ಪಠ್ಯಕ್ರಮ ಪರಿಷ್ಕರಣೆ ವಿರೋಧಿಸಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಆ ಪಕ್ಷದವರು ಇನ್ನೊಂದು ವರ್ಷ ಹೋರಾಟದ ಮಾರ್ಗದಲ್ಲೇ ಇರುವುದು ಒಳ್ಳೆಯದು. ಪರಿಷ್ಕರಣೆಯಾಗಿ, ಪಠ್ಯದಲ್ಲಿ ಸರಿಯಾದ ವಿಚಾರಗಳು ಬಂದಾಗ ಚರ್ಚೆಗಳು ಸಹಜ’ ಎಂದು ಸಮರ್ಥಿಸಿಕೊಂಡರು.