ಹಿರಿಯೂರು ತಾಲ್ಲೂಕಿನಲ್ಲಿ ಒಂಬತ್ತು ವರ್ಷಗಳ ನಂತರ ಭಾರಿ ಮಳೆ ಸುರಿದಿದ್ದು, ಆಶ್ರಯ ಕಾಲೊನಿ, ಡಿ.ಸಿ ಕಾಲೊನಿಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಿ.ಎಂ ಬಡಾವಣೆಯಲ್ಲಿನ ಎರಡು ಅಂಗನವಾಡಿ ಕೇಂದ್ರಗಳಿಗೆ ನೀರು ನುಗ್ಗಿದ್ದು, ದವಸ– ಧಾನ್ಯ ನೀರು ಪಾಲಾಗಿವೆ. ಕೃಷಿ, ತೋಟಗಾರಿಕೆ ಭೂಮಿಗೂ ನೀರು ನುಗ್ಗಿದ್ದು, ದಾಳಿಂಬೆ, ಬಾಳೆ ಬೆಳೆಗೆ ಹಾನಿಯಾಗಿದೆ.