<p><strong>ಲಖನೌ</strong>: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಜೊತೆಜೊತೆಗೆ ಚೀನಾದೊಂದಿಗಿನ ಗಡಿ ವ್ಯಾಜ್ಯ ಸಹ ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದೆ ಎಂದು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಶುಕ್ರವಾರ ಹೇಳಿದರು.</p><p>ಗೋರಖಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುದ್ಧದ ನಿಯಮಗಳು ಬದಲಾಗಿವೆ. ಸೈಬರ್ ಮತ್ತು ಬಾಹ್ಯಾಕಾಶ ಯುದ್ಧಗಳೂ ಸೇರ್ಪಡೆಯಾಗಿವೆ’ ಎಂದರು.</p><p>ಬಾಲಾಕೋಟ್ ದಾಳಿ ನಂತರ ಭಾರತ, ಪಾಕಿಸ್ತಾನ ಎರಡೂ ವಿಭಿನ್ನ ರೀತಿಯಲ್ಲಿ ಪಾಠ ಕಲಿತಿವೆ. ದೂರಗಾಮಿ ಶಸ್ತ್ರಾಸ್ತ್ರಗಳತ್ತ ಭಾರತ ಗಮನಹರಿಸಿದರೆ; ಪಾಕಿಸ್ತಾನವು ವಾಯುರಕ್ಷಣಾ ವ್ಯವಸ್ಥೆ ಬಲಪಡಿಸುವುದರತ್ತ ಚಿತ್ತ ಹರಿಸಿದೆ ಎಂದು ತಿಳಿಸಿದರು.</p><p>ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ‘ಯೋಜಿತ ದಾಳಿ’, ‘ಗುರಿಯ ಆಯ್ಕೆ’ ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಸೇನೆಗೆ ನೀಡಲಾಗಿತ್ತು ಎಂದು ಹೇಳಿದರು.</p><p>‘ಮೊದಲಿಗೆ ಪಾಕಿಸ್ತಾನದ ಉಗ್ರರ ಅಡುಗುದಾಣಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಲಾಯಿತು. ಆದರೆ ನಂತರ ರಾಜಕೀಯ ನಾಯಕರೊಂದಿಗಿನ ಚರ್ಚೆ ಬಳಿಕ ಬಹಾವಲಪುರ ಮತ್ತು ಮುರೀದಕೆ ಮೇಲಿನ ದಾಳಿ ಸಹ ಅಗತ್ಯ ಎಂಬ ಅರಿವಾಯಿತು’ ಎಂದರು.</p><p>ಜರ್ಮನಿಯ ರಾಜಕೀಯ ವಿಶ್ಲೇಷಕರೊಬ್ಬರ ‘ಯುದ್ಧವು ರಾಜಕೀಯದ ವಿಸ್ತೃತ ರೂಪ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ‘ಯುದ್ಧ ಮತ್ತು ಭೌಗೋಳಿಕ ರಾಜಕೀಯವನ್ನು ಪತ್ಯೇಕವಾಗಿ ನೋಡಬಾರದು’ ಎಂದು ಅವರು ಪ್ರತಿಪಾದಿಸಿದರು.</p><p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕತ್ವದ ಸೂಚನೆಯಂತೆ ಸೇನೆಯು ಕಾರ್ಯನಿರ್ವಹಿಸುತ್ತದೆ. ಸರ್ಕಾರಕ್ಕೆ ಹೆಚ್ಚೆ ಹೆಚ್ಚು ಆಯ್ಕೆಗಳನ್ನು ನೀಡುವುದು ಸೇನೆಯ ಹೊಣೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಜೊತೆಜೊತೆಗೆ ಚೀನಾದೊಂದಿಗಿನ ಗಡಿ ವ್ಯಾಜ್ಯ ಸಹ ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದೆ ಎಂದು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಶುಕ್ರವಾರ ಹೇಳಿದರು.</p><p>ಗೋರಖಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುದ್ಧದ ನಿಯಮಗಳು ಬದಲಾಗಿವೆ. ಸೈಬರ್ ಮತ್ತು ಬಾಹ್ಯಾಕಾಶ ಯುದ್ಧಗಳೂ ಸೇರ್ಪಡೆಯಾಗಿವೆ’ ಎಂದರು.</p><p>ಬಾಲಾಕೋಟ್ ದಾಳಿ ನಂತರ ಭಾರತ, ಪಾಕಿಸ್ತಾನ ಎರಡೂ ವಿಭಿನ್ನ ರೀತಿಯಲ್ಲಿ ಪಾಠ ಕಲಿತಿವೆ. ದೂರಗಾಮಿ ಶಸ್ತ್ರಾಸ್ತ್ರಗಳತ್ತ ಭಾರತ ಗಮನಹರಿಸಿದರೆ; ಪಾಕಿಸ್ತಾನವು ವಾಯುರಕ್ಷಣಾ ವ್ಯವಸ್ಥೆ ಬಲಪಡಿಸುವುದರತ್ತ ಚಿತ್ತ ಹರಿಸಿದೆ ಎಂದು ತಿಳಿಸಿದರು.</p><p>ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ‘ಯೋಜಿತ ದಾಳಿ’, ‘ಗುರಿಯ ಆಯ್ಕೆ’ ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಸೇನೆಗೆ ನೀಡಲಾಗಿತ್ತು ಎಂದು ಹೇಳಿದರು.</p><p>‘ಮೊದಲಿಗೆ ಪಾಕಿಸ್ತಾನದ ಉಗ್ರರ ಅಡುಗುದಾಣಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಲಾಯಿತು. ಆದರೆ ನಂತರ ರಾಜಕೀಯ ನಾಯಕರೊಂದಿಗಿನ ಚರ್ಚೆ ಬಳಿಕ ಬಹಾವಲಪುರ ಮತ್ತು ಮುರೀದಕೆ ಮೇಲಿನ ದಾಳಿ ಸಹ ಅಗತ್ಯ ಎಂಬ ಅರಿವಾಯಿತು’ ಎಂದರು.</p><p>ಜರ್ಮನಿಯ ರಾಜಕೀಯ ವಿಶ್ಲೇಷಕರೊಬ್ಬರ ‘ಯುದ್ಧವು ರಾಜಕೀಯದ ವಿಸ್ತೃತ ರೂಪ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ‘ಯುದ್ಧ ಮತ್ತು ಭೌಗೋಳಿಕ ರಾಜಕೀಯವನ್ನು ಪತ್ಯೇಕವಾಗಿ ನೋಡಬಾರದು’ ಎಂದು ಅವರು ಪ್ರತಿಪಾದಿಸಿದರು.</p><p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕತ್ವದ ಸೂಚನೆಯಂತೆ ಸೇನೆಯು ಕಾರ್ಯನಿರ್ವಹಿಸುತ್ತದೆ. ಸರ್ಕಾರಕ್ಕೆ ಹೆಚ್ಚೆ ಹೆಚ್ಚು ಆಯ್ಕೆಗಳನ್ನು ನೀಡುವುದು ಸೇನೆಯ ಹೊಣೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>