ಭಾರತ–ಚೀನಾ ನಡುವೆ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಮೆಕ್ಮೋಹನ್ ರೇಖೆಯ ಉದ್ದಕ್ಕೂ ಇದರ ಪ್ರಭಾವ ಕಂಡುಬರುತ್ತಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಹಾದುಹೋಗಿರುವ ಗಡಿರೇಖೆಯ ಗ್ರಾಮಸ್ಥರು ಊರುಗಳನ್ನು ತೊರೆಯುತ್ತಿದ್ದಾರೆ. ಜಿಲ್ಲಾಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿರುವ ಟಕ್ಸಂಗ್ ಎಂಬ ಗ್ರಾಮದ ಜನರು ಇತ್ತೀಚೆಗೆ ಊರು ತೊರೆದು ಸುರಕ್ಷಿತ ಸ್ಥಳಗಳಗೆ ತೆರಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.