ಈ ಹಿನ್ನೆಲೆಯಲ್ಲಿ ಇದೇ 10ರಂದು ಸಂಜೆ 2–3 ಟ್ರ್ಯಾಕ್ಟರ್ ಬಳಸಿ ಮೋಟಾರ್ ಮೂಲಕ ಕೆರೆ ನೀರನ್ನು ಹೊರಗೆ ಚೆಲ್ಲುವ ಕಾರ್ಯ ಆರಂಭವಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳೀಯ ಪರಿಸರವಾದಿ ಬಿ.ಟಿ. ರಾಜೇಂದ್ರ ಈ ಕಾರ್ಯವನ್ನು ತಡೆದಿದ್ದಾರೆ. ನಂತರ ಗ್ರಾ.ಪಂ. ಪಿಡಿಒ ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ. ವಿಷಯ ಗಂಭೀರ ಆಗುತ್ತಲೇ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದು, ನೀರು ಹೊರ ಚೆಲ್ಲುತ್ತಿದ್ದ ಟ್ರ್ಯಾಕ್ಟರ್ಗಳು ಅಲ್ಲಿಂದ ತೆರಳಿವೆ. ಅಷ್ಟರಲ್ಲಿ ಒಂದಿಷ್ಟು ಪ್ರಮಾಣದ ನೀರು ಹೊರಚೆಲ್ಲಿಯಾಗಿತ್ತು.