ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ 115 ಯಾತ್ರಾರ್ಥಿಗಳು ಹವಾಮಾನ ವೈಪರೀತ್ಯದಿಂದ ಗುಂಜ್ನಲ್ಲಿ ಉಳಿದಿದ್ದರು. ಇಂಡೊ ಟಿಬೆಟ್ ಬಾರ್ಡರ್ ಪೋರ್ಸ್(ಐಟಿಬಿಪಿ) ಮತ್ತು ಕುಮಾನ್ ವಿಕಾಸ್ ಮಂಡಲ್ ಯಾತ್ರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಪಿಥೌರ್ಗಡಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸುಷ್ಮಾ ಸ್ವರಾಜ್ ಅವರು ಸೋಮವಾರ ಟ್ವಿಟ್ ಮಾಡಿದ್ದರು.