<p><strong>ತಿರುವನಂತಪುರ</strong>: ಕೇರಳದಲ್ಲಿ ನಟಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಆರು ಜನರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಎರ್ನಾಕುಲಂನ ನ್ಯಾಯಾಲಯವೊಂದು ಶುಕ್ರವಾರ ವಿಧಿಸಿದೆ. </p>.<p>ಸುನಿಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಹಾಗೂ ಮಾರ್ಟಿನ್ ಆಂಟನಿ, ಮಣಿಕಂಠನ್ ಬಿ, ವಿಜೇಶ್ ವಿ.ಪಿ, ಸಲೀಂ ಎಚ್. ಮತ್ತು ಪ್ರದೀಪ್ ಶಿಕ್ಷೆಗೊಳಗಾದವರು. ಇದೇ ಪ್ರಕರಣದಲ್ಲಿ ಡಿಸೆಂಬರ್ 8ರಂದು ನಟ ದಿಲೀಪ್ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.</p>.<p class="title">ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಈ ತೀರ್ಪು ನೀಡಿದ್ದು, ‘ನ್ಯಾಯಾಲಯದ ತೀರ್ಪು ಯಾವುದೇ ಸಾರ್ವಜನಿಕ ಚರ್ಚೆಗಳಿಂದ ಪ್ರಭಾವಿತಗೊಂಡಿಲ್ಲ. ಆದರೆ ತಪ್ಪಿತಸ್ಥರ ವಯಸ್ಸು ಮತ್ತು ಅವರ ಕುಟುಂಬವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.</p>.<p class="title">ನ್ಯಾಯಾಲಯದ ಕಲಾಪಗಳನ್ನು ತಿರುಚಿ ವರದಿ ಮಾಡುವ ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು, ‘ನ್ಯಾಯಾಂಗ ವ್ಯವಸ್ಥೆಯನ್ನು ಹಾಳುಮಾಡುವ ಇಂತಹ ವರದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p class="title">2017ರ ಫೆಬ್ರುವರಿ 17ರಂದು ನಟಿಯನ್ನು ಅಪಹರಿಸಿದ್ದ ಸುನಿಲ್ ನೇತೃತ್ವದ ತಂಡ ಚಲಿಸುವ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿತ್ತು. ಮರುದಿನ ನಟಿ ದೂರು ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳದಲ್ಲಿ ನಟಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಆರು ಜನರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಎರ್ನಾಕುಲಂನ ನ್ಯಾಯಾಲಯವೊಂದು ಶುಕ್ರವಾರ ವಿಧಿಸಿದೆ. </p>.<p>ಸುನಿಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಹಾಗೂ ಮಾರ್ಟಿನ್ ಆಂಟನಿ, ಮಣಿಕಂಠನ್ ಬಿ, ವಿಜೇಶ್ ವಿ.ಪಿ, ಸಲೀಂ ಎಚ್. ಮತ್ತು ಪ್ರದೀಪ್ ಶಿಕ್ಷೆಗೊಳಗಾದವರು. ಇದೇ ಪ್ರಕರಣದಲ್ಲಿ ಡಿಸೆಂಬರ್ 8ರಂದು ನಟ ದಿಲೀಪ್ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.</p>.<p class="title">ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಈ ತೀರ್ಪು ನೀಡಿದ್ದು, ‘ನ್ಯಾಯಾಲಯದ ತೀರ್ಪು ಯಾವುದೇ ಸಾರ್ವಜನಿಕ ಚರ್ಚೆಗಳಿಂದ ಪ್ರಭಾವಿತಗೊಂಡಿಲ್ಲ. ಆದರೆ ತಪ್ಪಿತಸ್ಥರ ವಯಸ್ಸು ಮತ್ತು ಅವರ ಕುಟುಂಬವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.</p>.<p class="title">ನ್ಯಾಯಾಲಯದ ಕಲಾಪಗಳನ್ನು ತಿರುಚಿ ವರದಿ ಮಾಡುವ ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು, ‘ನ್ಯಾಯಾಂಗ ವ್ಯವಸ್ಥೆಯನ್ನು ಹಾಳುಮಾಡುವ ಇಂತಹ ವರದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p class="title">2017ರ ಫೆಬ್ರುವರಿ 17ರಂದು ನಟಿಯನ್ನು ಅಪಹರಿಸಿದ್ದ ಸುನಿಲ್ ನೇತೃತ್ವದ ತಂಡ ಚಲಿಸುವ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿತ್ತು. ಮರುದಿನ ನಟಿ ದೂರು ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>