‘ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರು ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳಬಾರದು ಎಂಬ ಉದ್ದೇಶದಿಂದ ನ್ಯಾಯಮೂರ್ತಿಗಳು ನ್ಯಾಯಾಂಗ ಇಲಾಖೆಯ ಕಟ್ಟಡಗಳ ಉದ್ಘಾಟನಾ ಸಮಾರಂಭಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುವುದಿಲ್ಲ. ಆದರೆ, ಯಾವುದೇ ಪ್ರಕರಣಗಳು ಇಲ್ಲದ ಜನಪ್ರತಿನಿಧಿಗಳನ್ನಾದರೂ ಆಹ್ವಾನಿಸಬೇಕು ಎಂಬುದು ಹಲವು ಶಾಸಕರ ಬೇಡಿಕೆಯಾಗಿದೆ. ಈ ವಿಷಯವಾಗಿ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಚರ್ಚಿಸುವೆ’ ಎಂದರು.