<p><strong>ನವದೆಹಲಿ:</strong> ಪೂರ್ವ ಲಡಾಕ್ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಗುಂಟಾ ಹಲವು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿ ಪರಿಸ್ಥಿತಿಯಲ್ಲಿ ನಿಂತಿದ್ದಾರೆ. ಈ ಬೆಳವಣಿಗೆಯು 2017ರಲ್ಲಿ ಎರಡೂ ದೇಶಗಳ ನಡುವೆ 73 ದಿನಗಳ ಕಾಲ ಉದ್ಭವಿಸಿದ್ದ ದೋಕಲಾ ಬಿಕ್ಕಟ್ಟಿನ ಮಿಲಿಟರಿ ಮುಖಾಮುಖಿಯನ್ನು ನೆನಪಿಸುವಂತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.</p>.<p>ವಾಸ್ತವ ಗಡಿ ನಿಯಂತ್ರಣಾ ರೇಖೆಯ ವಿವಾದಾತ್ಮಕ ಪ್ರದೇಶಗಳಾದ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆಯಲ್ಲಿ ಚೀನಾ ಮೇ 5ರಿಂದ ಈಚೆಗೆ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ. ಸುಮಾರು 2,000 ದಿಂದ 2,500 ಸೈನಿಕರನ್ನು ಈ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ನಿಯೋಜಿಸಿದೆ. ಅಷ್ಟೇ ಅಲ್ಲ, ಕ್ರಮೇಣ ತಾತ್ಕಾಲಿಕ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ಹೀಗಾಗಿ ಭಾರತವೂ ಕೂಡ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ ಎಂದು ಉನ್ನತ ಮಿಲಿಟರಿ ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ: <a href="https://www.prajavani.net/stories/international/china-to-evacuate-its-citizens-from-india-amid-rise-in-coronavirus-cases-730881.html?fbclid=IwAR3yvKzCrcKz57YBRQZO8Ey8ZfVDbTt4UhFJS431xne-wwQ8Btdib3BlsTM" target="_blank">ಭಾರತದಿಂದ ತನ್ನವರನ್ನು ವಾಪಸ್ ಕರೆಸಿಕೊಳ್ಳಲು ಮುಂದಾದ ಚೀನಾ</a></strong></p>.<p>‘ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಬಲವು ನಮ್ಮ ಎದುರಾಳಿಗಿಂತ ಉತ್ತಮವಾಗಿದೆ’ ಎಂದು ಸೇನೆಯ ಅನಾಮಧೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಗಾಲ್ವಾನ್ ಕಣಿವೆಯ ಡಾರ್ಬುಕ್-ಶಾಯೋಕ್-ದೌಲತ್ ಬೇಗ್ ಓಲ್ದಿ ರಸ್ತೆಯ ಇಂಡಿಯನ್ ಪೋಸ್ಟ್ ಕೆಎಂ 120 ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿರುವ ಮುಖ್ಯ ವಿಚಾರ ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.</p>.<p>ಈ ಬಗ್ಗೆ ಮಾತನಾಡಿರುವ ಸೇನೆಯ ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ, ‘ ಇದು ಗಂಭೀರವಾದ ವಿಚಾರ. ಇದು ಸಾಮಾನ್ಯ ರೀತಿಯ ಉಲ್ಲಂಘನೆಯಲ್ಲ,’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ಯಾವುದೇ ವಿವಾದಗಳು ಇಲ್ಲದ ಗಾಲ್ವಾನ್ನಂಥ ಪ್ರದೇಶದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸೇನಾಬಲವನ್ನು ಹೆಚ್ಚಿಸಿರುವುದು ನೋಡಿದರೆ ಇದು ನಿಜಕ್ಕೂ ಆತಂಕಕಾರಿ ಸಂಗತಿ,’ ಎಂದು ಹೂಡಾ ಹೇಳಿದ್ದಾರೆ. ಹೂಡಾ ಅವರ ಈ ಮಾತನನ್ನು ರಾಜತಾಂತ್ರಿಕ ಪರಿಣತರೂ ಒಪ್ಪಿಕೊಂಡಿದ್ದಾರೆ.</p>.<p>‘ಚೀನಾದ ಸೈನ್ಯದಿಂದ ಹಲವು ಬಾರಿ ಅತಿಕ್ರಮಣಗಳು ನಡೆದಿವೆ. ಆದರೆ ಇದು ಹಾಗಲ್ಲ. ಗಂಭೀರ ವಿಷಯ. ಇದು ನಿಜಕ್ಕೂ ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿ ಗೊಂದಲವನ್ನೂ ಮೂಡಿಸುತ್ತಿದೆ,’ ಎಂದು ಚೀನಾಕ್ಕೆ ಭಾರತದ ರಾಯಭಾರಿಯಾಗಿದ್ದ ಅಶೋಕ್ ಕೆ ಕಾಂತಾ ಅಭಿಪ್ರಾಯಪಟ್ಟಿದ್ದಾರೆ.</p>.<p>ಮೇ 5 ಮತ್ತು 6ರಂದು ರಂದು ಲಡಾಕ್ನಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಗರ್ಷಣೆ ನಡೆದಿತ್ತು. ಆಗ ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು.</p>.<p>3488 ಕಿಲೋ ಮೀಟರ್ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಎಸಿ) ಈ ರೀತಿಯ ಘರ್ಷಣೆಗಳು ಭದ್ರತಾ ಪಡೆಗಳ ನಡುವೆ ನಡೆಯುತ್ತಿವೆ. ಆದರೆ, ಉಭಯ ದೇಶಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಮುಖಾಮುಖಿ ಘರ್ಷಣೆಗಳು ಸಂಭವಿಸಿರಲಿಲ್ಲ. ಈ ಹಿಂದೆ 2017ರ ಆಗಸ್ಟ್ನಲ್ಲಿ ಲಡಾಕ್ ನಲ್ಲಿ ಇಂಥ ಘರ್ಷಣೆ ನಡೆದಿತ್ತು. ಲಡಾಕ್ನ ಪಾಂಗೊಂಗ್ ಸರೋವರ ಬಳಿ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು .</p>.<p>2017ರಲ್ಲಿ 73 ದಿನಗಳ ದೋಕ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಭಯ ದೇಶಗಳ ಸೇನೆಯ ನಡುವಣ ಸಂಬಂಧವೂ ಹದಗೆಟ್ಟಿತ್ತು. ಬಳಿಕ ವುಹಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವೆ ನಡೆದ ಶೃಂಗಸಭೆ ಬಳಿಕ ಸಂಬಂಧಗಳು ಸುಧಾರಿಸಿದ್ದವು. ಈ ಶೃಂಗಸಭೆಯ ಬಳಿಕವೂ ಉಭಯ ನಾಯಕರು ಹಲವು ಬಾರಿ ಭೇಟಿಯಾಗಿ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನೀತಿ ಪಾಲಿಸಲು ಒಪ್ಪಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪೂರ್ವ ಲಡಾಕ್ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಗುಂಟಾ ಹಲವು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿ ಪರಿಸ್ಥಿತಿಯಲ್ಲಿ ನಿಂತಿದ್ದಾರೆ. ಈ ಬೆಳವಣಿಗೆಯು 2017ರಲ್ಲಿ ಎರಡೂ ದೇಶಗಳ ನಡುವೆ 73 ದಿನಗಳ ಕಾಲ ಉದ್ಭವಿಸಿದ್ದ ದೋಕಲಾ ಬಿಕ್ಕಟ್ಟಿನ ಮಿಲಿಟರಿ ಮುಖಾಮುಖಿಯನ್ನು ನೆನಪಿಸುವಂತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.</p>.<p>ವಾಸ್ತವ ಗಡಿ ನಿಯಂತ್ರಣಾ ರೇಖೆಯ ವಿವಾದಾತ್ಮಕ ಪ್ರದೇಶಗಳಾದ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆಯಲ್ಲಿ ಚೀನಾ ಮೇ 5ರಿಂದ ಈಚೆಗೆ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ. ಸುಮಾರು 2,000 ದಿಂದ 2,500 ಸೈನಿಕರನ್ನು ಈ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ನಿಯೋಜಿಸಿದೆ. ಅಷ್ಟೇ ಅಲ್ಲ, ಕ್ರಮೇಣ ತಾತ್ಕಾಲಿಕ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ಹೀಗಾಗಿ ಭಾರತವೂ ಕೂಡ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ ಎಂದು ಉನ್ನತ ಮಿಲಿಟರಿ ಮೂಲಗಳು ತಿಳಿಸಿವೆ.</p>.<p><strong>ಇದನ್ನೂ ಓದಿ: <a href="https://www.prajavani.net/stories/international/china-to-evacuate-its-citizens-from-india-amid-rise-in-coronavirus-cases-730881.html?fbclid=IwAR3yvKzCrcKz57YBRQZO8Ey8ZfVDbTt4UhFJS431xne-wwQ8Btdib3BlsTM" target="_blank">ಭಾರತದಿಂದ ತನ್ನವರನ್ನು ವಾಪಸ್ ಕರೆಸಿಕೊಳ್ಳಲು ಮುಂದಾದ ಚೀನಾ</a></strong></p>.<p>‘ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಬಲವು ನಮ್ಮ ಎದುರಾಳಿಗಿಂತ ಉತ್ತಮವಾಗಿದೆ’ ಎಂದು ಸೇನೆಯ ಅನಾಮಧೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಗಾಲ್ವಾನ್ ಕಣಿವೆಯ ಡಾರ್ಬುಕ್-ಶಾಯೋಕ್-ದೌಲತ್ ಬೇಗ್ ಓಲ್ದಿ ರಸ್ತೆಯ ಇಂಡಿಯನ್ ಪೋಸ್ಟ್ ಕೆಎಂ 120 ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿರುವ ಮುಖ್ಯ ವಿಚಾರ ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.</p>.<p>ಈ ಬಗ್ಗೆ ಮಾತನಾಡಿರುವ ಸೇನೆಯ ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ, ‘ ಇದು ಗಂಭೀರವಾದ ವಿಚಾರ. ಇದು ಸಾಮಾನ್ಯ ರೀತಿಯ ಉಲ್ಲಂಘನೆಯಲ್ಲ,’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ಯಾವುದೇ ವಿವಾದಗಳು ಇಲ್ಲದ ಗಾಲ್ವಾನ್ನಂಥ ಪ್ರದೇಶದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸೇನಾಬಲವನ್ನು ಹೆಚ್ಚಿಸಿರುವುದು ನೋಡಿದರೆ ಇದು ನಿಜಕ್ಕೂ ಆತಂಕಕಾರಿ ಸಂಗತಿ,’ ಎಂದು ಹೂಡಾ ಹೇಳಿದ್ದಾರೆ. ಹೂಡಾ ಅವರ ಈ ಮಾತನನ್ನು ರಾಜತಾಂತ್ರಿಕ ಪರಿಣತರೂ ಒಪ್ಪಿಕೊಂಡಿದ್ದಾರೆ.</p>.<p>‘ಚೀನಾದ ಸೈನ್ಯದಿಂದ ಹಲವು ಬಾರಿ ಅತಿಕ್ರಮಣಗಳು ನಡೆದಿವೆ. ಆದರೆ ಇದು ಹಾಗಲ್ಲ. ಗಂಭೀರ ವಿಷಯ. ಇದು ನಿಜಕ್ಕೂ ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿ ಗೊಂದಲವನ್ನೂ ಮೂಡಿಸುತ್ತಿದೆ,’ ಎಂದು ಚೀನಾಕ್ಕೆ ಭಾರತದ ರಾಯಭಾರಿಯಾಗಿದ್ದ ಅಶೋಕ್ ಕೆ ಕಾಂತಾ ಅಭಿಪ್ರಾಯಪಟ್ಟಿದ್ದಾರೆ.</p>.<p>ಮೇ 5 ಮತ್ತು 6ರಂದು ರಂದು ಲಡಾಕ್ನಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಗರ್ಷಣೆ ನಡೆದಿತ್ತು. ಆಗ ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು.</p>.<p>3488 ಕಿಲೋ ಮೀಟರ್ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಎಸಿ) ಈ ರೀತಿಯ ಘರ್ಷಣೆಗಳು ಭದ್ರತಾ ಪಡೆಗಳ ನಡುವೆ ನಡೆಯುತ್ತಿವೆ. ಆದರೆ, ಉಭಯ ದೇಶಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಮುಖಾಮುಖಿ ಘರ್ಷಣೆಗಳು ಸಂಭವಿಸಿರಲಿಲ್ಲ. ಈ ಹಿಂದೆ 2017ರ ಆಗಸ್ಟ್ನಲ್ಲಿ ಲಡಾಕ್ ನಲ್ಲಿ ಇಂಥ ಘರ್ಷಣೆ ನಡೆದಿತ್ತು. ಲಡಾಕ್ನ ಪಾಂಗೊಂಗ್ ಸರೋವರ ಬಳಿ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು .</p>.<p>2017ರಲ್ಲಿ 73 ದಿನಗಳ ದೋಕ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಭಯ ದೇಶಗಳ ಸೇನೆಯ ನಡುವಣ ಸಂಬಂಧವೂ ಹದಗೆಟ್ಟಿತ್ತು. ಬಳಿಕ ವುಹಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವೆ ನಡೆದ ಶೃಂಗಸಭೆ ಬಳಿಕ ಸಂಬಂಧಗಳು ಸುಧಾರಿಸಿದ್ದವು. ಈ ಶೃಂಗಸಭೆಯ ಬಳಿಕವೂ ಉಭಯ ನಾಯಕರು ಹಲವು ಬಾರಿ ಭೇಟಿಯಾಗಿ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನೀತಿ ಪಾಲಿಸಲು ಒಪ್ಪಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>