‘ಬಸವಲಿಂಗ ಮಹಾಸ್ವಾಮಿಯವರು ‘ಗಡಿನಾಡು ಶರಣ ಸಾಹಿತ್ಯ’ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಶಂಕರಪ್ಪನವರಿಗೆ 2011 ಮತ್ತು 2017ನೇ ಸಾಲಿನ ಬಾಂಬೆ ಕುಲಾಲ ಸಂಘದ ಉತ್ತಮ ಲೇಖಕ ಪ್ರಶಸ್ತಿ ದೊರೆತಿದೆ. ಇವರು 2019ರ ಮುಳಬಾಗಿಲು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಮಾಮಸಾಬ ಅವರು ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಪ್ರಮೀಳಾದೇವಿ, ಗಿರಿಜಾ ಕಲ್ಯಾಣ, ದಕ್ಷಬ್ರಹ್ಮ ಸೇರಿದಂತೆ ಒಟ್ಟು 225 ಅಧಿಕ ದೊಡ್ಡಾಟಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 250ಕ್ಕೂ ಹೆಚ್ಚು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.