ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಲಬುರಗಿ ಬಿಟ್ಟು ಬೆಂಗಳೂರು, ಬೆಳಗಾವಿಗೆ ಬಂದರೆ ತನಿಖೆ ಚುರುಕಾಗುತ್ತದೆ. ಆಗ ಸರ್ಕಾರದ ಮಟ್ಟದಲ್ಲಿ ಯಾರಿಗೆ ದುಡ್ಡು ಹೋಗಿದೆ ಎಂಬುದು ಗೊತ್ತಾಗುತ್ತದೆ. ಮಧ್ಯವರ್ತಿಗಳಾಗಿರುವ ಆರ್.ಡಿ.ಪಾಟೀಲ, ದಿವ್ಯಾ ಹಾಗರಗಿ ಯಾರ ಪರ ಕೆಲಸ ಮಾಡುತ್ತಿದ್ದರು? ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದು ಯಾರ ಪಾಲಾಗಿದೆ’ ಎಂದು ಪ್ರಶ್ನಿಸಿದರು.