ರಾಜ್ಯದಲ್ಲಿ ನೆರೆ ಸಂಕಷ್ಟದ ವೇಳೆ ಸಂಸದ ತೇಜಸ್ವಿ ಸೂರ್ಯ ಹೋಟೆಲೊಂದರಲ್ಲಿ ಮಸಾಲೆ ದೋಸೆ ತಿನ್ನುತ್ತಿರುವ ಪೋಸ್ಟ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಸೂರ್ಯ ಮನೆಗೆ ಮಸಾಲೆ ದೋಸೆ ತಲುಪಿಸಿ ಪ್ರತಿಭಟಿಸಿದ್ದರು. ಮತ್ತೆ ಆ ಘಟನೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್, ದೋಸೆಪ್ರೇಮಿ ತೇಜಸ್ವಿಯಂತವರಿಗೆ ಹುದ್ದೆ, ಅಧಿಕಾರ ಕೊಡಬಾರದು. ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಉದಾಹರಣೆ ಇದು ಎಂದು ಲೇವಡಿ ಮಾಡಿದೆ.