<p><strong>ಅಯೋಧ್ಯೆ:</strong> ಇಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ 500 ವರ್ಷಗಳ ಹಿಂದಿನ ಸಂಕಲ್ಪ ಈಡೇರಿದೆ. ಶತಮಾನಗಳ ಗಾಯ ಮತ್ತು ನೋವು ಶಮನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p><p>ರಾಮಮಂದಿರದ ಕಾಮಗಾರಿಗಳು ಪೂರ್ಣಗೊಂಡಿರುವುದರ ದ್ಯೋತಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಧ್ವಜಾರೋಹಣ ನೆರವೇರಿಸಿದರು.</p><p>ಇದು ಹೊಸಯುಗದ ಆರಂಭ ಎಂದಿರುವ ಪ್ರಧಾನಿ ಮೋದಿ, ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜತೆಗೆ ದೇಶ ಸೇರಿ ಇಡೀ ಜಗತ್ತು ರಾಮನಲ್ಲಿ ಲೀನವಾಗಿದೆ ಎಂದರು.</p><p>‘ಸತ್ಯವು ಅಂತಿಮವಾಗಿ ಸುಳ್ಳಿನ ಮೇಲೆ ಜಯಗಳಿಸುತ್ತದೆ ಎನ್ನುವುದನ್ನು ಈ ಧ್ವಜ ಸೂಚಿಸುತ್ತದೆ. ನಮ್ಮ ರಾಮ ಎಂದಿಗೂ ಭೇದ ತೋರಿಸುವುದಿಲ್ಲ. ನಾವೂ ಅದೇ ಹಾದಿಯಲ್ಲಿ ಸಾಗೋಣ’ ಎಂದು ಜನತೆಯನ್ನು ಒತ್ತಾಯಿಸಿದರು.</p><p>2047ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುತ್ತದೆ. ಅಷ್ಟರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಾವು ನಮ್ಮೊಳಗಿನ ರಾಮನನ್ನು ಜಾಗೃತಗೊಳಿಸಬೇಕು ಎಂದರು.</p><p>‘ಹತ್ತು ಅಡಿ ಎತ್ತರ ಮತ್ತು 20 ಅಡಿ ಅಗಲವಿರುವ ತ್ರಿಕೋನಾಕೃತಿಯ ಧ್ವಜವು ಭಗವಾನ್ ರಾಮನ ಶೌರ್ಯ ಹಾಗೂ ಶಕ್ತಿಯನ್ನು ಬಿಂಬಿಸುವ ಪ್ರಕಾಶಮಾನ ಸೂರ್ಯನ ಚಿತ್ರವನ್ನು ಹೊಂದಿದೆ. ಕೋವಿದಾರ ಮರದೊಂದಿಗೆ ‘ಓಂ’ ಅನ್ನು ಚಿತ್ರಿಸಲಾಗಿದೆ’.</p>.Rama Mandira: ಅಯೋಧ್ಯೆ ರಾಮ ಮಂದಿರ ಶಿಖರವೇರಿದ ಧ್ವಜದಲ್ಲಿ ಇರುವುದೇನು?.ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ.ಅಯೋಧ್ಯೆ | ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿ ದೇಣಿಗೆ.Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ:</strong> ಇಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ 500 ವರ್ಷಗಳ ಹಿಂದಿನ ಸಂಕಲ್ಪ ಈಡೇರಿದೆ. ಶತಮಾನಗಳ ಗಾಯ ಮತ್ತು ನೋವು ಶಮನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p><p>ರಾಮಮಂದಿರದ ಕಾಮಗಾರಿಗಳು ಪೂರ್ಣಗೊಂಡಿರುವುದರ ದ್ಯೋತಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಧ್ವಜಾರೋಹಣ ನೆರವೇರಿಸಿದರು.</p><p>ಇದು ಹೊಸಯುಗದ ಆರಂಭ ಎಂದಿರುವ ಪ್ರಧಾನಿ ಮೋದಿ, ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜತೆಗೆ ದೇಶ ಸೇರಿ ಇಡೀ ಜಗತ್ತು ರಾಮನಲ್ಲಿ ಲೀನವಾಗಿದೆ ಎಂದರು.</p><p>‘ಸತ್ಯವು ಅಂತಿಮವಾಗಿ ಸುಳ್ಳಿನ ಮೇಲೆ ಜಯಗಳಿಸುತ್ತದೆ ಎನ್ನುವುದನ್ನು ಈ ಧ್ವಜ ಸೂಚಿಸುತ್ತದೆ. ನಮ್ಮ ರಾಮ ಎಂದಿಗೂ ಭೇದ ತೋರಿಸುವುದಿಲ್ಲ. ನಾವೂ ಅದೇ ಹಾದಿಯಲ್ಲಿ ಸಾಗೋಣ’ ಎಂದು ಜನತೆಯನ್ನು ಒತ್ತಾಯಿಸಿದರು.</p><p>2047ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುತ್ತದೆ. ಅಷ್ಟರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಾವು ನಮ್ಮೊಳಗಿನ ರಾಮನನ್ನು ಜಾಗೃತಗೊಳಿಸಬೇಕು ಎಂದರು.</p><p>‘ಹತ್ತು ಅಡಿ ಎತ್ತರ ಮತ್ತು 20 ಅಡಿ ಅಗಲವಿರುವ ತ್ರಿಕೋನಾಕೃತಿಯ ಧ್ವಜವು ಭಗವಾನ್ ರಾಮನ ಶೌರ್ಯ ಹಾಗೂ ಶಕ್ತಿಯನ್ನು ಬಿಂಬಿಸುವ ಪ್ರಕಾಶಮಾನ ಸೂರ್ಯನ ಚಿತ್ರವನ್ನು ಹೊಂದಿದೆ. ಕೋವಿದಾರ ಮರದೊಂದಿಗೆ ‘ಓಂ’ ಅನ್ನು ಚಿತ್ರಿಸಲಾಗಿದೆ’.</p>.Rama Mandira: ಅಯೋಧ್ಯೆ ರಾಮ ಮಂದಿರ ಶಿಖರವೇರಿದ ಧ್ವಜದಲ್ಲಿ ಇರುವುದೇನು?.ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ.ಅಯೋಧ್ಯೆ | ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿ ದೇಣಿಗೆ.Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>