21 ಕಾರ್ಮಿಕರನ್ನು ನಾವು ಬಿಡುಗಡೆಗೊಳಿಸಿಲ್ಲ, ಅದು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧಾರವಾಗಿದೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಅವರು ಎಸಿಬಿಗೆ ದೂರು ನೀಡುವ ಮುನ್ನ ಕರಾರು ಪತ್ರವನ್ನು ಒಮ್ಮೆ ಸರಿಯಾಗಿ ಓದಬೇಕಾಗಿತ್ತು. ಕ್ಷುಲ್ಲಕವಾಗಿ ಆರೋಪಿಸಿರುವ ಅವರು ಕೂಡಲೇ ಕ್ಷಮೆ ಯಾಚನೆ ಮಾಡಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.