<p>ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದಟ್ಟವಾದ ಅರಣ್ಯ, ವನ್ಯಜೀವಿಗಳು ಹಾಗೂ ಕಾಳಿ ನದಿಯ ವಾಟರ್ ರಾಫ್ಟಿಂಗ್, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯವಾಗಿ ಡಾಂಡೇಲಿಗೆ ಭೇಟಿ ನೀಡುವವರು ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಬೇಕು. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ. </p>.ದಾಂಡೇಲಿ | ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ.ದಾಂಡೇಲಿ: ಬೀಜದ ಉಂಡೆ ಪ್ರಸರಣಾ ಅಭಿಯಾನ.<p>ಸಾಹಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾದ ದಾಂಡೇಲಿ ಹಾರ್ನ್ಬಿಲ್ಗಳ ಪ್ರಮುಖ ತಾಣವಾಗಿದೆ. ದಾಂಡೇಲಿಯ ಕಾಡುಗಳಲ್ಲಿ 4 ಬಗೆಯ ಹಾರ್ನ್ಬಿಲ್ಗಳಿದ್ದು, ಇವು ಇಲ್ಲಿನ ಪ್ರಮುಖ ವನ್ಯಜೀವಿಗಳಾಗಿವೆ. </p><p><strong>ದಾಂಡೇಲಿ ವನ್ಯಜೀವಿ ಅಭಯಾರಣ್ಯ: </strong></p><p>ಕರ್ನಾಟಕದ ಎರಡನೇ ಅತಿ ಡೊಡ್ಡ ಅಭಯಾರಣ್ಯವಾಗಿದೆ. ಕಾಳಿ ನದಿಯ ದಡದಲ್ಲಿ ಈ ಅಭಯಾರಣ್ಯವಿದೆ. ಇಲ್ಲಿನ ಪರಿಸರ ಪ್ರವಾಸಿಗರಿಗೆ ಭಿನ್ನ ಅನುಭವ ನೀಡುತ್ತದೆ. ಈ ಅಭಯಾರಣ್ಯದಲ್ಲಿ ಹುಲಿ, ಆನೆ, ಕಾಡು ನಾಯಿ ಹಾಗೂ ಹಾರ್ನ್ಬಿಲ್ನಂತಹ ವನ್ಯಜೀವಿಗಳಿವೆ. ದಟ್ಟ ಕಾಡಿನಲ್ಲಿ ವಿವಿಧ ಬಗೆಗೆ ಸಸ್ಯವರ್ಗಗಳಿವೆ. ಸುಂದರ ಪರಿಸರದಲ್ಲಿ ಸಮಯ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. </p><p><strong>ಮೌಲಂಗಿ ಉದ್ಯಾನವನ:</strong></p><p>ಮೌಲಂಗಿ ಉದ್ಯಾನವನ ದಾಂಡೇಲಿಯಿಂದ 7 ಕಿ.ಮೀ ದೂರದಲ್ಲಿದೆ. ಈ ಉದ್ಯಾನದಲ್ಲಿ ಬಿದಿರು, ಎತ್ತರವಾದ ಬಂಡೆಗಳು ಹಾಗೂ ಕಾಳಿ ನದಿಯ ದಡವಿದೆ. ಇಲ್ಲಿ ಪ್ರವಾಸಿಗರು ಚಾರಣ, ಬಂಡೆ ಹತ್ತುವುದು, ಬೋಟಿಂಗ್ನಂತಹ ಚಟುವಟಿಕೆ ಮಾಡಬಹುದು. </p><p><strong>ಶಿರೋಲಿ ಶಿಖರ:</strong></p><p>ದಾಂಡೇಲಿ ಪ್ರವಾಸದ ಪ್ರಮುಖ ಆಕರ್ಷಣೆಯಲ್ಲಿ ಶಿರೋಲಿ ಶಿಖರ ಕೂಡಾ ಒಂದಾಗಿದೆ. ಸಹ್ಯಾದ್ರಿ ಶ್ರೇಣಿಯ ಸಾಲಿನಲ್ಲಿರುವ ಈ ಶಿಖರ ಮಂಜಿನಿಂದ ಆವೃತವಾಗಿರುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಇಲ್ಲಿಂದ ನೋಡಬಹುದು. ಜೊತೆಗೆ ಹಚ್ಚ ಹಸಿರು ಶಿಖರಕ್ಕೆ ಇನ್ನಷ್ಟು ಮೇರುಗು ನೀಡುತ್ತದೆ. </p><p><strong>ಸಥೋಡಿ ಜಲಪಾತ:</strong></p><p>ಈ ಜಲಪಾತವನ್ನು ಮಿನಿ ನಯಾಗರಾ ಎಂತಲೂ ಕರೆಯುತ್ತಾರೆ. ಇಲ್ಲಿ15 ಮೀ ಎತ್ತರದಿಂದ ಜಲಪಾತ ಬೀಳುತ್ತದೆ. ಇಲ್ಲಿನ ನೀರಿನಲ್ಲಿ ಈಜಬಹುದು. ಚಿಕ್ಕ ಜಲಪಾತವಾದರೂ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. </p><p><strong>ದಾಂಡೇಲಪ್ಪ ದೇವಸ್ಥಾನ:</strong></p><p>ದಾಂಡೇಲಪ್ಪ ದೇವಸ್ಥಾನವು ಪ್ರಮುಖ ದೇವಾಸ್ಥಾನವಾಗಿದೆ. ಇದು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ದಾಂಡೇಲಿಗೆ ಭೇಟಿ ನೀಡಿದಾಗ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದಟ್ಟವಾದ ಅರಣ್ಯ, ವನ್ಯಜೀವಿಗಳು ಹಾಗೂ ಕಾಳಿ ನದಿಯ ವಾಟರ್ ರಾಫ್ಟಿಂಗ್, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯವಾಗಿ ಡಾಂಡೇಲಿಗೆ ಭೇಟಿ ನೀಡುವವರು ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಬೇಕು. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ. </p>.ದಾಂಡೇಲಿ | ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ.ದಾಂಡೇಲಿ: ಬೀಜದ ಉಂಡೆ ಪ್ರಸರಣಾ ಅಭಿಯಾನ.<p>ಸಾಹಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾದ ದಾಂಡೇಲಿ ಹಾರ್ನ್ಬಿಲ್ಗಳ ಪ್ರಮುಖ ತಾಣವಾಗಿದೆ. ದಾಂಡೇಲಿಯ ಕಾಡುಗಳಲ್ಲಿ 4 ಬಗೆಯ ಹಾರ್ನ್ಬಿಲ್ಗಳಿದ್ದು, ಇವು ಇಲ್ಲಿನ ಪ್ರಮುಖ ವನ್ಯಜೀವಿಗಳಾಗಿವೆ. </p><p><strong>ದಾಂಡೇಲಿ ವನ್ಯಜೀವಿ ಅಭಯಾರಣ್ಯ: </strong></p><p>ಕರ್ನಾಟಕದ ಎರಡನೇ ಅತಿ ಡೊಡ್ಡ ಅಭಯಾರಣ್ಯವಾಗಿದೆ. ಕಾಳಿ ನದಿಯ ದಡದಲ್ಲಿ ಈ ಅಭಯಾರಣ್ಯವಿದೆ. ಇಲ್ಲಿನ ಪರಿಸರ ಪ್ರವಾಸಿಗರಿಗೆ ಭಿನ್ನ ಅನುಭವ ನೀಡುತ್ತದೆ. ಈ ಅಭಯಾರಣ್ಯದಲ್ಲಿ ಹುಲಿ, ಆನೆ, ಕಾಡು ನಾಯಿ ಹಾಗೂ ಹಾರ್ನ್ಬಿಲ್ನಂತಹ ವನ್ಯಜೀವಿಗಳಿವೆ. ದಟ್ಟ ಕಾಡಿನಲ್ಲಿ ವಿವಿಧ ಬಗೆಗೆ ಸಸ್ಯವರ್ಗಗಳಿವೆ. ಸುಂದರ ಪರಿಸರದಲ್ಲಿ ಸಮಯ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. </p><p><strong>ಮೌಲಂಗಿ ಉದ್ಯಾನವನ:</strong></p><p>ಮೌಲಂಗಿ ಉದ್ಯಾನವನ ದಾಂಡೇಲಿಯಿಂದ 7 ಕಿ.ಮೀ ದೂರದಲ್ಲಿದೆ. ಈ ಉದ್ಯಾನದಲ್ಲಿ ಬಿದಿರು, ಎತ್ತರವಾದ ಬಂಡೆಗಳು ಹಾಗೂ ಕಾಳಿ ನದಿಯ ದಡವಿದೆ. ಇಲ್ಲಿ ಪ್ರವಾಸಿಗರು ಚಾರಣ, ಬಂಡೆ ಹತ್ತುವುದು, ಬೋಟಿಂಗ್ನಂತಹ ಚಟುವಟಿಕೆ ಮಾಡಬಹುದು. </p><p><strong>ಶಿರೋಲಿ ಶಿಖರ:</strong></p><p>ದಾಂಡೇಲಿ ಪ್ರವಾಸದ ಪ್ರಮುಖ ಆಕರ್ಷಣೆಯಲ್ಲಿ ಶಿರೋಲಿ ಶಿಖರ ಕೂಡಾ ಒಂದಾಗಿದೆ. ಸಹ್ಯಾದ್ರಿ ಶ್ರೇಣಿಯ ಸಾಲಿನಲ್ಲಿರುವ ಈ ಶಿಖರ ಮಂಜಿನಿಂದ ಆವೃತವಾಗಿರುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಇಲ್ಲಿಂದ ನೋಡಬಹುದು. ಜೊತೆಗೆ ಹಚ್ಚ ಹಸಿರು ಶಿಖರಕ್ಕೆ ಇನ್ನಷ್ಟು ಮೇರುಗು ನೀಡುತ್ತದೆ. </p><p><strong>ಸಥೋಡಿ ಜಲಪಾತ:</strong></p><p>ಈ ಜಲಪಾತವನ್ನು ಮಿನಿ ನಯಾಗರಾ ಎಂತಲೂ ಕರೆಯುತ್ತಾರೆ. ಇಲ್ಲಿ15 ಮೀ ಎತ್ತರದಿಂದ ಜಲಪಾತ ಬೀಳುತ್ತದೆ. ಇಲ್ಲಿನ ನೀರಿನಲ್ಲಿ ಈಜಬಹುದು. ಚಿಕ್ಕ ಜಲಪಾತವಾದರೂ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. </p><p><strong>ದಾಂಡೇಲಪ್ಪ ದೇವಸ್ಥಾನ:</strong></p><p>ದಾಂಡೇಲಪ್ಪ ದೇವಸ್ಥಾನವು ಪ್ರಮುಖ ದೇವಾಸ್ಥಾನವಾಗಿದೆ. ಇದು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ದಾಂಡೇಲಿಗೆ ಭೇಟಿ ನೀಡಿದಾಗ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>