<p><strong>ಎಚ್ರಲಾ (ಆಂಧ್ರ ಪ್ರದೇಶ):</strong> ಭಾರತದ ಜಲಸೀಮೆಗೆ ದಿಕ್ಕು ತಪ್ಪಿ ಬಂದ 13 ಬಾಂಗ್ಲಾದೇಶಿ ಪ್ರಜೆಗಳನ್ನು ಶ್ರೀಕಾಕುಲಂ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p>.ಕಾಲ್ತುಳಿತದ ಬಗ್ಗೆ ಸಮಗ್ರ ತನಿಖೆ: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು.<p>ಇವರು ಬಾಂಗ್ಲಾದೇಶದ ಭೋಲಾ ಜಿಲ್ಲೆಯವರು. ಸಮುದ್ರ ಮಧ್ಯೆ ದೋಣಿಯ ಎಂಜಿನ್ ಕೆಟ್ಟು ಹೋಗಿದ್ದರಿಂದ ಭಾನುವಾರ ಶ್ರೀಕಾಕುಲಂ ಬಂದರಿಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ನವೆಂಬರ್ 10ರಂದು ಧೋಲಾದಿಂದ ಮೀನುಗಾರಿಕೆಗೆಂದು ಹೊರಟಿದ್ದಾಗಿಯೂ, ಕಳೆದ 20 ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿಯು ದೋಣಿಯನ್ನು ಭಾರತದ ಜಲ ಸೀಮೆಗೆ ನೂಕಿತು ಎಂದು ಅವರು ಹೇಳಿದ್ದಾಗಿ ಶ್ರೀಕಾಕುಲಂ ಪೊಲೀಸ್ ವರಿಷ್ಠಾಧಿಕಾರಿ ವಿ.ಕೆ ಮಹೇಶ್ವರ ರೆಡ್ಡಿ ಪಿಟಿಐಗೆ ತಿಳಿಸಿದ್ದಾರೆ.</p>.ಆಂಧ್ರ ಪ್ರದೇಶ | ಟ್ರಕ್–ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು.<p>7 ದಿನಕ್ಕೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಮಾತ್ರ ತೆಗೆದುಕೊಂಡು ಮೀನುಗಾರಿಕೆಗೆ ಬಂದಿದ್ದರು. ಉಳಿದ ದಿನಗಳಲ್ಲಿ ನೀರು ಸೇವಿಸಿಯೇ ಬದುಕುಳಿದಿದ್ದಾರೆ’ ಎಂದು ಅವರು ಹೇಳಿದ್ದಾರೆ.</p><p>ವಿದೇಶಿ ದೋಣಿಯನ್ನು ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ಭಾರತದ ವಿಶೇಷ ಆರ್ಥಿಕ ವಲಯಕ್ಕೆ ಇವರ ದೋಣಿ ಪ್ರವೇಶಿಸಿದ್ದು, ಅಲ್ಲಿಗೆ ಬರಬೇಕಿದ್ದರೆ ಭಾರತದ ಅಧಿಕಾರಿಗಳ ಅನುಮತಿ ಅವಶ್ಯ. </p>.ಆಂಧ್ರ ಪ್ರದೇಶ: ಡಿಜಿಪಿ ಕಚೇರಿ ಬಳಿ ಕತ್ತು ಸೀಳಿ ಮಹಿಳೆಯ ಬರ್ಬರ ಹತ್ಯೆ.<p>ಅವರ ಈ ಪ್ರವೇಶವು ಭಾರತದ ಸಮುದ್ರ ವಲಯಗಳ ಕಾಯಿದೆ–1981ರ ವಿವಿಧ ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಬಾಂಗ್ಲಾದೇಶದ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದ್ದು, ಮುಂದಿನ ಪ್ರಕ್ರಿಯೆ ಜಾರಿಯಲ್ಲಿದೆ.</p>.ಆಂಧ್ರ ಪ್ರದೇಶ: ಸೊಳ್ಳೆಗಳ ನಿಯಂತ್ರಣಕ್ಕೆ ಎಐ ಚಾಲಿತ ವ್ಯವಸ್ಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್ರಲಾ (ಆಂಧ್ರ ಪ್ರದೇಶ):</strong> ಭಾರತದ ಜಲಸೀಮೆಗೆ ದಿಕ್ಕು ತಪ್ಪಿ ಬಂದ 13 ಬಾಂಗ್ಲಾದೇಶಿ ಪ್ರಜೆಗಳನ್ನು ಶ್ರೀಕಾಕುಲಂ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p>.ಕಾಲ್ತುಳಿತದ ಬಗ್ಗೆ ಸಮಗ್ರ ತನಿಖೆ: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು.<p>ಇವರು ಬಾಂಗ್ಲಾದೇಶದ ಭೋಲಾ ಜಿಲ್ಲೆಯವರು. ಸಮುದ್ರ ಮಧ್ಯೆ ದೋಣಿಯ ಎಂಜಿನ್ ಕೆಟ್ಟು ಹೋಗಿದ್ದರಿಂದ ಭಾನುವಾರ ಶ್ರೀಕಾಕುಲಂ ಬಂದರಿಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ನವೆಂಬರ್ 10ರಂದು ಧೋಲಾದಿಂದ ಮೀನುಗಾರಿಕೆಗೆಂದು ಹೊರಟಿದ್ದಾಗಿಯೂ, ಕಳೆದ 20 ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿಯು ದೋಣಿಯನ್ನು ಭಾರತದ ಜಲ ಸೀಮೆಗೆ ನೂಕಿತು ಎಂದು ಅವರು ಹೇಳಿದ್ದಾಗಿ ಶ್ರೀಕಾಕುಲಂ ಪೊಲೀಸ್ ವರಿಷ್ಠಾಧಿಕಾರಿ ವಿ.ಕೆ ಮಹೇಶ್ವರ ರೆಡ್ಡಿ ಪಿಟಿಐಗೆ ತಿಳಿಸಿದ್ದಾರೆ.</p>.ಆಂಧ್ರ ಪ್ರದೇಶ | ಟ್ರಕ್–ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು.<p>7 ದಿನಕ್ಕೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಮಾತ್ರ ತೆಗೆದುಕೊಂಡು ಮೀನುಗಾರಿಕೆಗೆ ಬಂದಿದ್ದರು. ಉಳಿದ ದಿನಗಳಲ್ಲಿ ನೀರು ಸೇವಿಸಿಯೇ ಬದುಕುಳಿದಿದ್ದಾರೆ’ ಎಂದು ಅವರು ಹೇಳಿದ್ದಾರೆ.</p><p>ವಿದೇಶಿ ದೋಣಿಯನ್ನು ಕಂಡ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ಭಾರತದ ವಿಶೇಷ ಆರ್ಥಿಕ ವಲಯಕ್ಕೆ ಇವರ ದೋಣಿ ಪ್ರವೇಶಿಸಿದ್ದು, ಅಲ್ಲಿಗೆ ಬರಬೇಕಿದ್ದರೆ ಭಾರತದ ಅಧಿಕಾರಿಗಳ ಅನುಮತಿ ಅವಶ್ಯ. </p>.ಆಂಧ್ರ ಪ್ರದೇಶ: ಡಿಜಿಪಿ ಕಚೇರಿ ಬಳಿ ಕತ್ತು ಸೀಳಿ ಮಹಿಳೆಯ ಬರ್ಬರ ಹತ್ಯೆ.<p>ಅವರ ಈ ಪ್ರವೇಶವು ಭಾರತದ ಸಮುದ್ರ ವಲಯಗಳ ಕಾಯಿದೆ–1981ರ ವಿವಿಧ ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಬಾಂಗ್ಲಾದೇಶದ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದ್ದು, ಮುಂದಿನ ಪ್ರಕ್ರಿಯೆ ಜಾರಿಯಲ್ಲಿದೆ.</p>.ಆಂಧ್ರ ಪ್ರದೇಶ: ಸೊಳ್ಳೆಗಳ ನಿಯಂತ್ರಣಕ್ಕೆ ಎಐ ಚಾಲಿತ ವ್ಯವಸ್ಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>