ಬೆಂಗಳೂರು: ‘ನಮ್ಮ ಕಾಲದಲ್ಲಿ ಈಗಿನ ಅನುವಾದದ ಕಲ್ಪನೆ ಇರಲಿಲ್ಲ. ಅದು ಅನುಕೃತಿಯ ಕಾಲ. ವ್ಯಾಸರ ಮಹಾಭಾರತವನ್ನು ಪಂಪ, ಕುಮಾರವ್ಯಾಸರೂ ಬರೆದಿದ್ದಾರೆ. ಲೆಕ್ಕವಿಲ್ಲದಷ್ಟು ರಾಮಾಯಣಗಳೂ ರಚಿತವಾಗಿವೆ. ಅಷ್ಟೂ ರಾಮಾಯಣಗಳಿಗೆ ಅವರವರೇ ಕರ್ತೃಗಳು. ಒಬ್ಬೊಬ್ಬರೂ ಒಬ್ಬೊಬ್ಬರನ್ನು ಕಥಾ ನಾಯಕರನ್ನಾಗಿ ಚಿತ್ರಿಸಿದ್ದಾರೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.