<p><strong>ಜೋದ್ಪುರ:</strong> ಅಂಗವಿಕಲರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯ ಇದೆ. ರಾಷ್ಟ್ರ ನಿರ್ಮಾಣದಲ್ಲೂ ಕೊಡುಗೆ ನೀಡುತ್ತಿರುವ ಈ ಸಮುದಾಯದ ಹೊಣೆ ಸಮಾಜದ ಜವಾಬ್ದಾರಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಪಾರಸ್ಮಲ್ ಬೊಹ್ರಾ ಅಂಧರ ಮಹಾ ವಿದ್ಯಾಲಯದ ಮೂರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಂಗವಿಕಲರು ತಮ್ಮ ಜೀವನದಲ್ಲಿ ಬೆಳೆದು ನಿಲ್ಲುವಂತೆ ಮಾಡುವುದು ಸಮಾಜದ ಜವಾಬ್ದಾರಿ ಎನ್ನುವುದನ್ನು ನಾವು ಖಚಿತಪಡಿಸಬೇಕಿದೆ ಎಂದರು.</p>.<p>‘ವಿವಿಧ ಕ್ಷೇತ್ರಗಳ ಸಣ್ಣ–ಸಣ್ಣ ಪ್ರಯತ್ನಗಳೂ ದೊಡ್ಡ ಮಟ್ಟದ ಬದಲಾವಣೆ ತರಬಲ್ಲವು. ನಾವು ಅಂಗವಿಕಲರಿಗೆ ಉತ್ತಮ ಬದುಕು ಮತ್ತು ಭವಿಷ್ಯ ಕಲ್ಪಿಸಲು ಸಾಧ್ಯವಿದೆ. 2015ರಲ್ಲಿ ‘ವಿಕಲಾಂಗ’ ಎಂಬುದನ್ನು ‘ವಿಕಲಚೇತನ’ ಎಂದು ಬದಲಿಸಿ, ಈ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಅಮಿತ್ ಶಾ ಹೇಳಿದರು.</p>.<p>ಎರಡು ಬಾರಿ ಪ್ಯಾರಾಲಿಂಪಿಕ್ ಜಾವಲಿನ್ನಲ್ಲಿ ಚಿನ್ನದ ಪದಕ ಗೆದ್ದಿರುವ ರಾಜಸ್ಥಾನದ ದೇವೇಂದ್ರ ಝಝಾರಿಯಾ ಜೊತೆ ನಡೆಸಿದ ಭೇಟಿ ಸ್ಮರಿಸಿದ ಅಮಿತ್ ಶಾ, ‘ಸಮಾಜ, ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ’ ಎಂದರು.</p>.<p>1960ರಿಂದ 2013ರವರೆಗೆ ಭಾರತ ಪ್ಯಾರಾಲಿಂಪಿಕ್ನಲ್ಲಿ ಕಡಿಮೆ ಪದಕಗಳನ್ನು ಗೆದ್ದಿತ್ತು. ಕಳೆದ ಮೂರು ಕ್ರೀಡಾಕೂಟಗಳಲ್ಲಿ 52 ಪದಕಗಳನ್ನು ಬಾಚಿಕೊಂಡಿದೆ. 2014ರಲ್ಲಿ ಅಂಗವಿಕಲರ ಸಬಲೀಕರಣ ಇಲಾಖೆಯ ಬಜೆಟ್ ಮೊತ್ತ ₹ 338 ಕೋಟಿ ಇತ್ತು. ಅದನ್ನು ₹ 1,313 ಕೋಟಿಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋದ್ಪುರ:</strong> ಅಂಗವಿಕಲರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಮತ್ತಷ್ಟು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯ ಇದೆ. ರಾಷ್ಟ್ರ ನಿರ್ಮಾಣದಲ್ಲೂ ಕೊಡುಗೆ ನೀಡುತ್ತಿರುವ ಈ ಸಮುದಾಯದ ಹೊಣೆ ಸಮಾಜದ ಜವಾಬ್ದಾರಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಪಾರಸ್ಮಲ್ ಬೊಹ್ರಾ ಅಂಧರ ಮಹಾ ವಿದ್ಯಾಲಯದ ಮೂರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಂಗವಿಕಲರು ತಮ್ಮ ಜೀವನದಲ್ಲಿ ಬೆಳೆದು ನಿಲ್ಲುವಂತೆ ಮಾಡುವುದು ಸಮಾಜದ ಜವಾಬ್ದಾರಿ ಎನ್ನುವುದನ್ನು ನಾವು ಖಚಿತಪಡಿಸಬೇಕಿದೆ ಎಂದರು.</p>.<p>‘ವಿವಿಧ ಕ್ಷೇತ್ರಗಳ ಸಣ್ಣ–ಸಣ್ಣ ಪ್ರಯತ್ನಗಳೂ ದೊಡ್ಡ ಮಟ್ಟದ ಬದಲಾವಣೆ ತರಬಲ್ಲವು. ನಾವು ಅಂಗವಿಕಲರಿಗೆ ಉತ್ತಮ ಬದುಕು ಮತ್ತು ಭವಿಷ್ಯ ಕಲ್ಪಿಸಲು ಸಾಧ್ಯವಿದೆ. 2015ರಲ್ಲಿ ‘ವಿಕಲಾಂಗ’ ಎಂಬುದನ್ನು ‘ವಿಕಲಚೇತನ’ ಎಂದು ಬದಲಿಸಿ, ಈ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಅಮಿತ್ ಶಾ ಹೇಳಿದರು.</p>.<p>ಎರಡು ಬಾರಿ ಪ್ಯಾರಾಲಿಂಪಿಕ್ ಜಾವಲಿನ್ನಲ್ಲಿ ಚಿನ್ನದ ಪದಕ ಗೆದ್ದಿರುವ ರಾಜಸ್ಥಾನದ ದೇವೇಂದ್ರ ಝಝಾರಿಯಾ ಜೊತೆ ನಡೆಸಿದ ಭೇಟಿ ಸ್ಮರಿಸಿದ ಅಮಿತ್ ಶಾ, ‘ಸಮಾಜ, ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ’ ಎಂದರು.</p>.<p>1960ರಿಂದ 2013ರವರೆಗೆ ಭಾರತ ಪ್ಯಾರಾಲಿಂಪಿಕ್ನಲ್ಲಿ ಕಡಿಮೆ ಪದಕಗಳನ್ನು ಗೆದ್ದಿತ್ತು. ಕಳೆದ ಮೂರು ಕ್ರೀಡಾಕೂಟಗಳಲ್ಲಿ 52 ಪದಕಗಳನ್ನು ಬಾಚಿಕೊಂಡಿದೆ. 2014ರಲ್ಲಿ ಅಂಗವಿಕಲರ ಸಬಲೀಕರಣ ಇಲಾಖೆಯ ಬಜೆಟ್ ಮೊತ್ತ ₹ 338 ಕೋಟಿ ಇತ್ತು. ಅದನ್ನು ₹ 1,313 ಕೋಟಿಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>