ಸಿ.ಡಿ.ಪ್ರಕರಣ: ಕಾಂಗ್ರೆಸ್ನ ಯುವ ಮುಖಂಡ ನಲಪಾಡ್ ಆಪ್ತನ ಕಾರಿನಲ್ಲಿ ಸಂತ್ರಸ್ತೆ

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಸಂತ್ರಸ್ತೆ, ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಅವರ ಆಪ್ತ ನಫಿ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಸಿಆರ್ಪಿಸಿ 164ರಡಿ ಹೇಳಿಕೆ ದಾಖಲಿಸಲು ಸಂತ್ರಸ್ತೆ ಪರ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಒಪ್ಪಿಗೆ ಸಿಗುತ್ತಿದ್ದಂತೆ ಯುವತಿ ನ್ಯಾಯಾಲಯಕ್ಕೆ ಹಾಜರಾದರು.
ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಸಂತ್ರಸ್ತೆ, ಸೋಮವಾರ ಮಧ್ಯಾಹ್ನವೇ ವಿಮಾನದಲ್ಲಿ ನಗರಕ್ಕೆ ಬಂದಿದ್ದರು.
ಆದರೆ, ಹೇಳಿಕೆ ನೀಡಲು ಸೋಮವಾರ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ, ಅವರು ದೇವನಹಳ್ಳಿ ಬಳಿಯ ಸ್ಥಳವೊಂದರಲ್ಲಿ ಉಳಿದುಕೊಂಡಿದ್ದರು.
ಮಂಗಳವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿತ್ತು. ಅವಾಗಲೇ ನಫಿ ಕಾರಿನಲ್ಲಿ (ಕೆಎ 51 ಎಂಬಿ 7634) ಸಂತ್ರಸ್ತೆ, ವಸಂತನಗರದ ವಿಶೇಷ ನ್ಯಾಯಾಲಯಕ್ಕೆ ಬಂದಿಳಿದರು.
ಹೇಳಿಕೆ ದಾಖಲು ನಂತರ ಅದೇ ಕಾರಿನಲ್ಲಿ ಯುವತಿ, ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗಕ್ಕೆ ಹೋಗಿ ಧ್ವನಿ ಮಾದರಿ ನೀಡಿದರು. ತನಿಖಾಧಿಕಾರಿ ಕವಿತಾ ಅವರ ವಿಚಾರಣೆ ಎದುರಿಸಿದರು. ವಿಚಾರಣೆ ಮುಗಿದ ನಂತರ ನಫಿ ಕಾರಿನಲ್ಲೇ ಯುವತಿ ಹೊರಟು ಹೋದರು.
ನ್ಯಾಯಾಲಯಕ್ಕೆ ಬಂದಿದ್ದ ನಲಪಾಡ್: ಯುವತಿ ಹಾಜರು ಸುದ್ದಿ ಹಾರಿದಾಡುತ್ತಿದ್ದಂತೆ ಮೊಹಮ್ಮದ್ ನಲಪಾಡ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಬಂದಿದ್ದರು.
‘ಯುವತಿಗೆ ನೈತಿಕ ಸ್ಥೈರ್ಯ ನೀಡಲು ನ್ಯಾಯಾಲಯಕ್ಕೆ ಬಂದಿದ್ದೇನೆ. ಅನ್ಯಾಯಕ್ಕೊಳಗಾದ ಯುವತಿ ಪರ ನಾವಿದ್ದೇವೆ’ ಎಂದೂ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇವನ್ನೂ ಓದಿ...
ಮಾಧ್ಯಮಗಳಿಗೆ ಸಂತ್ರಸ್ತೆ ವಿಡಿಯೊ: ಎಸ್ಐಟಿ ವಿರುದ್ಧ ವಕೀಲ ಜಗದೀಶ ಗರಂ
ಸಿಡಿ ಯುವತಿಯ ವಕೀಲರು ಕೆಂಡ ಕಾರಿದ ಬಿಜೆಪಿ ಮುಖಂಡ, ಪೊಲೀಸ್ ಯಾರು ಗೊತ್ತೇ?
ಮಂತ್ರಿಗಳಿಗೆ ಬೇರೆ, ಸಾಮಾನ್ಯರಿಗೆ ಬೇರೆ ಕಾನೂನು ಇದೆಯೇ: ಕಾಂಗ್ರೆಸ್ ಪ್ರಶ್ನೆ
ಕೆಪಿಸಿಸಿ ಕಚೇರಿಯಿಂದಲೇ ಸಿ.ಡಿ.ಪ್ರಕರಣದ ನಿರ್ವಹಣೆ: ಬಿಜೆಪಿ ಆರೋಪ
ಸಂತ್ರಸ್ತೆ ವಿಡಿಯೊ ಹರಿಬಿಟ್ಟ ವಿಚಾರ: ಎಸಿಪಿ ಧರ್ಮೇಂದ್ರ, ಕವಿತಾ ವಿರುದ್ಧ ದೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.