<p><strong>ಬೆಂಗಳೂರು:</strong> ‘ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಬೇಕೆಂಬ ಬಗ್ಗೆ ವರಿಷ್ಠರು ಎರಡು ದಿನ ಚರ್ಚೆ ಮಾಡಿದ್ದಾರೆ. ಎರಡು ವಿಷಯಗಳ ಬಗ್ಗೆ ಮಾತ್ರ ವರಿಷ್ಠರು ತಿಳಿಸಬೇಕಿದೆ. ಬೆಳಿಗ್ಗೆ 10 ಗಂಟೆಗೆ ತಿಳಿಸುತ್ತೇನೆ ಎಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.</p>.<p>ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ವರಿಷ್ಠರು ಯಾವುದೇ ಸಂದರ್ಭದಲ್ಲಿ ತಿಳಿಸಬಹುದು’ ಎಂದರು.</p>.<p>‘ವರಿಷ್ಠರು ತಿಳಿಸಿದ ತಕ್ಷಣ ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇನೆ. ಸಚಿವರ ಪಟ್ಟಿಯಲ್ಲಿರುವ ಬಗ್ಗೆ 10 ಗಂಟೆಯ ನಂತರ ಶಾಸಕರಿಗೆ ತಿಳಿಸಲಾಗುತ್ತದೆ. ರಾಜಭವನಕ್ಕೆ ಪಟ್ಟಿ ಕಳುಹಿಸಿದ ಬಗ್ಗೆ ನಿಮಗೂ (ಮಾಧ್ಯಮ) ಹೇಳುತ್ತೇನೆ’ ಎಂದರು.</p>.<p><strong>ಇದನ್ನೂ ಓದಿ: </strong><a href="https://www.prajavani.net/karnataka-news/basavaraj-bommai-cabinet-karnataka-new-ministers-live-updates-854538.html#1">Live| ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ; ಇಂದು 11ಕ್ಕೆ ನೂತನ ಸಚಿವರ ಪಟ್ಟಿ ಬಿಡುಗಡೆ </a></p>.<p>ಸಚಿವ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಮತ್ತು ಉಪ ಮಖ್ಯಮಂತ್ರಿ ವಿಚಾರದಲ್ಲಿ ವರಿಷ್ಠರು ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಬೇಕೆಂಬ ಬಗ್ಗೆ ವರಿಷ್ಠರು ಎರಡು ದಿನ ಚರ್ಚೆ ಮಾಡಿದ್ದಾರೆ. ಎರಡು ವಿಷಯಗಳ ಬಗ್ಗೆ ಮಾತ್ರ ವರಿಷ್ಠರು ತಿಳಿಸಬೇಕಿದೆ. ಬೆಳಿಗ್ಗೆ 10 ಗಂಟೆಗೆ ತಿಳಿಸುತ್ತೇನೆ ಎಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.</p>.<p>ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ವರಿಷ್ಠರು ಯಾವುದೇ ಸಂದರ್ಭದಲ್ಲಿ ತಿಳಿಸಬಹುದು’ ಎಂದರು.</p>.<p>‘ವರಿಷ್ಠರು ತಿಳಿಸಿದ ತಕ್ಷಣ ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇನೆ. ಸಚಿವರ ಪಟ್ಟಿಯಲ್ಲಿರುವ ಬಗ್ಗೆ 10 ಗಂಟೆಯ ನಂತರ ಶಾಸಕರಿಗೆ ತಿಳಿಸಲಾಗುತ್ತದೆ. ರಾಜಭವನಕ್ಕೆ ಪಟ್ಟಿ ಕಳುಹಿಸಿದ ಬಗ್ಗೆ ನಿಮಗೂ (ಮಾಧ್ಯಮ) ಹೇಳುತ್ತೇನೆ’ ಎಂದರು.</p>.<p><strong>ಇದನ್ನೂ ಓದಿ: </strong><a href="https://www.prajavani.net/karnataka-news/basavaraj-bommai-cabinet-karnataka-new-ministers-live-updates-854538.html#1">Live| ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ; ಇಂದು 11ಕ್ಕೆ ನೂತನ ಸಚಿವರ ಪಟ್ಟಿ ಬಿಡುಗಡೆ </a></p>.<p>ಸಚಿವ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಮತ್ತು ಉಪ ಮಖ್ಯಮಂತ್ರಿ ವಿಚಾರದಲ್ಲಿ ವರಿಷ್ಠರು ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>