ಸಿಬಿಐ ಅಧಿಕಾರಿಗಳು ಕಂದಾಯ ನಿರ್ದೇಶನಾಲಯದ ಲುದಿಯಾನ, ನೊಯ್ಡಾ ಹಾಗೂ ದೆಹಲಿಗಳಲ್ಲಿ ಶೋಧ ನಡೆಸುತ್ತಿದ್ದಾಗ ಉನ್ನತ ಹುದ್ದೆಯಲ್ಲಿದ್ದ ಈ ಅಧಿಕಾರಿ ಮಧ್ಯವರ್ತಿಯಿಂದ₹25 ಲಕ್ಷ ಸ್ವೀಕರಿಸುತ್ತಿದ್ದರು. ಈ ಸಮಯದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಈ ಅಧಿಕಾರಿಗೆ ಮಧ್ಯವರ್ತಿಯಾಗಿದ್ದ ಮತ್ತೊಬ್ಬನನ್ನು ಸಿಬಿಐ ಬಂಧಿಸಿದೆ ಎಂದು ಎಎನ್ ಐ ವರದಿ ಮಾಡಿದೆ.