‘ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದಾಗ ಕೋವಿಡ್ ಪರಿಸ್ಥಿತಿ ತೀವ್ರಗೊಂಡಿತ್ತು. ಸ್ವಿಗ್ಗಿ, ಜೊಮಾಟೊ ಸಿಬ್ಬಂದಿಗೆ ಪಾಸ್ ವಿತರಿಸುವಲ್ಲಿ ಪೊಲೀಸರಿಂದ ಭ್ರಷ್ಟಾಚಾರ ನಡೆದಿರುವುದಾಗಿ ಅಂದಿನ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ನನ್ನ ಮೇಲೆ ಆರೋಪ ಮಾಡಿದರು. ಇದನ್ನು ಕೇಳಿ ಆಘಾತ, ದುಃಖವಾಯಿತು. ತಕ್ಷಣವೇ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಮತ್ತು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವಕಾಶ ನೀಡಲಿಲ್ಲ’ ಎಂದು ಭಾಸ್ಕರರಾವ್ ಹೇಳಿದರು.