ಕೋಲ್ಕತ್ತ : ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಈ ತಿಂಗಳ 22ರಂದು ಇಲ್ಲಿ ಸೌಹಾರ್ದ ರ್ಯಾಲಿ ನಡೆಸಲು ಕಲ್ಕತ್ತ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ರ್ಯಾಲಿ ನಡೆಯುವ ವೇಳೆ ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನವೇ ಈ ರ್ಯಾಲಿ ನಡೆಯಲಿದೆ.
ಅಂದು ರಾಜ್ಯದಲ್ಲಿ ಅರೆಸೇನಾಪಡೆ ನಿಯೋಜಿಸುವಂತೆ ಬಿಜೆಪಿ ಶಾಸಕ, ಅರ್ಜಿದಾರ ಸುವೇಂದು ಅಧಿಕಾರಿ ಅವರು ಮಾಡಿದ ಮನವಿ ಕುರಿತು ಕೋರ್ಟ್ ಯಾವುದೇ ಆದೇಶ ನೀಡಲಿಲ್ಲ.
ಜ. 22ರಂದು ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ನಗರದಲ್ಲಿ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ 35 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿ ಅವರ ವಕೀಲರು ಕೋರ್ಟ್ಗೆ ಮಾಹಿತಿ ನೀಡಿದರು.