<p>ಅರಣ್ಯ ಸಂಪತ್ತಿನಿಂದ ಸಮೃದ್ದವಾಗಿರುವ ಕರ್ನಾಟಕದಲ್ಲಿ ಹಲವು ಗಿರಿಧಾಮಗಳಿವೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳು ಇಲ್ಲಿ ಕಾಣಸಿಗುತ್ತವೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಕಾರ, ಕರ್ನಾಟಕದ 5 ಗಿರಿ ಶಿಖರಗಳು ಯಾವುವು? ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು ತಿಳಿಯೋಣ.</p><h3>ಮುಳ್ಳಯ್ಯನ ಗಿರಿ: </h3><p>1,930 ಮೀ ಎತ್ತರವಿರುವ ಮುಳ್ಳಯ್ಯನಗಿರಿ ಚಿಕ್ಕಮಗಳೂರಿನ ‘ಚಂದ್ರ ದ್ರೋಣ’ ಬೆಟ್ಟದ ಶ್ರೇಣಿಯಲ್ಲಿದೆ. ಕರ್ನಾಟಕದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ ಸದಾ ಹಸಿರಿನಿಂದ ಕೂಡಿದ ಬೆಟ್ಟವಾಗಿದೆ. ಈ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ 3 ಕಿಮೀ ಚಾರಣ ಮಾಡಬಹುದು. </p><p><strong>ತಲುಪುವುದು ಹೇಗೆ:</strong> ಬೆಂಗಳೂರಿನಿಂದ 300 ಕಿಮೀ, ಮಂಗಳೂರಿನಿಂದ 150 ಕಿಮೀ ದೂರದಲ್ಲಿದೆ. ಚಿಕ್ಕಮಗಳೂರಿಗೆ ರೈಲು ಅಥವಾ ಬಸ್ ಮೂಲಕ ತಲುಪಬಹುದು. ಅಲ್ಲಿಂದ ಬಾಡಿಗೆ ಟ್ಯಾಕ್ಸಿ, ಸ್ವಂತ ವಾಹನಗಳಿಂದ ಮುಳ್ಳಯ್ಯನಗಿರಿಗೆ ತಲುಪಬಹುದು. </p><p><strong>ಭೇಟಿ ನೀಡಲು ಸೂಕ್ತ ಸಮಯ: </strong>ಮಳೆಗಾಲದ ನಂತರ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಚಾರಣಿಗರು ಮಳೆಗಾಲದಲ್ಲೂ ಭೇಟಿ ನೀಡಬಹುದು. </p>.<h3>ಕುದುರೆಮುಖ :</h3><p>ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಕುದುರೆಮುಖವಾಗಿದೆ. 1,894 ಮೀ ಎತ್ತರವಿರುವ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇದರ ಹೆಸರೆ ಹೇಳುವಂತೆ ಶಿಖರವು ಕುದುರೆಯ ಮುಖದ ಆಕಾರವಿದೆ. ಆ ಕಾರಂದಿಂದಲೇ ಕುದುರೆ ಮುಖ ಎಂಬ ಹೆಸರಿದೆ. ಇಲ್ಲಿನ ಪ್ರಕೃತಿ, ವನ್ಯಜೀವಿಗಳು, ಹಸಿರಿನಿಂದ ತುಂಬಿದ ಶ್ರೇಣಿಗಳು ಚಾರಣಿಗರಿಗೆ ಒಳ್ಳೆಯ ಅನುಭವ ನೀಡುತ್ತವೆ.</p><p>ಕುದುರೆಮುಖದಲ್ಲಿ 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಪ್ರತಿ ವ್ಯಕ್ತಿಗೆ ₹600 ಶುಲ್ಕವಿದೆ.</p><p><strong>ತಲುಪುವುದು ಹೇಗೆ:</strong> ಚಿಕ್ಕಮಗಳೂರಿನಲ್ಲಿರುವ ಕುದುರೆಮುಖ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿಮೀ ದೂರದಲ್ಲಿದೆ. ಕುದುರೆಮುಖಕ್ಕೆ ಟ್ಯಾಕ್ಸಿಯ ಮೂಲಕ ತಲುಪಬಹುದು.</p><p><strong>ಭೇಟಿ ನೀಡಲು ಉತ್ತಮ ಸಮಯ:</strong> ಈ ಪ್ರದೇಶ ಹೆಚ್ಚು ತಂಪಾಗಿರುವ ಕಾರಣ ವರ್ಷವಿಡೀ ಭೇಟಿ ನೀಡಬಹುದು. ಮಾರ್ಚ್ನಿಂದ ಅಕ್ಟೋಬರ್ ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. </p>.<h3>ತಡಿಯಾಂಡಮೋಲ್: </h3><p>ಕೊಡಗಿನ ಅತಿ ಎತ್ತರದ ಶಿಖರ ಎಂಬ ಖ್ಯಾತಿಯನ್ನು ತಡಿಯಾಂಡಮೋಲ್ ಪರ್ವತ ಪಡೆದಿದೆ. ಅತ್ಯಂತ ಕಠಿಣವಾದ ಚಾರಣಗಳಲ್ಲಿ ಒಂದಾಗಿದೆ. 1,748 ಮೀ ಎತ್ತರದ ತಡಿಯಾಂಡಮೋಲ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಪರ್ವತವನ್ನು ಅತ್ಯಂತ ಕಠಿಣವಾದ ಚಾರಣ ಸ್ಥಳವೆಂದು ಗುರುತಿಸಲಾಗಿದೆ. </p><p>ಇಲ್ಲಿ ಸುಮಾರು 6 ಕಿಮೀ ಚಾರಣ ಮಾಡಬಹುದು. ಚಾರಣದ ಹಾದಿಯಲ್ಲಿ ಮಂಜು ಮುಸುಕಿದ ಬೆಟ್ಟಗಳು,ಜಲಪಾತ ಮತ್ತು ತೊರೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. </p><p><strong>ತಲುಪುವುದು ಹೇಗೆ:</strong> ಬೆಂಗಳೂರು 250 ಕಿಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 138 ಕಿಮೀ ದೂರದಲ್ಲಿದೆ. ಮೈಸೂರಿನ ಮೂಲಕವೂ ಸಹ ಇಲ್ಲಿಗೆ ತಲುಪಬಹುದು. ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಿಂದ ನೀವು ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ ಮೂಲಕ ಸಹ ಕೊಡಗು ತಲುಪಬಹುದು.</p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ಸೆಪ್ಟೆಂಬರ್ನಿಂದ ಮಾರ್ಚ್ ವರೆಗೆ ಭೇಟಿ ನೀಡುವುದು ಉತ್ತಮವಾಗಿದೆ.</p>.<h3>ಕುಮಾರ ಪರ್ವತ:</h3><p>ಕೊಡಗು ಜಿಲ್ಲೆಯಲ್ಲಿರುವ ಕುಮಾರ ಪರ್ವತವು 1,712 ಮೀಟರ್ ಎತ್ತರವಿದೆ. ಇದು ರಾಜ್ಯದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಇಲ್ಲಿನ ಕಡಿದಾದ ಹಾದಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು ಚಾರಣಿಗರಿಗೆ ಸ್ಮರಣೀಯ ಅನುಭವ ನೀಡುತ್ತವೆ. </p><p>ಈ ಚಾರಣ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದಲ್ಲಿದೆ. ಚಾರಣಿಗರ ಸ್ವರ್ಗ ಎಂತಲೇ ಕುಮರ ಪರ್ವತವನ್ನು ಕರೆಯಲಾಗುತ್ತದೆ. 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಅನುಮತಿ ಪಡೆಯಬೇಕು. ಚಾರಣಕ್ಕೆ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ.</p><p><strong>ತಲುಪುವುದು ಹೇಗೆ:</strong> ಈ ಚಾರಣವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ ಮತ್ತು ಸುಲಭವಾಗಿ ತಲುಪಬಹುದು. ಸಾರಿಗೆ ವಾಹನದ ವ್ಯವಸ್ಥೆ ಇದೆ.</p><p><strong>ಭೇಟಿಗೆ ಉತ್ತಮ ಸಮಯ:</strong> ಮಳೆಗಾಲದ ನಂತರದ ಅವಧಿ ಅಥವಾ ಮಾರ್ಚ್ ನಿಂದ ಅಕ್ಟೋಬರ್ ಸೂಕ್ತವಾಗಿದೆ. </p>.<h3>ಬ್ರಹ್ಮಗಿರಿ ಬೆಟ್ಟಗಳು: </h3><p>ಕೇರಳ ಮತ್ತು ಕರ್ನಾಟಕ ಎರೆಡೂ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದ ಪರ್ವತವಾಗಿದೆ. ಬ್ರಹ್ಮಗಿರಿ ಬೆಟ್ಟವು ಒಂದು ಕಡೆಯಿಂದ ವಯನಾಡ್ ಇನ್ನೊಂದು ಕಡೆಯಿಂದ ಕೂರ್ಗ್ದಿಂದ ಹತ್ತಬಹುದು. 1,608 ಮೀ ಎತ್ತರವಿದೆ.</p><p>ಇಲ್ಲಿ ಸುಮಾರು 3 ರಿಂದ 4 ಕಿಮೀ ಚಾರಣ ಮಾಡಬಹುದಾಗಿದೆ. ಸುಲಭವಾಗಿ ಚಾರಣ ಮಾಡಬಹುದಾದ ಪರ್ವತವಾಗಿದೆ. ಚಾರಣದ ದಾರಿಯಲ್ಲಿ ತಿರುನೆಲ್ಲಿ ದೇವಸ್ಥಾನ, ಮುನಿಕಲ್ ಗುಹೆಗಳು ಮತ್ತು ಇರುಪ್ಪು ಜಲಪಾತಗಳು ಚಾರಣದ ಪ್ರಮುಖ ಆಕರ್ಷಣೆಗಳಾಗಿವೆ. </p><p><strong>ತಲುಪುವುದು ಹೇಗೆ:</strong> ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಿಂದ ಸುಲಭವಾಗಿ ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ಕೊಡಗಿನಿಂದ ಬ್ರಹ್ಮಗಿರಿಯನ್ನು ಸುಲಭವಾಗಿ ತಲುಪಬಹುದು. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೂಲಕ ತಲುಪಬಹುದು. </p><p><strong>ಭೇಟಿ ನೀಡಲು ಉತ್ತಮ ಸಮಯ :</strong> ಅಕ್ಟೋಬರ್ನಿಂದ ಮಾರ್ಚ್ ನಡುವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಣ್ಯ ಸಂಪತ್ತಿನಿಂದ ಸಮೃದ್ದವಾಗಿರುವ ಕರ್ನಾಟಕದಲ್ಲಿ ಹಲವು ಗಿರಿಧಾಮಗಳಿವೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳು ಇಲ್ಲಿ ಕಾಣಸಿಗುತ್ತವೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಕಾರ, ಕರ್ನಾಟಕದ 5 ಗಿರಿ ಶಿಖರಗಳು ಯಾವುವು? ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು ತಿಳಿಯೋಣ.</p><h3>ಮುಳ್ಳಯ್ಯನ ಗಿರಿ: </h3><p>1,930 ಮೀ ಎತ್ತರವಿರುವ ಮುಳ್ಳಯ್ಯನಗಿರಿ ಚಿಕ್ಕಮಗಳೂರಿನ ‘ಚಂದ್ರ ದ್ರೋಣ’ ಬೆಟ್ಟದ ಶ್ರೇಣಿಯಲ್ಲಿದೆ. ಕರ್ನಾಟಕದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ ಸದಾ ಹಸಿರಿನಿಂದ ಕೂಡಿದ ಬೆಟ್ಟವಾಗಿದೆ. ಈ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ 3 ಕಿಮೀ ಚಾರಣ ಮಾಡಬಹುದು. </p><p><strong>ತಲುಪುವುದು ಹೇಗೆ:</strong> ಬೆಂಗಳೂರಿನಿಂದ 300 ಕಿಮೀ, ಮಂಗಳೂರಿನಿಂದ 150 ಕಿಮೀ ದೂರದಲ್ಲಿದೆ. ಚಿಕ್ಕಮಗಳೂರಿಗೆ ರೈಲು ಅಥವಾ ಬಸ್ ಮೂಲಕ ತಲುಪಬಹುದು. ಅಲ್ಲಿಂದ ಬಾಡಿಗೆ ಟ್ಯಾಕ್ಸಿ, ಸ್ವಂತ ವಾಹನಗಳಿಂದ ಮುಳ್ಳಯ್ಯನಗಿರಿಗೆ ತಲುಪಬಹುದು. </p><p><strong>ಭೇಟಿ ನೀಡಲು ಸೂಕ್ತ ಸಮಯ: </strong>ಮಳೆಗಾಲದ ನಂತರ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಚಾರಣಿಗರು ಮಳೆಗಾಲದಲ್ಲೂ ಭೇಟಿ ನೀಡಬಹುದು. </p>.<h3>ಕುದುರೆಮುಖ :</h3><p>ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಕುದುರೆಮುಖವಾಗಿದೆ. 1,894 ಮೀ ಎತ್ತರವಿರುವ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇದರ ಹೆಸರೆ ಹೇಳುವಂತೆ ಶಿಖರವು ಕುದುರೆಯ ಮುಖದ ಆಕಾರವಿದೆ. ಆ ಕಾರಂದಿಂದಲೇ ಕುದುರೆ ಮುಖ ಎಂಬ ಹೆಸರಿದೆ. ಇಲ್ಲಿನ ಪ್ರಕೃತಿ, ವನ್ಯಜೀವಿಗಳು, ಹಸಿರಿನಿಂದ ತುಂಬಿದ ಶ್ರೇಣಿಗಳು ಚಾರಣಿಗರಿಗೆ ಒಳ್ಳೆಯ ಅನುಭವ ನೀಡುತ್ತವೆ.</p><p>ಕುದುರೆಮುಖದಲ್ಲಿ 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಪ್ರತಿ ವ್ಯಕ್ತಿಗೆ ₹600 ಶುಲ್ಕವಿದೆ.</p><p><strong>ತಲುಪುವುದು ಹೇಗೆ:</strong> ಚಿಕ್ಕಮಗಳೂರಿನಲ್ಲಿರುವ ಕುದುರೆಮುಖ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿಮೀ ದೂರದಲ್ಲಿದೆ. ಕುದುರೆಮುಖಕ್ಕೆ ಟ್ಯಾಕ್ಸಿಯ ಮೂಲಕ ತಲುಪಬಹುದು.</p><p><strong>ಭೇಟಿ ನೀಡಲು ಉತ್ತಮ ಸಮಯ:</strong> ಈ ಪ್ರದೇಶ ಹೆಚ್ಚು ತಂಪಾಗಿರುವ ಕಾರಣ ವರ್ಷವಿಡೀ ಭೇಟಿ ನೀಡಬಹುದು. ಮಾರ್ಚ್ನಿಂದ ಅಕ್ಟೋಬರ್ ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. </p>.<h3>ತಡಿಯಾಂಡಮೋಲ್: </h3><p>ಕೊಡಗಿನ ಅತಿ ಎತ್ತರದ ಶಿಖರ ಎಂಬ ಖ್ಯಾತಿಯನ್ನು ತಡಿಯಾಂಡಮೋಲ್ ಪರ್ವತ ಪಡೆದಿದೆ. ಅತ್ಯಂತ ಕಠಿಣವಾದ ಚಾರಣಗಳಲ್ಲಿ ಒಂದಾಗಿದೆ. 1,748 ಮೀ ಎತ್ತರದ ತಡಿಯಾಂಡಮೋಲ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಪರ್ವತವನ್ನು ಅತ್ಯಂತ ಕಠಿಣವಾದ ಚಾರಣ ಸ್ಥಳವೆಂದು ಗುರುತಿಸಲಾಗಿದೆ. </p><p>ಇಲ್ಲಿ ಸುಮಾರು 6 ಕಿಮೀ ಚಾರಣ ಮಾಡಬಹುದು. ಚಾರಣದ ಹಾದಿಯಲ್ಲಿ ಮಂಜು ಮುಸುಕಿದ ಬೆಟ್ಟಗಳು,ಜಲಪಾತ ಮತ್ತು ತೊರೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. </p><p><strong>ತಲುಪುವುದು ಹೇಗೆ:</strong> ಬೆಂಗಳೂರು 250 ಕಿಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 138 ಕಿಮೀ ದೂರದಲ್ಲಿದೆ. ಮೈಸೂರಿನ ಮೂಲಕವೂ ಸಹ ಇಲ್ಲಿಗೆ ತಲುಪಬಹುದು. ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಿಂದ ನೀವು ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ ಮೂಲಕ ಸಹ ಕೊಡಗು ತಲುಪಬಹುದು.</p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ಸೆಪ್ಟೆಂಬರ್ನಿಂದ ಮಾರ್ಚ್ ವರೆಗೆ ಭೇಟಿ ನೀಡುವುದು ಉತ್ತಮವಾಗಿದೆ.</p>.<h3>ಕುಮಾರ ಪರ್ವತ:</h3><p>ಕೊಡಗು ಜಿಲ್ಲೆಯಲ್ಲಿರುವ ಕುಮಾರ ಪರ್ವತವು 1,712 ಮೀಟರ್ ಎತ್ತರವಿದೆ. ಇದು ರಾಜ್ಯದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಇಲ್ಲಿನ ಕಡಿದಾದ ಹಾದಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು ಚಾರಣಿಗರಿಗೆ ಸ್ಮರಣೀಯ ಅನುಭವ ನೀಡುತ್ತವೆ. </p><p>ಈ ಚಾರಣ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದಲ್ಲಿದೆ. ಚಾರಣಿಗರ ಸ್ವರ್ಗ ಎಂತಲೇ ಕುಮರ ಪರ್ವತವನ್ನು ಕರೆಯಲಾಗುತ್ತದೆ. 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಅನುಮತಿ ಪಡೆಯಬೇಕು. ಚಾರಣಕ್ಕೆ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ.</p><p><strong>ತಲುಪುವುದು ಹೇಗೆ:</strong> ಈ ಚಾರಣವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ ಮತ್ತು ಸುಲಭವಾಗಿ ತಲುಪಬಹುದು. ಸಾರಿಗೆ ವಾಹನದ ವ್ಯವಸ್ಥೆ ಇದೆ.</p><p><strong>ಭೇಟಿಗೆ ಉತ್ತಮ ಸಮಯ:</strong> ಮಳೆಗಾಲದ ನಂತರದ ಅವಧಿ ಅಥವಾ ಮಾರ್ಚ್ ನಿಂದ ಅಕ್ಟೋಬರ್ ಸೂಕ್ತವಾಗಿದೆ. </p>.<h3>ಬ್ರಹ್ಮಗಿರಿ ಬೆಟ್ಟಗಳು: </h3><p>ಕೇರಳ ಮತ್ತು ಕರ್ನಾಟಕ ಎರೆಡೂ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದ ಪರ್ವತವಾಗಿದೆ. ಬ್ರಹ್ಮಗಿರಿ ಬೆಟ್ಟವು ಒಂದು ಕಡೆಯಿಂದ ವಯನಾಡ್ ಇನ್ನೊಂದು ಕಡೆಯಿಂದ ಕೂರ್ಗ್ದಿಂದ ಹತ್ತಬಹುದು. 1,608 ಮೀ ಎತ್ತರವಿದೆ.</p><p>ಇಲ್ಲಿ ಸುಮಾರು 3 ರಿಂದ 4 ಕಿಮೀ ಚಾರಣ ಮಾಡಬಹುದಾಗಿದೆ. ಸುಲಭವಾಗಿ ಚಾರಣ ಮಾಡಬಹುದಾದ ಪರ್ವತವಾಗಿದೆ. ಚಾರಣದ ದಾರಿಯಲ್ಲಿ ತಿರುನೆಲ್ಲಿ ದೇವಸ್ಥಾನ, ಮುನಿಕಲ್ ಗುಹೆಗಳು ಮತ್ತು ಇರುಪ್ಪು ಜಲಪಾತಗಳು ಚಾರಣದ ಪ್ರಮುಖ ಆಕರ್ಷಣೆಗಳಾಗಿವೆ. </p><p><strong>ತಲುಪುವುದು ಹೇಗೆ:</strong> ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಿಂದ ಸುಲಭವಾಗಿ ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ಕೊಡಗಿನಿಂದ ಬ್ರಹ್ಮಗಿರಿಯನ್ನು ಸುಲಭವಾಗಿ ತಲುಪಬಹುದು. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೂಲಕ ತಲುಪಬಹುದು. </p><p><strong>ಭೇಟಿ ನೀಡಲು ಉತ್ತಮ ಸಮಯ :</strong> ಅಕ್ಟೋಬರ್ನಿಂದ ಮಾರ್ಚ್ ನಡುವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>