ನಾಯಕನಹಟ್ಟಿ: ಪ್ರತಿ ವರ್ಷದಂತೆ ಈ ವರ್ಷವೂಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ಪ್ರಕಾಶ್ ಅವರು ₹ 16 ಲಕ್ಷಕ್ಕೆ ಬಾವುಟವನ್ನು ಹರಾಜಿನಲ್ಲಿ ಪಡೆದರು.
ಕಳೆದ ವರ್ಷ ನಾಯಕನಹಟ್ಟಿ ವಕೀಲ ಎಸ್. ಉಮಾಪತಿ ಎಂಬುವರು ₹ 21 ಲಕ್ಷಕ್ಕೆ ಬಾವುಟವನ್ನು ಪಡೆದಿದ್ದರು. ಸಂಪ್ರದಾಯದಂತೆ ರಥ ಎಳೆಯುವ ಮೊದಲು ಮುಕ್ತಿ ಬಾವುಟ ಹರಾಜು ಮಾಡಲಾಗುತ್ತದೆ.
ಸ್ಥಳೀಯ ಮುಖಂಡರು ₹ 5 ಲಕ್ಷಕ್ಕೆ ಹರಾಜು ಕೂಗಿದ್ದರು. ಜಾತ್ರೆಯಲ್ಲಿ ಮುಕ್ತಿ ಬಾವುಟ ಪಡೆದರೆ ಒಳ್ಳೆಯದಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.