<p><strong>ಬೆಂಗಳೂರು:</strong> ನಗರದ ಡಾ.ನೀರಜ್ ಕಯಾಲ್, ಡಾ.ಚಂದ್ರಶೇಖರ್ ನಾಯರ್ ಮತ್ತು ಪ್ರೊ. ಮಹೇಶ್ ಶಂಕರನ್ ಸೇರಿದಂತೆ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರು ಸಾಧಕರಿಗೆ ಗುರುವಾರ ‘ಇನ್ಫೊಸಿಸ್ ಪ್ರಶಸ್ತಿ–2021’ ನೀಡಿ ಗೌರವಿಸಲಾಯಿತು.</p>.<p>ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.</p>.<p>ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸಲು ‘ಇನ್ಫೊಸಿಸ್ ಸೈನ್ಸ್ ಫೌಂಡೇಷನ್’ (ಐಎಸ್ಎಫ್) ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಯು ತಲಾ ₹75 ಲಕ್ಷ (1 ಲಕ್ಷ ಅಮೆರಿಕನ್ ಡಾಲರ್) ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.</p>.<p>2016ರ ಇನ್ಫೊಸಿಸ್ ಪ್ರಶಸ್ತಿ ಪುರಸ್ಕೃತ, ಸಿಎಂಸಿ ವೆಲ್ಲೂರಿನ ಪ್ರಾಧ್ಯಾಪಕ ಹಾಗೂ ಖ್ಯಾತ ವೈರಾಣು ತಜ್ಞ ಪ್ರೊ.ಗಗನ್ದೀಪ್ ಕಾಂಗ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಈ ವರ್ಷ ಸ್ವೀಕರಿಸಿದ 201 ನಾಮನಿರ್ದೇಶನಗಳಲ್ಲಿ ಆರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯು ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ತಜ್ಞರು ಹಾಗೂ ಪ್ರಾಧ್ಯಾಪಕರನ್ನು ಒಳಗೊಂಡಿತ್ತು.</p>.<p><em><strong>ಪ್ರಶಸ್ತಿ ವಿಜೇತರ ವಿವರ</strong></em></p>.<p><strong><em>ಡಾ.ಚಂದ್ರಶೇಖರ್ ನಾಯರ್</em></strong></p>.<p>ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿನ ಸಾಧನೆಗೆ ಡಾ.ಚಂದ್ರಶೇಖರ್ ನಾಯರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಪಿಸಿಆರ್ ಆಧಾರಿತ ವೈದ್ಯಕೀಯ ತಪಾಸಣೆಗೆ ಬೆಂಗಳೂರಿನ ಮೊಲ್ಬಿಯೋ ಡಯಾಗ್ನಿಸ್ಟಿಕ್ನನಾಯರ್ ಹೊಸ ರೂಪ ನೀಡಿದ್ದಾರೆ. ಕೋವಿಡ್ -19 ಮತ್ತು ಕ್ಷಯರೋಗ ಸೇರಿದಂತೆ ಹಲವು ಸೋಂಕಿತ ಕಾಯಿಲೆಗಳ ತ್ವರಿತ ತಪಾಸಣೆ ಕೈಗೊಳ್ಳುವಲ್ಲಿ ಇದರಿಂದ ಸಹಾಯವಾಗಿದೆ.</p>.<p>ಡಾ. ನಾಯರ್ ಅವರು ಬ್ಯಾಟರಿ-ಚಾಲಿತ, ವೈದ್ಯರು ಬಳಸಬಹುದಾದ ಪಿಸಿಆರ್ ಸಾಧನ ತಯಾರಿಸಿದ್ದಾರೆ. ಇದರಿಂದ, ಒಂದು ಗಂಟೆಯಲ್ಲಿ 30ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಬಹುದಾಗಿದೆ.</p>.<p><strong>ಡಾ.ಏಂಜಲಾ ಬ್ಯಾರೆಟೋ ಕ್ಸೇವಿಯರ್</strong></p>.<p>ಮಾನವೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪೋರ್ಚುಗಲ್ನ ಲಿಸ್ಬನ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಡಾ. ಏಂಜೆಲಾ ಬ್ಯಾರೆಟೊ ಕ್ಸೇವಿಯರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.</p>.<p>ಭಾರತದಲ್ಲಿ, ವಿಶೇಷವಾಗಿ ಗೋವಾದಲ್ಲಿನ ಮತಾಂತರ ಮತ್ತು ಹಿಂಸಾಚಾರದ ಆಳವಾದ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಇಂಗ್ಲಿಷ್ ಮತ್ತು ಪೋರ್ಚುಗೀಸ್ನಲ್ಲಿ ಅವರ ಬರಹಗಳು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ.</p>.<p><strong>ಪ್ರೊ. ಮಹೇಶ್ ಶಂಕರನ್</strong><br /><br />ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (ಎನ್ಸಿಬಿಎಸ್) ಪ್ರೊ. ಮಹೇಶ್ ಶಂಕರನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.</p>.<p>ಉಷ್ಣವಲಯದ ಸವನ್ನಾ ಪರಿಸರ ವಿಜ್ಞಾನದ ಕುರಿತು ಇವರು ಕೈಗೊಂಡ ಅತ್ಯುತ್ತಮ ಸಂಶೋಧನಾ ಕಾರ್ಯಗಳು, ಪಶ್ಚಿಮ ಘಟ್ಟ ಪರಿಸರ ವ್ಯವಸ್ಥೆಗಳು ಮತ್ತು ಭಾರತೀಯ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅವರು ನೀಡಿದ ಕೊಡುಗೆ ಮತ್ತು ಅಧ್ಯಯನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.</p>.<p><strong><em>ಡಾ. ನೀರಜ್ ಕಯಾಲ್:</em></strong></p>.<p>ಗಣಿತ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ಮೈಕ್ರೋಸಾಫ್ಟ್ ಸಂಶೋಧನಾ ಪ್ರಯೋಗಾಲಯದ ಡಾ.ನೀರಜ್ ಕಯಾಲ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>‘ಕಂಪ್ಯೂಟೇಷನಲ್ ಸಂಕೀರ್ಣತೆ’ಗೆ ನೀಡಿರುವ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಗಿದೆ. ಬೀಜಗಣಿತದ ಕಂಪ್ಯೂಟೇಷನ್ನಲ್ಲಿ ಡಾ. ನೀರಜ್ ಅವರು ವಿನೂತನ ಕಾರ್ಯಕೈಗೊಂಡಿದ್ದಾರೆ.</p>.<p><strong>ಪ್ರೊ. ಬೆಡಂಗದಾಸ್ ಮೊಹಾಂತಿ:</strong></p>.<p>ಭೌತವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗಾಗಿ ಭುವನೇಶ್ವರದಲ್ಲಿರುವ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ ಪ್ರೊ. ಬೆಡಂಗದಾಸ್ ಮೊಹಾಂತಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.</p>.<p>ಇವರು ಬ್ರೂಕ್ಹೇವನ್ನ ರಾಷ್ಟ್ರೀಯ ಪ್ರಯೋಗಾಲಯ ಮತ್ತು ಯುರೋಪಿಯನ್ ಪರಮಾಣು ಸಂಶೋಧನೆಯ ಸಂಸ್ಥೆಯಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.</p>.<p><em><strong>ಡಾ. ಪ್ರತೀಕ್ಷಾ ಬಾಕ್ಸಿ</strong></em>:</p>.<p>ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾನೂನು ಮತ್ತು ಆಡಳಿತದ ಆಧ್ಯಯನ ಕೇಂದ್ರದ ಡಾ. ಪ್ರತೀಕ್ಷಾ ಬಾಕ್ಸಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಲೈಂಗಿಕ ಹಿಂಸೆ ಮತ್ತು ನ್ಯಾಯಶಾಸ್ತ್ರದ ಕುರಿತು ಅವರು ವಿಶೇಷ ಅಧ್ಯಯನ ನಡೆಸಿದ್ದಾರೆ. ಜನಾಂಗೀಯ ನೀತಿಗಳು ಕುರಿತು ಸಂಶೋಧನೆ ಕೈಗೊಂಡಿರುವ ಅವರು ಈ ಬಗ್ಗೆ ಅಪಾರ ಅಧ್ಯಯನ ಮತ್ತು ವಿಶ್ಲೇಷಣೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಡಾ.ನೀರಜ್ ಕಯಾಲ್, ಡಾ.ಚಂದ್ರಶೇಖರ್ ನಾಯರ್ ಮತ್ತು ಪ್ರೊ. ಮಹೇಶ್ ಶಂಕರನ್ ಸೇರಿದಂತೆ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರು ಸಾಧಕರಿಗೆ ಗುರುವಾರ ‘ಇನ್ಫೊಸಿಸ್ ಪ್ರಶಸ್ತಿ–2021’ ನೀಡಿ ಗೌರವಿಸಲಾಯಿತು.</p>.<p>ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.</p>.<p>ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸಲು ‘ಇನ್ಫೊಸಿಸ್ ಸೈನ್ಸ್ ಫೌಂಡೇಷನ್’ (ಐಎಸ್ಎಫ್) ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಯು ತಲಾ ₹75 ಲಕ್ಷ (1 ಲಕ್ಷ ಅಮೆರಿಕನ್ ಡಾಲರ್) ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.</p>.<p>2016ರ ಇನ್ಫೊಸಿಸ್ ಪ್ರಶಸ್ತಿ ಪುರಸ್ಕೃತ, ಸಿಎಂಸಿ ವೆಲ್ಲೂರಿನ ಪ್ರಾಧ್ಯಾಪಕ ಹಾಗೂ ಖ್ಯಾತ ವೈರಾಣು ತಜ್ಞ ಪ್ರೊ.ಗಗನ್ದೀಪ್ ಕಾಂಗ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಈ ವರ್ಷ ಸ್ವೀಕರಿಸಿದ 201 ನಾಮನಿರ್ದೇಶನಗಳಲ್ಲಿ ಆರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯು ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ತಜ್ಞರು ಹಾಗೂ ಪ್ರಾಧ್ಯಾಪಕರನ್ನು ಒಳಗೊಂಡಿತ್ತು.</p>.<p><em><strong>ಪ್ರಶಸ್ತಿ ವಿಜೇತರ ವಿವರ</strong></em></p>.<p><strong><em>ಡಾ.ಚಂದ್ರಶೇಖರ್ ನಾಯರ್</em></strong></p>.<p>ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿನ ಸಾಧನೆಗೆ ಡಾ.ಚಂದ್ರಶೇಖರ್ ನಾಯರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಪಿಸಿಆರ್ ಆಧಾರಿತ ವೈದ್ಯಕೀಯ ತಪಾಸಣೆಗೆ ಬೆಂಗಳೂರಿನ ಮೊಲ್ಬಿಯೋ ಡಯಾಗ್ನಿಸ್ಟಿಕ್ನನಾಯರ್ ಹೊಸ ರೂಪ ನೀಡಿದ್ದಾರೆ. ಕೋವಿಡ್ -19 ಮತ್ತು ಕ್ಷಯರೋಗ ಸೇರಿದಂತೆ ಹಲವು ಸೋಂಕಿತ ಕಾಯಿಲೆಗಳ ತ್ವರಿತ ತಪಾಸಣೆ ಕೈಗೊಳ್ಳುವಲ್ಲಿ ಇದರಿಂದ ಸಹಾಯವಾಗಿದೆ.</p>.<p>ಡಾ. ನಾಯರ್ ಅವರು ಬ್ಯಾಟರಿ-ಚಾಲಿತ, ವೈದ್ಯರು ಬಳಸಬಹುದಾದ ಪಿಸಿಆರ್ ಸಾಧನ ತಯಾರಿಸಿದ್ದಾರೆ. ಇದರಿಂದ, ಒಂದು ಗಂಟೆಯಲ್ಲಿ 30ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಬಹುದಾಗಿದೆ.</p>.<p><strong>ಡಾ.ಏಂಜಲಾ ಬ್ಯಾರೆಟೋ ಕ್ಸೇವಿಯರ್</strong></p>.<p>ಮಾನವೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪೋರ್ಚುಗಲ್ನ ಲಿಸ್ಬನ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಡಾ. ಏಂಜೆಲಾ ಬ್ಯಾರೆಟೊ ಕ್ಸೇವಿಯರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.</p>.<p>ಭಾರತದಲ್ಲಿ, ವಿಶೇಷವಾಗಿ ಗೋವಾದಲ್ಲಿನ ಮತಾಂತರ ಮತ್ತು ಹಿಂಸಾಚಾರದ ಆಳವಾದ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಇಂಗ್ಲಿಷ್ ಮತ್ತು ಪೋರ್ಚುಗೀಸ್ನಲ್ಲಿ ಅವರ ಬರಹಗಳು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ.</p>.<p><strong>ಪ್ರೊ. ಮಹೇಶ್ ಶಂಕರನ್</strong><br /><br />ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (ಎನ್ಸಿಬಿಎಸ್) ಪ್ರೊ. ಮಹೇಶ್ ಶಂಕರನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.</p>.<p>ಉಷ್ಣವಲಯದ ಸವನ್ನಾ ಪರಿಸರ ವಿಜ್ಞಾನದ ಕುರಿತು ಇವರು ಕೈಗೊಂಡ ಅತ್ಯುತ್ತಮ ಸಂಶೋಧನಾ ಕಾರ್ಯಗಳು, ಪಶ್ಚಿಮ ಘಟ್ಟ ಪರಿಸರ ವ್ಯವಸ್ಥೆಗಳು ಮತ್ತು ಭಾರತೀಯ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅವರು ನೀಡಿದ ಕೊಡುಗೆ ಮತ್ತು ಅಧ್ಯಯನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.</p>.<p><strong><em>ಡಾ. ನೀರಜ್ ಕಯಾಲ್:</em></strong></p>.<p>ಗಣಿತ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ಮೈಕ್ರೋಸಾಫ್ಟ್ ಸಂಶೋಧನಾ ಪ್ರಯೋಗಾಲಯದ ಡಾ.ನೀರಜ್ ಕಯಾಲ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>‘ಕಂಪ್ಯೂಟೇಷನಲ್ ಸಂಕೀರ್ಣತೆ’ಗೆ ನೀಡಿರುವ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಗಿದೆ. ಬೀಜಗಣಿತದ ಕಂಪ್ಯೂಟೇಷನ್ನಲ್ಲಿ ಡಾ. ನೀರಜ್ ಅವರು ವಿನೂತನ ಕಾರ್ಯಕೈಗೊಂಡಿದ್ದಾರೆ.</p>.<p><strong>ಪ್ರೊ. ಬೆಡಂಗದಾಸ್ ಮೊಹಾಂತಿ:</strong></p>.<p>ಭೌತವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗಾಗಿ ಭುವನೇಶ್ವರದಲ್ಲಿರುವ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಯ ಪ್ರೊ. ಬೆಡಂಗದಾಸ್ ಮೊಹಾಂತಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.</p>.<p>ಇವರು ಬ್ರೂಕ್ಹೇವನ್ನ ರಾಷ್ಟ್ರೀಯ ಪ್ರಯೋಗಾಲಯ ಮತ್ತು ಯುರೋಪಿಯನ್ ಪರಮಾಣು ಸಂಶೋಧನೆಯ ಸಂಸ್ಥೆಯಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.</p>.<p><em><strong>ಡಾ. ಪ್ರತೀಕ್ಷಾ ಬಾಕ್ಸಿ</strong></em>:</p>.<p>ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾನೂನು ಮತ್ತು ಆಡಳಿತದ ಆಧ್ಯಯನ ಕೇಂದ್ರದ ಡಾ. ಪ್ರತೀಕ್ಷಾ ಬಾಕ್ಸಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p>ಲೈಂಗಿಕ ಹಿಂಸೆ ಮತ್ತು ನ್ಯಾಯಶಾಸ್ತ್ರದ ಕುರಿತು ಅವರು ವಿಶೇಷ ಅಧ್ಯಯನ ನಡೆಸಿದ್ದಾರೆ. ಜನಾಂಗೀಯ ನೀತಿಗಳು ಕುರಿತು ಸಂಶೋಧನೆ ಕೈಗೊಂಡಿರುವ ಅವರು ಈ ಬಗ್ಗೆ ಅಪಾರ ಅಧ್ಯಯನ ಮತ್ತು ವಿಶ್ಲೇಷಣೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>