‘ಎರಡು ವರ್ಷಗಳಿಂದ ಕೆಲಸ ಬದಲಾವಣೆಗೆ ಸಂಬಂಧಿಸಿ ಕಡತಗಳು ನಮ್ಮ ಕ್ಷೇತ್ರದಿಂದ ಜಿಲ್ಲಾಧಿಕಾರಿ ಕಚೇರಿಗೂ, ಅಲ್ಲಿಂದ ವಿಧಾನಸೌಧಕ್ಕೂ ಬರುತ್ತವೆ. ಆದರೆ, ಕೆಲಸ ಆಗುವುದಿಲ್ಲ. ವಿಧಾನಸೌಧದಿಂದ ಮತ್ತೆ ವಾಪಸ್ ಬರುತ್ತವೆ. ಎರಡು ವರ್ಷದಿಂದ ಇದೇ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೊಕ್ಕೆ ಹಾಕಿ ಕೂರುತ್ತಾರೆ. ಸಚಿವರ ಗಮನಕ್ಕೂ ಇದು ಬರುವುದಿಲ್ಲ’ ಎಂದು ಕಾಗೇರಿ ಸಿಟ್ಟಿನಿಂದ ನುಡಿದರು. ಪಕ್ಷಭೇದ ಮರೆತು ಸದಸ್ಯರು ಧ್ವನಿಗೂಡಿಸಿದರು.