ರಜನಿಕಾಂತ್ ಅವರು ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಕಟ್ಟಾ ಬೆಂಬಲಿಗರಾಗಿರುವ ಕಾರಣಕ್ಕೆ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಕೀಯೇತರ ಸಭೆ ನಡೆಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
2010ರ ಅಕ್ಟೋಬರ್ನಲ್ಲಿ ರಜನಿಕಾಂತ್, ಬಾಳಾ ಠಾಕ್ರೆ ಅವರನ್ನು ಮಾತೋಶ್ರೀಯಲ್ಲಿ ಭೇಟಿಯಾಗಿದ್ದರು.
ಠಾಕ್ರೆ ನೇತೃತ್ವದ ಶಿವಸೇನಾ ಬಣವು ಮಹಾ ವಿಕಾಸ್ ಅಘಾಡಿಯ (ಎಂವಿಎ) ಒಂದು ಘಟಕವಾಗಿದ್ದು, ಎನ್ಸಿಪಿ ಮತ್ತು ಕಾಂಗ್ರೆಸ್ ಕೂಡ ಇದರ ಭಾಗವಾಗಿದೆ.