಳಿಗಳು ಬಿಡುಗಡೆಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>