<p><strong>ಬಹರಿಚ್:</strong> ಇತ್ತೀಚೆಗೆ ಭಾರಿ ಕೋಮು ಸಂಘರ್ಷಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್ನಲ್ಲಿ ದೇಶಕ್ಕೆ ಮಾದರಿಯಾಗುವಂತಹ ಸಾಮರಸ್ಯದ ಘಟನೆಯೊಂದು ಹಲವು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. </p><p>ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 18 ವರ್ಷಗಳಿಂದ ಹಿಂದೂ ದೇಗುಲದ ಅಧ್ಯಕ್ಷರಾಗಿ, ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಾಮರಸ್ಯದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಹಮ್ಮದ್ ಅಲಿ ಎಂಬವರು ದೇಗುಲದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.</p>.ಗಣೇಶೋತ್ಸವದಲ್ಲಿ ಅನ್ನಸಂತರ್ಪಣೆ: ಭಾವೈಕ್ಯ ಮೆರೆದ ಮುಸ್ಲಿಮರು.<p>ಬಹರಿಚ್ ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದಲ್ಲಿ ಇರುವ ಜೈತಾಪುರದಲ್ಲಿರುವ ವೃದ್ಧ ಮಾತೇಶ್ವರಿ ಮಾತಾ ಗೃಹದೇವಿ ದೇಗುಲದ ಉಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಈ ದೇಗುಲಕ್ಕೆ ಜಮೀನನ್ನು ಮುಸಲ್ಮಾನ ವ್ಯಕ್ತಿಯೊಬ್ಬರು ದಾನ ನೀಡಿದ್ದಾರೆ.</p><p>ಇಸ್ಲಾಮಿನ ಆಚರಣೆಗಳಾದ ಉಪವಾಸ, ನಮಾಜ್ ಅನ್ನು ನಿರ್ವಹಿಸುವುದರ ಜೊತೆಗೆ 58ದ ವರ್ಷ ಅಲಿ, ಗೃಹದೇವಿ ಹಾಗೂ ಹನುಮಂತನ ಆರಾಧನೆಯನ್ನೂ ಮಾಡುತ್ತಾರೆ. </p><p>‘ 7 ವರ್ಷದವನಾಗಿದ್ದಾಗ ನನಗೆ ತೊನ್ನು ರೋಗ ಬಾಧಿಸಿತ್ತು. ಇದರಿಂದ ನನ್ನ ಕಣ್ಣು ಬಿಳಿಯಾಗಿತ್ತು. ನನ್ನ ತಾಯಿ ಈ ದೇಗುಲಕ್ಕೆ ಕರೆದುಕೊಂಡು ಬಂದ ಬಳಿಕ ರೋಗ ವಾಸಿಯಾಯಿತು. ಹೀಗಾಗಿ ಈ ದೇಗುಲದೊಂದಿಗೆ ನಂಟು ಬೆಳೆಯಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.</p>.ಬೀಳಗಿ: ಭಾವೈಕ್ಯ ಸಾರುವ ಬಾಡಗಂಡಿ ದರ್ಗಾ.<p>‘2007ರಲ್ಲಿ ದೇವಿ ಕನಸಿನಲ್ಲಿ ಬಂದು ದೇಗುಲ ಸೇವೆ ಮಾಡಲು ನಿರ್ದೇಶಿಸಿದಳು. ಅಂದಿನಿಂದ ನಿತ್ಯ ದೇಗುಲದಲ್ಲಿ ಸೇವೆ ಮಾಡಲು ಆರಂಭಿಸಿದೆ’ ಎಂದು ಅಲಿ ಹೇಳಿದ್ದಾರೆ.</p><p>ಅಲಿ ಅವರ ನೇತೃತ್ವದಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುಗ್ಗಿ ಕಾಲದಲ್ಲಿ ಧಾನ್ಯ ಸಂಗ್ರಹಣೆ, ನಿಧಿ ಸಂಗ್ರಹಣೆಯಂತಹ ಉಪಕ್ರಮಗಳು ಗಮನಾರ್ಹ ಸಂಪನ್ಮೂಲಗಳನ್ನು ಸೃಷ್ಟಿಸಿವೆ. ಈ ವರ್ಷವೇ ದೇವಾಲಯದ ಅಭಿವೃದ್ಧಿಗೆ ₹ 2.7 ಲಕ್ಷ ಸಂಗ್ರಹಿಸಲಾಗಿದೆ ಎಂದು ಅಲಿ ತಿಳಿಸಿದ್ದಾರೆ.</p>.ಇಟಗಾ: ಕೋಟಿಲಿಂಗೇಶ್ವರ ಶಿವ ಶರಣರ ಪ್ರತಿಮೆಗಳ ಭಾವೈಕ್ಯ ತಾಣ. <p>ಸಾರ್ವಜನಿಕರ ದೇಣಿಗೆ ಮತ್ತು ಸರ್ಕಾರದ ಅನುದಾನ ಸೇರಿ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗಾಗಿ ₹30.40 ಲಕ್ಷ ಖರ್ಚು ಮಾಡಲಾಗಿದೆ. ಇತ್ತೀಚೆಗೆ, ಜೈಪುರದಿಂದ ತರಿಸಲಾದ ₹ 2.5 ಲಕ್ಷ ವೆಚ್ಚದ 5.5 ಅಡಿ ಹನುಂತನದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಐದು ದಿನ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು ಎಂದು ಅಲಿ ಹೇಳಿದ್ದಾರೆ. </p><p>ಧರ್ಮ, ಲಿಂಗದ ಗೋಡೆಯನ್ನು ಮೀರಿ ಜನ ಈ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ನಾನು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡನ್ನೂ ಗೌರವಿಸುತ್ತೇನೆ. ದೇವಸ್ಥಾನಕ್ಕೆ ಸೇವೆ ಸಲ್ಲಿಸುವುದು ನನ್ನ ಭಕ್ತಿ ಮತ್ತು ಕೋಮು ಸೌಹಾರ್ದತೆಗೆ ಬಗ್ಗೆ ಇರುವ ನನ್ನ ಬದ್ಧತೆಯ ಪ್ರತೀಕ ಎನ್ನುವುದು ಅಲಿಯವರ ಮಾತು.</p> .ಮಂಗಳೂರು | 'ಭಾವೈಕ್ಯ ದೀಪಾವಳಿಯಲ್ಲಿ ಕುಣಿತ ಭಜನೆ'.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹರಿಚ್:</strong> ಇತ್ತೀಚೆಗೆ ಭಾರಿ ಕೋಮು ಸಂಘರ್ಷಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್ನಲ್ಲಿ ದೇಶಕ್ಕೆ ಮಾದರಿಯಾಗುವಂತಹ ಸಾಮರಸ್ಯದ ಘಟನೆಯೊಂದು ಹಲವು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. </p><p>ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 18 ವರ್ಷಗಳಿಂದ ಹಿಂದೂ ದೇಗುಲದ ಅಧ್ಯಕ್ಷರಾಗಿ, ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಾಮರಸ್ಯದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಹಮ್ಮದ್ ಅಲಿ ಎಂಬವರು ದೇಗುಲದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.</p>.ಗಣೇಶೋತ್ಸವದಲ್ಲಿ ಅನ್ನಸಂತರ್ಪಣೆ: ಭಾವೈಕ್ಯ ಮೆರೆದ ಮುಸ್ಲಿಮರು.<p>ಬಹರಿಚ್ ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದಲ್ಲಿ ಇರುವ ಜೈತಾಪುರದಲ್ಲಿರುವ ವೃದ್ಧ ಮಾತೇಶ್ವರಿ ಮಾತಾ ಗೃಹದೇವಿ ದೇಗುಲದ ಉಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಈ ದೇಗುಲಕ್ಕೆ ಜಮೀನನ್ನು ಮುಸಲ್ಮಾನ ವ್ಯಕ್ತಿಯೊಬ್ಬರು ದಾನ ನೀಡಿದ್ದಾರೆ.</p><p>ಇಸ್ಲಾಮಿನ ಆಚರಣೆಗಳಾದ ಉಪವಾಸ, ನಮಾಜ್ ಅನ್ನು ನಿರ್ವಹಿಸುವುದರ ಜೊತೆಗೆ 58ದ ವರ್ಷ ಅಲಿ, ಗೃಹದೇವಿ ಹಾಗೂ ಹನುಮಂತನ ಆರಾಧನೆಯನ್ನೂ ಮಾಡುತ್ತಾರೆ. </p><p>‘ 7 ವರ್ಷದವನಾಗಿದ್ದಾಗ ನನಗೆ ತೊನ್ನು ರೋಗ ಬಾಧಿಸಿತ್ತು. ಇದರಿಂದ ನನ್ನ ಕಣ್ಣು ಬಿಳಿಯಾಗಿತ್ತು. ನನ್ನ ತಾಯಿ ಈ ದೇಗುಲಕ್ಕೆ ಕರೆದುಕೊಂಡು ಬಂದ ಬಳಿಕ ರೋಗ ವಾಸಿಯಾಯಿತು. ಹೀಗಾಗಿ ಈ ದೇಗುಲದೊಂದಿಗೆ ನಂಟು ಬೆಳೆಯಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.</p>.ಬೀಳಗಿ: ಭಾವೈಕ್ಯ ಸಾರುವ ಬಾಡಗಂಡಿ ದರ್ಗಾ.<p>‘2007ರಲ್ಲಿ ದೇವಿ ಕನಸಿನಲ್ಲಿ ಬಂದು ದೇಗುಲ ಸೇವೆ ಮಾಡಲು ನಿರ್ದೇಶಿಸಿದಳು. ಅಂದಿನಿಂದ ನಿತ್ಯ ದೇಗುಲದಲ್ಲಿ ಸೇವೆ ಮಾಡಲು ಆರಂಭಿಸಿದೆ’ ಎಂದು ಅಲಿ ಹೇಳಿದ್ದಾರೆ.</p><p>ಅಲಿ ಅವರ ನೇತೃತ್ವದಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುಗ್ಗಿ ಕಾಲದಲ್ಲಿ ಧಾನ್ಯ ಸಂಗ್ರಹಣೆ, ನಿಧಿ ಸಂಗ್ರಹಣೆಯಂತಹ ಉಪಕ್ರಮಗಳು ಗಮನಾರ್ಹ ಸಂಪನ್ಮೂಲಗಳನ್ನು ಸೃಷ್ಟಿಸಿವೆ. ಈ ವರ್ಷವೇ ದೇವಾಲಯದ ಅಭಿವೃದ್ಧಿಗೆ ₹ 2.7 ಲಕ್ಷ ಸಂಗ್ರಹಿಸಲಾಗಿದೆ ಎಂದು ಅಲಿ ತಿಳಿಸಿದ್ದಾರೆ.</p>.ಇಟಗಾ: ಕೋಟಿಲಿಂಗೇಶ್ವರ ಶಿವ ಶರಣರ ಪ್ರತಿಮೆಗಳ ಭಾವೈಕ್ಯ ತಾಣ. <p>ಸಾರ್ವಜನಿಕರ ದೇಣಿಗೆ ಮತ್ತು ಸರ್ಕಾರದ ಅನುದಾನ ಸೇರಿ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗಾಗಿ ₹30.40 ಲಕ್ಷ ಖರ್ಚು ಮಾಡಲಾಗಿದೆ. ಇತ್ತೀಚೆಗೆ, ಜೈಪುರದಿಂದ ತರಿಸಲಾದ ₹ 2.5 ಲಕ್ಷ ವೆಚ್ಚದ 5.5 ಅಡಿ ಹನುಂತನದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಐದು ದಿನ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು ಎಂದು ಅಲಿ ಹೇಳಿದ್ದಾರೆ. </p><p>ಧರ್ಮ, ಲಿಂಗದ ಗೋಡೆಯನ್ನು ಮೀರಿ ಜನ ಈ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ನಾನು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡನ್ನೂ ಗೌರವಿಸುತ್ತೇನೆ. ದೇವಸ್ಥಾನಕ್ಕೆ ಸೇವೆ ಸಲ್ಲಿಸುವುದು ನನ್ನ ಭಕ್ತಿ ಮತ್ತು ಕೋಮು ಸೌಹಾರ್ದತೆಗೆ ಬಗ್ಗೆ ಇರುವ ನನ್ನ ಬದ್ಧತೆಯ ಪ್ರತೀಕ ಎನ್ನುವುದು ಅಲಿಯವರ ಮಾತು.</p> .ಮಂಗಳೂರು | 'ಭಾವೈಕ್ಯ ದೀಪಾವಳಿಯಲ್ಲಿ ಕುಣಿತ ಭಜನೆ'.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>