ಬೀರೂರು: ಇಲ್ಲಿಂದ ಚಿಕ್ಕಮಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಶನಿವಾರ ವಿಭಿನ್ನ ಅನುಭವ ಕಾದಿತ್ತು. ಸಾಮಾನ್ಯವಾಗಿ ಬಸ್ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಬರುವವರು ಕಾಣಿಸುತ್ತಾರೆ. ಆದರೆ, ಬಸ್ನಲ್ಲಿದ್ದ ವ್ಯಕ್ತಿ, ‘ನಾನು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಆಗ ಬಯಸಿದ್ದೇನೆ. ಈ ಕರಪತ್ರ ಓದಿ, ಪುಸ್ತಕದಲ್ಲಿ ನಿಮ್ಮ ಸಹಿ ಹಾಕಿ ಮೊಬೈಲ್ ಸಂಖ್ಯೆ ನಮೂದಿಸಿ. ಹೆಚ್ಚು ಜನರ ಸಹಿ ಮತ್ತು ಅಭಿಪ್ರಾಯ ಸಂಗ್ರಹಿಸಿದರೆ ನಮ್ಮ ಪಕ್ಷದಿಂದ ನನಗೆ ಟಿಕೆಟ್ ಸಿಗುತ್ತದೆ’ ಎನ್ನುವ ಬೇಡಿಕೆ ಇರಿಸಿದಾಗ, ಪ್ರಯಾಣಿಕರು ಕ್ಷಣಕಾಲ ಅಚ್ಚರಿಗೊಂಡರು.