‘ದೊಡ್ಡನಂಜೇಗೌಡ, ಉರಿಗೌಡ ಮುಂತಾದವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತವರು. ಇದಕ್ಕೆ ಟಿಪ್ಪುವಿನ ಧಾರ್ಮಿಕ ಹಾಗೂ ಭಾಷಾ ನೀತಿಯೂ ಕಾರಣವಿರಬೇಕು. ಟಿಪ್ಪು ಅಡಳಿತದ ಎಲ್ಲಾ ಅಂಗಗಳಲ್ಲಿಯೂ ಬರಿಯ ಮುಸಲ್ಮಾನರನ್ನೇ ನೇಮಿಸಿದುದು, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದು ಈ ನೆಲದ ಜನರಲ್ಲಿ ಅಭದ್ರತೆ ಮತ್ತು ಅನುಮಾನಗಳನ್ನು ಬಿತ್ತಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಅನೇಕ ಗೌಡರುಗಳು ಟಿಪ್ಪು ವಿರುದ್ಧ ತಿರುಗಿಬಿದ್ದ ಮತ್ತು ಇಂಗ್ಲೀಷರಿಗೆ ಬೆಂಬಲ ಸೂಚಿಸಿದ ಉದಾರಣೆಗಳಿವೆ’ ಎಂಬ ಉಲ್ಲೇಖ ಲೇಖನದಲ್ಲಿದೆ.