<p>ಬಿಡುವಿಲ್ಲದ ಜೀವನಶೈಲಿ, ಕೆಲಸದ ಒತ್ತಡದಿಂದ ಬಳಲಿರುವ ಬೆಂಗಳೂರಿಗರು ವಾರಾಂತ್ಯದಲ್ಲಿ ನಗರದ ಸಮೀಪದಲ್ಲೇ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ರಿಲ್ಯಾಕ್ಸ್ ಮಾಡಬಹುದಾಗಿದೆ. ಬೆಟ್ಟ, ಜಲಾಶಯ ಮುಂತಾದ ಅಂತಹ ಕೆಲ ಸ್ಥಳಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.</p><p>ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಗಳ ವಿವರ ಇಲ್ಲಿದೆ.</p><p><strong>ನಂದಿ ಬೆಟ್ಟ:</strong> ನಂದಿ ದುರ್ಗ ಎಂದೂ ಕರೆಯಲ್ಪಡುವ ಈ ಬೆಟ್ಟ ಬೆಂಗಳೂರಿನಿಂದ 60 ಕಿ.ಮೀ ದೂರಲಿದೆ. ಖಾಸಗಿ ವಾಹನ ಅಥವಾ ಕ್ಯಾಬ್ ಮೂಲಕ ತಲುಪಬಹುದು. </p>. <p>ನಂದಿ ಬೆಟ್ಟದಿಂದ ಸ್ಕಂದಗಿರಿ , ಬ್ರಹ್ಮಗಿರಿ,ಚನ್ನಕೇಶವ ಬೆಟ್ಟಕ್ಕೆ ಭೇಟಿ ನೀಡಬಹುದು.</p><p>ರಾತ್ರಿ ಅಲ್ಲೆ ಉಳಿಯುವ ಯೋಜನೆ ಇದ್ದರೆ ಸಂಜೆ 5 ಗಂಟೆಗಿಂತ ಮೊದಲು ತಲುಪಿ <a href="https://www.kstdc.co/">www.kstdc.co</a> ವೆಬ್ ಸೈಟ್ ಮೂಲಕ ಬುಕಿಂಗ್ ಮಾಡಬಹುದು.</p><p>ಶಿ<strong>ವಗಂಗೆ ಬೆಟ್ಟ :</strong> ಗವಿ ಗಂಗಾಧರ ಮತ್ತು ಹೊನ್ನದೇವಿ ದೇವಾಲಯ. ನೀರಿನ ಮೂಲಗಳು ಶಿವಗಂಗೆಯಲ್ಲಿ ಉಗಮವಾಗುತ್ತವೆ ಎಂದು ಹೇಳುತ್ತಾರೆ. </p><p>ಶಿವಗಂಗೆ ಬೆಟ್ಟವು ಬೆಂಗಳೂರು ಗ್ರಾಮಾಂತರದಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರಿನಿಂದ ಇದು 50 ಕಿ.ಮೀ ದೂರದಲ್ಲಿದೆ.</p>. <p>ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ಮೂಲಕ ಹೋಗಬಹುದಾಗಿದೆ. ಶಿವಗಂಗೆ ಬೆಟ್ಟ ಅನೇಕ ಪವಾಡಕ್ಕೆ ಹೆಸರುವಾಸಿಯಾಗಿದೆ ಎಂದು ಭಕ್ತರ ನಂಬಿಕೆಯಾಗಿದೆ.</p><p><strong>ಶ್ರೀನಿವಾಸ ಸಾಗರ ಅಣೆಕಟ್ಟು:</strong> ಈ ಸ್ಥಳವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದ್ದು, ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ.</p>. <p>ಈ ಸ್ಥಳಕ್ಕೆ ಹೋಗಬೇಕಾದರೆ ಖಾಸಗಿ ವಾಹನದ ಮೂಲಕ ಹೋಗಬಹುದು.</p><p>ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ – ಡಿಸೆಂಬರ್ ಸಮಯದಲ್ಲಿ ಹೋಗುವುದು ಸೂಕ್ತ ಎಂದು ಪ್ರವಾಸಿಗರ ಅಭಿಪ್ರಾಯವಾಗಿದೆ.</p><p><strong>ಈಶ ಫೌಂಡೇಶನ್ :</strong> </p><p>ಚಿಕ್ಕಬಳ್ಳಾಪುರದಲ್ಲಿ ಇರುವ ಆದಿಯೋಗಿ ಪ್ರತಿಮೆ ನೋಡಿದ ಬಳಿಕ ಯೋಗೀಶ್ವರ ಲಿಂಗ ದೇವಾಲಯ ಮತ್ತು ನಾಗ ಮಂಟಪಕ್ಕೆ ಭೇಟಿ ನೀಡಬಹುದು. </p>.<p>ಈಶ ಫೌಂಡೇಶನ್ಗೆ ಬೆಂಗಳೂರಿನಿಂದ ಕಾರು ಅಥವಾ ಟ್ಯಾಕ್ಸಿಯಲ್ಲಿ ಹೋಗಬಹುದು. ಬಿಎಂಟಿಸಿ ಪ್ರವಾಸಿ ಪ್ಯಾಕೇಜ್ ಮೂಲಕ ತಲುಪಬಹುದಾಗಿದೆ. </p><p>ಚಿಕ್ಕಬಳ್ಳಾಪುರದಲ್ಲಿರುವ ಈಶ ಫೌಂಡೇಶನ್ ಬೆಂಗಳೂರಿನಿಂದ 71 ಕಿ.ಮೀ ದೂರದಲ್ಲಿದೆ.</p><p><strong>ಜಕ್ಕಲ ಮಡಗು ಅಣೆಕಟ್ಟು:</strong> ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರನ್ನು ಒದಗಿಸುವ ಒಂದು ಜಲಾಶಯವಾಗಿದೆ. </p>. <p>ಅಣೆಕಟ್ಟು ತುಂಬಿದಾಗ ಕೋಡಿ ಹರಿಯುವುದನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಹೋಗುತ್ತಾರೆ. </p><p>ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಕಾರು ಅಥವಾ ಟ್ಯಾಕ್ಸಿ ಬಳಸಿ ಹೋಗಬಹುದಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಡುವಿಲ್ಲದ ಜೀವನಶೈಲಿ, ಕೆಲಸದ ಒತ್ತಡದಿಂದ ಬಳಲಿರುವ ಬೆಂಗಳೂರಿಗರು ವಾರಾಂತ್ಯದಲ್ಲಿ ನಗರದ ಸಮೀಪದಲ್ಲೇ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ರಿಲ್ಯಾಕ್ಸ್ ಮಾಡಬಹುದಾಗಿದೆ. ಬೆಟ್ಟ, ಜಲಾಶಯ ಮುಂತಾದ ಅಂತಹ ಕೆಲ ಸ್ಥಳಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.</p><p>ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಗಳ ವಿವರ ಇಲ್ಲಿದೆ.</p><p><strong>ನಂದಿ ಬೆಟ್ಟ:</strong> ನಂದಿ ದುರ್ಗ ಎಂದೂ ಕರೆಯಲ್ಪಡುವ ಈ ಬೆಟ್ಟ ಬೆಂಗಳೂರಿನಿಂದ 60 ಕಿ.ಮೀ ದೂರಲಿದೆ. ಖಾಸಗಿ ವಾಹನ ಅಥವಾ ಕ್ಯಾಬ್ ಮೂಲಕ ತಲುಪಬಹುದು. </p>. <p>ನಂದಿ ಬೆಟ್ಟದಿಂದ ಸ್ಕಂದಗಿರಿ , ಬ್ರಹ್ಮಗಿರಿ,ಚನ್ನಕೇಶವ ಬೆಟ್ಟಕ್ಕೆ ಭೇಟಿ ನೀಡಬಹುದು.</p><p>ರಾತ್ರಿ ಅಲ್ಲೆ ಉಳಿಯುವ ಯೋಜನೆ ಇದ್ದರೆ ಸಂಜೆ 5 ಗಂಟೆಗಿಂತ ಮೊದಲು ತಲುಪಿ <a href="https://www.kstdc.co/">www.kstdc.co</a> ವೆಬ್ ಸೈಟ್ ಮೂಲಕ ಬುಕಿಂಗ್ ಮಾಡಬಹುದು.</p><p>ಶಿ<strong>ವಗಂಗೆ ಬೆಟ್ಟ :</strong> ಗವಿ ಗಂಗಾಧರ ಮತ್ತು ಹೊನ್ನದೇವಿ ದೇವಾಲಯ. ನೀರಿನ ಮೂಲಗಳು ಶಿವಗಂಗೆಯಲ್ಲಿ ಉಗಮವಾಗುತ್ತವೆ ಎಂದು ಹೇಳುತ್ತಾರೆ. </p><p>ಶಿವಗಂಗೆ ಬೆಟ್ಟವು ಬೆಂಗಳೂರು ಗ್ರಾಮಾಂತರದಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರಿನಿಂದ ಇದು 50 ಕಿ.ಮೀ ದೂರದಲ್ಲಿದೆ.</p>. <p>ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ಮೂಲಕ ಹೋಗಬಹುದಾಗಿದೆ. ಶಿವಗಂಗೆ ಬೆಟ್ಟ ಅನೇಕ ಪವಾಡಕ್ಕೆ ಹೆಸರುವಾಸಿಯಾಗಿದೆ ಎಂದು ಭಕ್ತರ ನಂಬಿಕೆಯಾಗಿದೆ.</p><p><strong>ಶ್ರೀನಿವಾಸ ಸಾಗರ ಅಣೆಕಟ್ಟು:</strong> ಈ ಸ್ಥಳವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದ್ದು, ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ.</p>. <p>ಈ ಸ್ಥಳಕ್ಕೆ ಹೋಗಬೇಕಾದರೆ ಖಾಸಗಿ ವಾಹನದ ಮೂಲಕ ಹೋಗಬಹುದು.</p><p>ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ – ಡಿಸೆಂಬರ್ ಸಮಯದಲ್ಲಿ ಹೋಗುವುದು ಸೂಕ್ತ ಎಂದು ಪ್ರವಾಸಿಗರ ಅಭಿಪ್ರಾಯವಾಗಿದೆ.</p><p><strong>ಈಶ ಫೌಂಡೇಶನ್ :</strong> </p><p>ಚಿಕ್ಕಬಳ್ಳಾಪುರದಲ್ಲಿ ಇರುವ ಆದಿಯೋಗಿ ಪ್ರತಿಮೆ ನೋಡಿದ ಬಳಿಕ ಯೋಗೀಶ್ವರ ಲಿಂಗ ದೇವಾಲಯ ಮತ್ತು ನಾಗ ಮಂಟಪಕ್ಕೆ ಭೇಟಿ ನೀಡಬಹುದು. </p>.<p>ಈಶ ಫೌಂಡೇಶನ್ಗೆ ಬೆಂಗಳೂರಿನಿಂದ ಕಾರು ಅಥವಾ ಟ್ಯಾಕ್ಸಿಯಲ್ಲಿ ಹೋಗಬಹುದು. ಬಿಎಂಟಿಸಿ ಪ್ರವಾಸಿ ಪ್ಯಾಕೇಜ್ ಮೂಲಕ ತಲುಪಬಹುದಾಗಿದೆ. </p><p>ಚಿಕ್ಕಬಳ್ಳಾಪುರದಲ್ಲಿರುವ ಈಶ ಫೌಂಡೇಶನ್ ಬೆಂಗಳೂರಿನಿಂದ 71 ಕಿ.ಮೀ ದೂರದಲ್ಲಿದೆ.</p><p><strong>ಜಕ್ಕಲ ಮಡಗು ಅಣೆಕಟ್ಟು:</strong> ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರನ್ನು ಒದಗಿಸುವ ಒಂದು ಜಲಾಶಯವಾಗಿದೆ. </p>. <p>ಅಣೆಕಟ್ಟು ತುಂಬಿದಾಗ ಕೋಡಿ ಹರಿಯುವುದನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಹೋಗುತ್ತಾರೆ. </p><p>ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಕಾರು ಅಥವಾ ಟ್ಯಾಕ್ಸಿ ಬಳಸಿ ಹೋಗಬಹುದಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>