<p><strong>ನವದೆಹಲಿ:</strong> ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ತಾಜ್ ಮಹಲ್ ಭೇಟಿ ಇಂದು (ಭಾನುವಾರ) ದಿಢೀರ್ ಆಗಿ ರದ್ದಾಗಿದೆ. </p><p>ಅಫ್ಗಾನಿಸ್ತಾನ ವಿದೇಶಾಂಗ ಸಚಿವರ ಆಗ್ರಾ ಭೇಟಿ ರದ್ದಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. </p><p>ಆಗ್ರಾದ ಐತಿಹಾಸಿಕ ತಾಜ್ ಮಹಲ್ಗೆ ಅಮೀರ್ ಖಾನ್ ಮುತ್ತಾಕಿ ಅವರ ಭೇಟಿ ಇಂದು (ಅ.12) ನಿಗದಿಯಾಗಿತ್ತು. </p><p>ಮುತ್ತಾಕಿ ಅವರು ಶನಿವಾರದಂದು ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್ನಲ್ಲಿರುವ ಇಸ್ಲಾಂ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆ ದಾರುಲ್ ಉಲೂಮ್ಗೆ ಭೇಟಿ ನೀಡಿದ್ದರು. </p><p>ಆದರೆ ಮುತ್ತಾಕಿ ಅವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ಅವಕಾಶ ನೀಡದಿರುವ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. </p><p>ಆರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮುತ್ತಾಕಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕಾಬೂಲ್ನಲ್ಲಿ ರಾಯಭಾರಿ ಕಚೇರಿ ಪುನರಾರಂಭ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದಾಗಿ ಜೈಶಂಕರ್ ಭರವಸೆ ನೀಡಿದ್ದರು. </p><p>ಅಫ್ಗಾನಿಸ್ತಾನದಲ್ಲಿ ನಾಲ್ಕು ವರ್ಷದ ಹಿಂದೆ ಅಧಿಕಾರ ಪಡೆದ ಬಳಿಕ ತಾಲಿಬಾನ್ನ ಉನ್ನತ ನಾಯಕರೊಬ್ಬರು ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. </p>.ದೇವಬಂದ್: ಪತ್ರಕರ್ತೆಯರಿಗೆ ದಾರುಲ್ ಉಲೂಮ್ನಲ್ಲೂ ಮತ್ತೆ ಪ್ರವೇಶ ನಿರಾಕರಣೆ?.ಅಫ್ಗನ್ ಸಚಿವರ ಸುದ್ದಿಗೋಷ್ಠಿ | ಪತ್ರಕರ್ತೆಯರಿಗೆ ನಿರ್ಬಂಧ: ವಿಪಕ್ಷಗಳ ವಾಗ್ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ತಾಜ್ ಮಹಲ್ ಭೇಟಿ ಇಂದು (ಭಾನುವಾರ) ದಿಢೀರ್ ಆಗಿ ರದ್ದಾಗಿದೆ. </p><p>ಅಫ್ಗಾನಿಸ್ತಾನ ವಿದೇಶಾಂಗ ಸಚಿವರ ಆಗ್ರಾ ಭೇಟಿ ರದ್ದಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. </p><p>ಆಗ್ರಾದ ಐತಿಹಾಸಿಕ ತಾಜ್ ಮಹಲ್ಗೆ ಅಮೀರ್ ಖಾನ್ ಮುತ್ತಾಕಿ ಅವರ ಭೇಟಿ ಇಂದು (ಅ.12) ನಿಗದಿಯಾಗಿತ್ತು. </p><p>ಮುತ್ತಾಕಿ ಅವರು ಶನಿವಾರದಂದು ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ದೇವಬಂದ್ನಲ್ಲಿರುವ ಇಸ್ಲಾಂ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆ ದಾರುಲ್ ಉಲೂಮ್ಗೆ ಭೇಟಿ ನೀಡಿದ್ದರು. </p><p>ಆದರೆ ಮುತ್ತಾಕಿ ಅವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ಅವಕಾಶ ನೀಡದಿರುವ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು. </p><p>ಆರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮುತ್ತಾಕಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕಾಬೂಲ್ನಲ್ಲಿ ರಾಯಭಾರಿ ಕಚೇರಿ ಪುನರಾರಂಭ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದಾಗಿ ಜೈಶಂಕರ್ ಭರವಸೆ ನೀಡಿದ್ದರು. </p><p>ಅಫ್ಗಾನಿಸ್ತಾನದಲ್ಲಿ ನಾಲ್ಕು ವರ್ಷದ ಹಿಂದೆ ಅಧಿಕಾರ ಪಡೆದ ಬಳಿಕ ತಾಲಿಬಾನ್ನ ಉನ್ನತ ನಾಯಕರೊಬ್ಬರು ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. </p>.ದೇವಬಂದ್: ಪತ್ರಕರ್ತೆಯರಿಗೆ ದಾರುಲ್ ಉಲೂಮ್ನಲ್ಲೂ ಮತ್ತೆ ಪ್ರವೇಶ ನಿರಾಕರಣೆ?.ಅಫ್ಗನ್ ಸಚಿವರ ಸುದ್ದಿಗೋಷ್ಠಿ | ಪತ್ರಕರ್ತೆಯರಿಗೆ ನಿರ್ಬಂಧ: ವಿಪಕ್ಷಗಳ ವಾಗ್ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>