<p><strong>ಚಿಕ್ಕಬಳ್ಳಾಪುರ:</strong> ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಬಹಳಷ್ಟು ಕುಟುಂಬಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಆಗದಿರುವುದು ಪೆಟ್ಟುಕೊಟ್ಟಿದೆ.</p>.<p>ರಾಜ್ಯದಲ್ಲಿ 9 ಲಕ್ಷ ಉತ್ಪಾದಕರು ನಿತ್ಯ ಸರಾಸರಿ 84 ಲಕ್ಷ ಲೀಟರ್ ಹಾಲನ್ನು ಡೇರಿಗಳಿಗೆ ಪೂರೈಸುತ್ತಾರೆ. ಪ್ರತಿ ಲೀಟರ್ ಹಾಲಿಗೆ ಸರ್ಕಾರ ₹ 5 ಪ್ರೋತ್ಸಾಹ ಧನ ನೀಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ಮೂಲಗಳ ಪ್ರಕಾರ ₹ 400 ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ಸರ್ಕಾರ ಬಿಡುಗಡೆ ಮಾಡಬೇಕಾಗಿದೆ.</p>.<p>‘ಡಿಸೆಂಬರ್ವರೆಗೆ ಪ್ರೋತ್ಸಾಹ ಧನ ಪೂರ್ಣ ಬಿಡುಗಡೆಯಾಗಿದೆ. ಜನವರಿಯಿಂದ ಏಪ್ರಿಲ್ವರೆಗಿನ ಪ್ರೋತ್ಸಾಹ ಧನದ ಬಿಲ್ ಅನ್ನು ಸರ್ಕಾರಕ್ಕೆ ನೀಡಿದ್ದೇವೆ. ಹಣ ಬಿಡುಗಡೆಗೆ ಪತ್ರ ಬರೆದಿದ್ದೇವೆ. ಶೀಘ್ರವೇ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದರು.</p>.<p>ಮತ್ತೆ ನೆರವಿಗೆ ಮೊರೆ: ಕೋವಿಡ್ ಹೆಚ್ಚಳದಿಂದ ಘೋಷಿಸಿರುವ ಲಾಕ್ಡೌನ್ ಬಿಸಿ ಕೆಎಂಎಫ್ಗೆ ತೀವ್ರವಾಗಿ ತಟ್ಟುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಕಳೆದ ವರ್ಷ ಕೆಎಂಎಫ್ ಕೇಂದ್ರ ಸರ್ಕಾರದಿಂದ ₹ 850 ಕೋಟಿ ಸಾಲ ಪಡೆದಿತ್ತು. ಈ ಬಾರಿಯೂ ಮತ್ತೆ ಸಾಲಕ್ಕಾಗಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.</p>.<p>‘ನಿತ್ಯ ಸಂಗ್ರಹವಾಗುವ ಸರಾಸರಿ 84 ಲಕ್ಷ ಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು ಹಾಗೂ 4 ಲಕ್ಷ ಲೀಟರ್ ಮೊಸರು ಮಾರಾಟವಾಗುತ್ತಿದೆ. 34 ಲಕ್ಷ ಲೀಟರ್ ಪೌಡರ್ ಆಗುತ್ತಿದೆ. ಉಳಿದ ಹಾಲು ಇತರೇ ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಕೋವಿಡ್ ಎರಡನೇ ಅಲೆಗೂ ಮುನ್ನ 8 ಲಕ್ಷದಿಂದ 10 ಲಕ್ಷ ಲೀಟರ್ ಹಾಲು ಪೌಡರ್ಗೆ ಬಳಕೆ ಆಗುತ್ತಿತ್ತು. ಸದ್ಯ 16 ಸಾವಿರ ಟನ್ ಪೌಡರ್ ಗೋದಾಮುಗಳಲ್ಲಿ ದಾಸ್ತಾನಿದೆ’ ಎಂದು ಸತೀಶ್ ಮಾಹಿತಿ ನೀಡಿದರು.</p>.<p>‘ಒಂದು ಕೆ.ಜಿ. ಹಾಲಿನ ಪೌಡರ್ ತಯಾರಿಸಲು ₹ 257 ವೆಚ್ಚವಾಗುತ್ತದೆ. ಎಲ್ಲಿಯವರೆಗೆ ಹಾಲಿನ ಪುಡಿ ಅವಶ್ಯಕತೆ ಇರುವುದಿಲ್ಲವೋ ಅಲ್ಲಿಯವರೆಗೆ ಹಣದ ಹರಿವು ಸ್ಥಗಿತವಾಗುತ್ತದೆ. ರೈತರಿಗೆ ಹಣ ಬಟವಾಡೆ ಮಾಡಲು ತೊಂದರೆಯಾಗಬಾರದು ಎಂದು ಕೇಂದ್ರದ ಬಳಿ ಈ ಬಾರಿಯೂ ಸಾಲ ಕೇಳಿದ್ದೇವೆ’ ಎಂದು ಹೇಳಿದರು.</p>.<p><strong>ಹೊರ ರಾಜ್ಯ; ಮಾರಾಟ ಕುಸಿತ</strong></p>.<p>ಲಾಕ್ಡೌನ್ಗೂ ಪೂರ್ವದಲ್ಲಿ ನಿತ್ಯ 7ರಿಂದ 8 ಲಕ್ಷ ಲೀಟರ್ ಹಾಲನ್ನು ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ 70 ಸಾವಿರ ಲೀಟರ್ ಮಾರಾಟವಾಗುತ್ತಿದೆ ಎಂದು ಬಿ.ಸಿ.ಸತೀಶ್ ತಿಳಿಸಿದರು.</p>.<p>ರಾಜ್ಯದಲ್ಲಿನ 1,700 ಹಾಲಿನ ಬೂತ್ಗಳನ್ನು ಸಂಜೆಯವರೆಗೂ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದು ಅನುಕೂಲವಾಗಿದೆ. ಕರ್ನಾಟಕದ ಒಳಗೆ ವಹಿವಾಟಿಗೆ ಸಮಸ್ಯೆ ಆಗಿಲ್ಲ. ಹೊರ ರಾಜ್ಯಗಳ ಮಾರುಕಟ್ಟೆ ಸ್ಥಗಿತವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಬಹಳಷ್ಟು ಕುಟುಂಬಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಆಗದಿರುವುದು ಪೆಟ್ಟುಕೊಟ್ಟಿದೆ.</p>.<p>ರಾಜ್ಯದಲ್ಲಿ 9 ಲಕ್ಷ ಉತ್ಪಾದಕರು ನಿತ್ಯ ಸರಾಸರಿ 84 ಲಕ್ಷ ಲೀಟರ್ ಹಾಲನ್ನು ಡೇರಿಗಳಿಗೆ ಪೂರೈಸುತ್ತಾರೆ. ಪ್ರತಿ ಲೀಟರ್ ಹಾಲಿಗೆ ಸರ್ಕಾರ ₹ 5 ಪ್ರೋತ್ಸಾಹ ಧನ ನೀಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ಮೂಲಗಳ ಪ್ರಕಾರ ₹ 400 ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ಸರ್ಕಾರ ಬಿಡುಗಡೆ ಮಾಡಬೇಕಾಗಿದೆ.</p>.<p>‘ಡಿಸೆಂಬರ್ವರೆಗೆ ಪ್ರೋತ್ಸಾಹ ಧನ ಪೂರ್ಣ ಬಿಡುಗಡೆಯಾಗಿದೆ. ಜನವರಿಯಿಂದ ಏಪ್ರಿಲ್ವರೆಗಿನ ಪ್ರೋತ್ಸಾಹ ಧನದ ಬಿಲ್ ಅನ್ನು ಸರ್ಕಾರಕ್ಕೆ ನೀಡಿದ್ದೇವೆ. ಹಣ ಬಿಡುಗಡೆಗೆ ಪತ್ರ ಬರೆದಿದ್ದೇವೆ. ಶೀಘ್ರವೇ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದರು.</p>.<p>ಮತ್ತೆ ನೆರವಿಗೆ ಮೊರೆ: ಕೋವಿಡ್ ಹೆಚ್ಚಳದಿಂದ ಘೋಷಿಸಿರುವ ಲಾಕ್ಡೌನ್ ಬಿಸಿ ಕೆಎಂಎಫ್ಗೆ ತೀವ್ರವಾಗಿ ತಟ್ಟುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಕಳೆದ ವರ್ಷ ಕೆಎಂಎಫ್ ಕೇಂದ್ರ ಸರ್ಕಾರದಿಂದ ₹ 850 ಕೋಟಿ ಸಾಲ ಪಡೆದಿತ್ತು. ಈ ಬಾರಿಯೂ ಮತ್ತೆ ಸಾಲಕ್ಕಾಗಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.</p>.<p>‘ನಿತ್ಯ ಸಂಗ್ರಹವಾಗುವ ಸರಾಸರಿ 84 ಲಕ್ಷ ಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು ಹಾಗೂ 4 ಲಕ್ಷ ಲೀಟರ್ ಮೊಸರು ಮಾರಾಟವಾಗುತ್ತಿದೆ. 34 ಲಕ್ಷ ಲೀಟರ್ ಪೌಡರ್ ಆಗುತ್ತಿದೆ. ಉಳಿದ ಹಾಲು ಇತರೇ ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಕೋವಿಡ್ ಎರಡನೇ ಅಲೆಗೂ ಮುನ್ನ 8 ಲಕ್ಷದಿಂದ 10 ಲಕ್ಷ ಲೀಟರ್ ಹಾಲು ಪೌಡರ್ಗೆ ಬಳಕೆ ಆಗುತ್ತಿತ್ತು. ಸದ್ಯ 16 ಸಾವಿರ ಟನ್ ಪೌಡರ್ ಗೋದಾಮುಗಳಲ್ಲಿ ದಾಸ್ತಾನಿದೆ’ ಎಂದು ಸತೀಶ್ ಮಾಹಿತಿ ನೀಡಿದರು.</p>.<p>‘ಒಂದು ಕೆ.ಜಿ. ಹಾಲಿನ ಪೌಡರ್ ತಯಾರಿಸಲು ₹ 257 ವೆಚ್ಚವಾಗುತ್ತದೆ. ಎಲ್ಲಿಯವರೆಗೆ ಹಾಲಿನ ಪುಡಿ ಅವಶ್ಯಕತೆ ಇರುವುದಿಲ್ಲವೋ ಅಲ್ಲಿಯವರೆಗೆ ಹಣದ ಹರಿವು ಸ್ಥಗಿತವಾಗುತ್ತದೆ. ರೈತರಿಗೆ ಹಣ ಬಟವಾಡೆ ಮಾಡಲು ತೊಂದರೆಯಾಗಬಾರದು ಎಂದು ಕೇಂದ್ರದ ಬಳಿ ಈ ಬಾರಿಯೂ ಸಾಲ ಕೇಳಿದ್ದೇವೆ’ ಎಂದು ಹೇಳಿದರು.</p>.<p><strong>ಹೊರ ರಾಜ್ಯ; ಮಾರಾಟ ಕುಸಿತ</strong></p>.<p>ಲಾಕ್ಡೌನ್ಗೂ ಪೂರ್ವದಲ್ಲಿ ನಿತ್ಯ 7ರಿಂದ 8 ಲಕ್ಷ ಲೀಟರ್ ಹಾಲನ್ನು ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ 70 ಸಾವಿರ ಲೀಟರ್ ಮಾರಾಟವಾಗುತ್ತಿದೆ ಎಂದು ಬಿ.ಸಿ.ಸತೀಶ್ ತಿಳಿಸಿದರು.</p>.<p>ರಾಜ್ಯದಲ್ಲಿನ 1,700 ಹಾಲಿನ ಬೂತ್ಗಳನ್ನು ಸಂಜೆಯವರೆಗೂ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದು ಅನುಕೂಲವಾಗಿದೆ. ಕರ್ನಾಟಕದ ಒಳಗೆ ವಹಿವಾಟಿಗೆ ಸಮಸ್ಯೆ ಆಗಿಲ್ಲ. ಹೊರ ರಾಜ್ಯಗಳ ಮಾರುಕಟ್ಟೆ ಸ್ಥಗಿತವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>