<p><strong>ನವದೆಹಲಿ</strong>: ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಕೊನೆಗೂ ಅಧಿಕೃತವಾಗಿ ಸೀಟು ಹಂಚಿಕೆ ಒಪ್ಪಂದ ಏರ್ಪಡಲಿಲ್ಲ.</p>.<p>ಆಯಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ ಪ್ರಕಾರ, ಆರ್ಜೆಡಿ 143ರಲ್ಲಿ, ಕಾಂಗ್ರೆಸ್ 61ರಲ್ಲಿ, ಸಿಪಿಐ (ಎಂಎಲ್) 20ರಲ್ಲಿ ಸ್ಪರ್ಧಿಸಲಿವೆ. ಬಾಕಿ ಕ್ಷೇತ್ರಗಳನ್ನು ವಿಐಪಿ, ಸಿಪಿಐ (ಎಂ) ಸೇರಿದಂತೆ ಉಳಿದ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ. ಒಪ್ಪಂದ ಏರ್ಪಡದ ಕಾರಣ ಕನಿಷ್ಠ ಒಂಬತ್ತು ಕ್ಷೇತ್ರಗಳಲ್ಲಿ ಮೈತ್ರಿ ಕೂಟದ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ. </p>.<p>ಐದು ಕ್ಷೇತ್ರಗಳಲ್ಲಿ ಆರ್ಜೆಡಿ–ಕಾಂಗ್ರೆಸ್ ಮುಖಾಮುಖಿಯಾಗಲಿವೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ವಾಪಸ್ ಪಡೆಯಲು ಬುಧವಾರ ಕೊನೆಯ ದಿನ. ಹೀಗಾಗಿ, ನಾಲ್ಕು ಕ್ಷೇತ್ರಗಳಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಮೈತ್ರಿಕೂಟದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿವೆ. </p>.<p>ಮೊದಲ ಹಂತದ ಚುನಾವಣೆ ನಡೆಯುವ 121 ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 122 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲೂ ಕಡೆಯ ದಿನಾಂಕವಾಗಿತ್ತು. ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಆರ್ಜೆಡಿ ಒಂದೇ ಕಂತಿನಲ್ಲಿ 143 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿ ಪ್ರಕಟಗೊಂಡಿದ್ದು ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯಲು ಕೆಲವೇ ಗಂಟೆಗಳು ಇರುವಾಗ. ಇದಕ್ಕೂ ಮೊದಲೇ ಪಕ್ಷವು ಅಭ್ಯರ್ಥಿಗಳಿಗೆ ಬಿ–ಫಾರಂ ನೀಡಿತ್ತು. </p>.<p>ಆರ್ಜೆಡಿಗೆ ಮೊದಲಿನಿಂದಲೂ ಯಾದವ–ಮುಸ್ಲಿಂ ಸಮುದಾಯಗಳೇ ಸಾಂಪ್ರದಾಯಿಕ ಮತ ಬ್ಯಾಂಕ್. ಟಿಕೆಟ್ ಹಂಚಿಕೆಯಲ್ಲೂ ಈ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಈ ಸಮುದಾಯಗಳಿಗೆ 50ಕ್ಕೂ ಅಧಿಕ ಟಿಕೆಟ್ ಕೊಡಲಾಗಿದೆ. 23 ಮಹಿಳೆಯರಿಗೆ ಮಣೆ ಹಾಕಲಾಗಿದೆ. </p>.<p>ಕಾಂಗ್ರೆಸ್ ಪಕ್ಷವು ಮತ್ತೆ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಜ್ಯ ಘಟಕದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಪಕ್ಷವು ಮತ್ತೆ ಹಂತ ಹಂತವಾಗಿ ಮೂರು ಪಟ್ಟಿಗಳನ್ನು ಪ್ರಕಟಿಸಿತು. ಪಕ್ಷವು 61 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕಳೆದ ಬಾರಿ ಪಕ್ಷವು 70ರಲ್ಲಿ ಸ್ಪರ್ಧಿಸಿ 19ರಲ್ಲಿ ಜಯ ಗಳಿಸಿತ್ತು. </p>.<p>ಪಕ್ಷವು ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್ ಅವರನ್ನು ಕುಟುಂಬ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಕ್ಷೇತ್ರಕ್ಕಾಗಿ ಆರ್ಜೆಡಿ ಸಹ ಪಟ್ಟು ಹಿಡಿದಿತ್ತು. ಈ ಕ್ಷೇತ್ರಕ್ಕೆ ಆರ್ಜೆಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ವದಂತಿ ಹಬ್ಬಿತ್ತು. ಆದರೆ, 143 ಕ್ಷೇತ್ರಗಳ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯ ಹೆಸರಿಲ್ಲ. </p>.<h2><strong>ಕೈ ಪಾಳಯದಲ್ಲಿ ಅಸಮಾಧಾನ: </strong></h2>.<p>ಅಧಿಕೃತವಾಗಿ ಮೈತ್ರಿ ಒಪ್ಪಂದ ಏರ್ಪಡದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ‘ಸೀಟು ಹಂಚಿಕೆಯ ಒಪ್ಪಂದ ಕುದುರಿಸುವಲ್ಲಿ ನಮ್ಮ ಉನ್ನತ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಅರ್ಹರಲ್ಲದ ಹಲವಾರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ‘ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು. </p>.<p>‘ಬಾರಾಬಿಘಾ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಜಾನಂದ ಪ್ರಸಾದ್ ಸಾಹಿ 200ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರಿಗೇ ಟಿಕೆಟ್ ನೀಡಿಲ್ಲ’ ಎಂದು ಅವರು ಹೇಳಿದರು. </p>.<p>‘ಇನ್ನೊಂದೆಡೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರೂ, ರಿಗಾದ ಮಾಜಿ ಶಾಸಕ ಅಮಿತ್ ಕುಮಾರ್ ತುನ್ನಾ ಮತ್ತು ಬಾಗಾದ ಜಯೇಶ್ ಮಂಗಲಂ ಸಿಂಗ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್ ಹಂಚಿಕೆಯಲ್ಲಿ ಇಂತಹ ಹಲವು ಎಡವಟ್ಟುಗಳು ಆಗಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. </p>.<h2>ಅಖಾಡದಿಂದ ಜೆಎಂಎಂ ಹಿಂದಕ್ಕೆ</h2><h2><br></h2>.<p>ಜಾರ್ಖಂಡ್ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾವು (ಜೆಎಂಎಂ) ನೆರೆಯ ಬಿಹಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸೋಮವಾರ ಪ್ರಕಟಿಸಿತು.</p>.<p>ಬಿಹಾರದಲ್ಲಿ 10 ಕ್ಷೇತ್ರಗಳನ್ನು ಪಕ್ಷಕ್ಕೆ ಬಿಟ್ಟು ಕೊಡಬೇಕು ಎಂದು ಜೆಎಂಎಂ ನಾಯಕರು ಒತ್ತಡ ಹೇರಿದ್ದರು. ಆರು ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ಆರ್ಜೆಡಿ ನಾಯಕರು ಒಪ್ಪಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪಕ್ಷದ ನಾಯಕರು ಬಿಹಾರದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಚ್ಚರಿಸಿದ್ದರು. ಪಕ್ಷವು ಸೋಮವಾರ ತನ್ನ ನಿರ್ಧಾರ ಬದಲಿಸಿದೆ. ಮಿತ್ರಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ನ ರಾಜಕೀಯ ಪಿತೂರಿ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಇದರಿಂದಾಗಿ, ಮೈತ್ರಿಕೂಟದಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಳವಾಗಿದೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂನ ಹಿರಿಯ ನಾಯಕಿ ಸುದಿವ್ಯ ಕುಮಾರ್, ‘ಜಾರ್ಖಂಡ್ನಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆಗಿನ ಮೈತ್ರಿಯನ್ನು ನಮ್ಮ ಪಕ್ಷ ಮರು ಪರಿಶೀಲಿಸಲಿದೆ. ಈ ಷಡ್ಯಂತ್ರಕ್ಕೆ ಸೂಕ್ತ ಉತ್ತರ ನೀಡುತ್ತೇವೆ‘ ಎಂದು ಎಚ್ಚರಿಸಿದರು. ರಾಜ್ಯ ಪ್ರವಾಸೋದ್ಯಮ ಸಚಿವ ಕುಮಾರ್ ಸಹ ಇದೇ ಎಚ್ಚರಿಕೆ ನೀಡಿದರು.</p>.<p>ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಚಕೈ, ಧಮ್ದಹಾ, ಕಟೋರಿಯಾ, ಮಣಿಹರಿ, ಜಮುಯಿ ಮತ್ತು ಪಿರ್ಪೈಂಟಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಜೆಎಂಎಂ ಶನಿವಾರ ಘೋಷಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಕೊನೆಗೂ ಅಧಿಕೃತವಾಗಿ ಸೀಟು ಹಂಚಿಕೆ ಒಪ್ಪಂದ ಏರ್ಪಡಲಿಲ್ಲ.</p>.<p>ಆಯಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ ಪ್ರಕಾರ, ಆರ್ಜೆಡಿ 143ರಲ್ಲಿ, ಕಾಂಗ್ರೆಸ್ 61ರಲ್ಲಿ, ಸಿಪಿಐ (ಎಂಎಲ್) 20ರಲ್ಲಿ ಸ್ಪರ್ಧಿಸಲಿವೆ. ಬಾಕಿ ಕ್ಷೇತ್ರಗಳನ್ನು ವಿಐಪಿ, ಸಿಪಿಐ (ಎಂ) ಸೇರಿದಂತೆ ಉಳಿದ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ. ಒಪ್ಪಂದ ಏರ್ಪಡದ ಕಾರಣ ಕನಿಷ್ಠ ಒಂಬತ್ತು ಕ್ಷೇತ್ರಗಳಲ್ಲಿ ಮೈತ್ರಿ ಕೂಟದ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ. </p>.<p>ಐದು ಕ್ಷೇತ್ರಗಳಲ್ಲಿ ಆರ್ಜೆಡಿ–ಕಾಂಗ್ರೆಸ್ ಮುಖಾಮುಖಿಯಾಗಲಿವೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ವಾಪಸ್ ಪಡೆಯಲು ಬುಧವಾರ ಕೊನೆಯ ದಿನ. ಹೀಗಾಗಿ, ನಾಲ್ಕು ಕ್ಷೇತ್ರಗಳಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಮೈತ್ರಿಕೂಟದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿವೆ. </p>.<p>ಮೊದಲ ಹಂತದ ಚುನಾವಣೆ ನಡೆಯುವ 121 ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 122 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲೂ ಕಡೆಯ ದಿನಾಂಕವಾಗಿತ್ತು. ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಆರ್ಜೆಡಿ ಒಂದೇ ಕಂತಿನಲ್ಲಿ 143 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿ ಪ್ರಕಟಗೊಂಡಿದ್ದು ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯಲು ಕೆಲವೇ ಗಂಟೆಗಳು ಇರುವಾಗ. ಇದಕ್ಕೂ ಮೊದಲೇ ಪಕ್ಷವು ಅಭ್ಯರ್ಥಿಗಳಿಗೆ ಬಿ–ಫಾರಂ ನೀಡಿತ್ತು. </p>.<p>ಆರ್ಜೆಡಿಗೆ ಮೊದಲಿನಿಂದಲೂ ಯಾದವ–ಮುಸ್ಲಿಂ ಸಮುದಾಯಗಳೇ ಸಾಂಪ್ರದಾಯಿಕ ಮತ ಬ್ಯಾಂಕ್. ಟಿಕೆಟ್ ಹಂಚಿಕೆಯಲ್ಲೂ ಈ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಈ ಸಮುದಾಯಗಳಿಗೆ 50ಕ್ಕೂ ಅಧಿಕ ಟಿಕೆಟ್ ಕೊಡಲಾಗಿದೆ. 23 ಮಹಿಳೆಯರಿಗೆ ಮಣೆ ಹಾಕಲಾಗಿದೆ. </p>.<p>ಕಾಂಗ್ರೆಸ್ ಪಕ್ಷವು ಮತ್ತೆ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಜ್ಯ ಘಟಕದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಪಕ್ಷವು ಮತ್ತೆ ಹಂತ ಹಂತವಾಗಿ ಮೂರು ಪಟ್ಟಿಗಳನ್ನು ಪ್ರಕಟಿಸಿತು. ಪಕ್ಷವು 61 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕಳೆದ ಬಾರಿ ಪಕ್ಷವು 70ರಲ್ಲಿ ಸ್ಪರ್ಧಿಸಿ 19ರಲ್ಲಿ ಜಯ ಗಳಿಸಿತ್ತು. </p>.<p>ಪಕ್ಷವು ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್ ಅವರನ್ನು ಕುಟುಂಬ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಕ್ಷೇತ್ರಕ್ಕಾಗಿ ಆರ್ಜೆಡಿ ಸಹ ಪಟ್ಟು ಹಿಡಿದಿತ್ತು. ಈ ಕ್ಷೇತ್ರಕ್ಕೆ ಆರ್ಜೆಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ವದಂತಿ ಹಬ್ಬಿತ್ತು. ಆದರೆ, 143 ಕ್ಷೇತ್ರಗಳ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯ ಹೆಸರಿಲ್ಲ. </p>.<h2><strong>ಕೈ ಪಾಳಯದಲ್ಲಿ ಅಸಮಾಧಾನ: </strong></h2>.<p>ಅಧಿಕೃತವಾಗಿ ಮೈತ್ರಿ ಒಪ್ಪಂದ ಏರ್ಪಡದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ‘ಸೀಟು ಹಂಚಿಕೆಯ ಒಪ್ಪಂದ ಕುದುರಿಸುವಲ್ಲಿ ನಮ್ಮ ಉನ್ನತ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಅರ್ಹರಲ್ಲದ ಹಲವಾರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ‘ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು. </p>.<p>‘ಬಾರಾಬಿಘಾ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಜಾನಂದ ಪ್ರಸಾದ್ ಸಾಹಿ 200ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರಿಗೇ ಟಿಕೆಟ್ ನೀಡಿಲ್ಲ’ ಎಂದು ಅವರು ಹೇಳಿದರು. </p>.<p>‘ಇನ್ನೊಂದೆಡೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರೂ, ರಿಗಾದ ಮಾಜಿ ಶಾಸಕ ಅಮಿತ್ ಕುಮಾರ್ ತುನ್ನಾ ಮತ್ತು ಬಾಗಾದ ಜಯೇಶ್ ಮಂಗಲಂ ಸಿಂಗ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್ ಹಂಚಿಕೆಯಲ್ಲಿ ಇಂತಹ ಹಲವು ಎಡವಟ್ಟುಗಳು ಆಗಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. </p>.<h2>ಅಖಾಡದಿಂದ ಜೆಎಂಎಂ ಹಿಂದಕ್ಕೆ</h2><h2><br></h2>.<p>ಜಾರ್ಖಂಡ್ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾವು (ಜೆಎಂಎಂ) ನೆರೆಯ ಬಿಹಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸೋಮವಾರ ಪ್ರಕಟಿಸಿತು.</p>.<p>ಬಿಹಾರದಲ್ಲಿ 10 ಕ್ಷೇತ್ರಗಳನ್ನು ಪಕ್ಷಕ್ಕೆ ಬಿಟ್ಟು ಕೊಡಬೇಕು ಎಂದು ಜೆಎಂಎಂ ನಾಯಕರು ಒತ್ತಡ ಹೇರಿದ್ದರು. ಆರು ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ಆರ್ಜೆಡಿ ನಾಯಕರು ಒಪ್ಪಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪಕ್ಷದ ನಾಯಕರು ಬಿಹಾರದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಚ್ಚರಿಸಿದ್ದರು. ಪಕ್ಷವು ಸೋಮವಾರ ತನ್ನ ನಿರ್ಧಾರ ಬದಲಿಸಿದೆ. ಮಿತ್ರಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ನ ರಾಜಕೀಯ ಪಿತೂರಿ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಇದರಿಂದಾಗಿ, ಮೈತ್ರಿಕೂಟದಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಳವಾಗಿದೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂನ ಹಿರಿಯ ನಾಯಕಿ ಸುದಿವ್ಯ ಕುಮಾರ್, ‘ಜಾರ್ಖಂಡ್ನಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆಗಿನ ಮೈತ್ರಿಯನ್ನು ನಮ್ಮ ಪಕ್ಷ ಮರು ಪರಿಶೀಲಿಸಲಿದೆ. ಈ ಷಡ್ಯಂತ್ರಕ್ಕೆ ಸೂಕ್ತ ಉತ್ತರ ನೀಡುತ್ತೇವೆ‘ ಎಂದು ಎಚ್ಚರಿಸಿದರು. ರಾಜ್ಯ ಪ್ರವಾಸೋದ್ಯಮ ಸಚಿವ ಕುಮಾರ್ ಸಹ ಇದೇ ಎಚ್ಚರಿಕೆ ನೀಡಿದರು.</p>.<p>ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಚಕೈ, ಧಮ್ದಹಾ, ಕಟೋರಿಯಾ, ಮಣಿಹರಿ, ಜಮುಯಿ ಮತ್ತು ಪಿರ್ಪೈಂಟಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಜೆಎಂಎಂ ಶನಿವಾರ ಘೋಷಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>