ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ರಾಯಣ್ಣನ ಪುಣ್ಯಭೂಮಿ. ಇಲ್ಲಿ ಆ ನಾಯಕನ ಪ್ರತಿಮೆ ಪ್ರತಿಷ್ಠಾಪನೆಗೆ ಯಾವುದೇ ದೊಡ್ಡ ನಾಯಕರ ಅನುಮತಿ ಬೇಕಿಲ್ಲ. ಯಾರೋ ವಿವಾದ ಸೃಷ್ಟಿಸಿ ಗಲಭೆ, ಗಲಾಟೆ ಹಾಗೂ ಪುಂಡಾಟಿಕೆ ಮಾಡುವುದು ಬೇಡ ಎಂದು ನಮ್ಮ ಕಾರ್ಯಕರ್ತರೇ ಸ್ಥಾಪಿಸಿದ್ದಾರೆ. ಆದರೆ, ವಿವಾದಕ್ಕೆ ಕಾರಣವಾದವರನ್ನು ಬಗ್ಗು ಬಡಿಯಲೇ ಬೇಕು. ಇಲ್ಲದಿದ್ದಲ್ಲಿ ಆಗಾಗ ಸೃಷ್ಟಿಸುತ್ತಲೇ ಇರುತ್ತಾರೆ. ಅಮಾಯಕ ಯುವಕರನ್ನು ಗಲಾಟೆಗೆ ಪ್ರಚೋದಿಸುತ್ತಿರುತ್ತಾರೆ’ ಎಂದು ದೂರಿದರು.