<p><strong>ಬೆಂಗಳೂರು:</strong> ಸಾರಿಗೆ ನೌಕರರ ಮುಷ್ಕರದ ಮೂರನೇ ದಿನ ಪ್ರಯಾಣಿಕರಿಗೆ ಹೆಚ್ಚಾಗಿ ಬಿಸಿ ಮುಟ್ಟುವ ಸಾಧ್ಯತೆ ಇದೆ. ಯುಗಾದಿ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಸಾಲು–ಸಾಲು ರಜೆಗಳಿದ್ದು, ಊರಿಗೆ ಹೋಗುವವರು ಶುಕ್ರವಾರ ಮತ್ತು ಶನಿವಾರ ಪರದಾಡುವ ಸಾಧ್ಯತೆ ಇದೆ.</p>.<p>ಏ.13 ರಂದು ಯುಗಾದಿ ಇದ್ದರೂ ಹಿಂದಿನ ಎರಡು ದಿನ ಮತ್ತು ಮುಂದಿನ ಒಂದು ದಿನ ಸರ್ಕಾರಿ ರಜೆಗಳಿವೆ. ಏ.10 ರಂದು ಎರಡನೇ ಶನಿವಾರ, ಭಾನುವಾರ ರಜೆಗಳಿವೆ. ಮಧ್ಯದಲ್ಲಿ ಸೋಮವಾರ ರಜೆ ಇಲ್ಲ. ಮಂಗಳವಾರ ಯುಗಾದಿ ಮತ್ತು ಬುಧವಾರ ಅಂಬೇಡ್ಕರ್ ಜಯಂತಿ ರಜೆ ಇದೆ.</p>.<p>ಸೋಮವಾರ ಒಂದು ದಿನದ ರಜೆಯನ್ನು ನೌಕರರು ಪಡೆದುಕೊಂಡರೆ ಐದು ದಿನ ಒಟ್ಟಿಗೆ ರಜೆ ಸಿಗಲಿದೆ. ವಾರಾಂತ್ಯ ಮತ್ತು ಯುಗಾದಿ ಆಚರಣೆಗೆ ಬೆಂಗಳೂರಿನ ಜನರು ತಮ್ಮ ಊರುಗಳಿಗೆ ಹೊರಡುವ ಸಾಧ್ಯತೆ ಇದೆ.</p>.<p>ಕಳೆದ ವರ್ಷ ಯುಗಾದಿ ವೇಳೆಗೆ ಕೋವಿಡ್ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅದರ ಹಿಂದಿನ ವರ್ಷದ ಚ್ಚುವರಿಯಾಗಿ 600 ವಿಶೇಷ ಬಸ್ಗಳ ವ್ಯವಸ್ಥೆ ಮಾಡಿತ್ತು. ಈ ವರ್ಷ ನಿತ್ಯ ಬಸ್ಗಳು ಇಲ್ಲದ ಕಾರಣ ಜನರು ಪರದಾಡುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಾರಿಗೆ ನೌಕರರ ಮುಷ್ಕರದ ಮೂರನೇ ದಿನ ಪ್ರಯಾಣಿಕರಿಗೆ ಹೆಚ್ಚಾಗಿ ಬಿಸಿ ಮುಟ್ಟುವ ಸಾಧ್ಯತೆ ಇದೆ. ಯುಗಾದಿ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಸಾಲು–ಸಾಲು ರಜೆಗಳಿದ್ದು, ಊರಿಗೆ ಹೋಗುವವರು ಶುಕ್ರವಾರ ಮತ್ತು ಶನಿವಾರ ಪರದಾಡುವ ಸಾಧ್ಯತೆ ಇದೆ.</p>.<p>ಏ.13 ರಂದು ಯುಗಾದಿ ಇದ್ದರೂ ಹಿಂದಿನ ಎರಡು ದಿನ ಮತ್ತು ಮುಂದಿನ ಒಂದು ದಿನ ಸರ್ಕಾರಿ ರಜೆಗಳಿವೆ. ಏ.10 ರಂದು ಎರಡನೇ ಶನಿವಾರ, ಭಾನುವಾರ ರಜೆಗಳಿವೆ. ಮಧ್ಯದಲ್ಲಿ ಸೋಮವಾರ ರಜೆ ಇಲ್ಲ. ಮಂಗಳವಾರ ಯುಗಾದಿ ಮತ್ತು ಬುಧವಾರ ಅಂಬೇಡ್ಕರ್ ಜಯಂತಿ ರಜೆ ಇದೆ.</p>.<p>ಸೋಮವಾರ ಒಂದು ದಿನದ ರಜೆಯನ್ನು ನೌಕರರು ಪಡೆದುಕೊಂಡರೆ ಐದು ದಿನ ಒಟ್ಟಿಗೆ ರಜೆ ಸಿಗಲಿದೆ. ವಾರಾಂತ್ಯ ಮತ್ತು ಯುಗಾದಿ ಆಚರಣೆಗೆ ಬೆಂಗಳೂರಿನ ಜನರು ತಮ್ಮ ಊರುಗಳಿಗೆ ಹೊರಡುವ ಸಾಧ್ಯತೆ ಇದೆ.</p>.<p>ಕಳೆದ ವರ್ಷ ಯುಗಾದಿ ವೇಳೆಗೆ ಕೋವಿಡ್ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅದರ ಹಿಂದಿನ ವರ್ಷದ ಚ್ಚುವರಿಯಾಗಿ 600 ವಿಶೇಷ ಬಸ್ಗಳ ವ್ಯವಸ್ಥೆ ಮಾಡಿತ್ತು. ಈ ವರ್ಷ ನಿತ್ಯ ಬಸ್ಗಳು ಇಲ್ಲದ ಕಾರಣ ಜನರು ಪರದಾಡುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>