<p><strong>ನವದೆಹಲಿ: </strong>ಭಾರತ ಮತ್ತು ಅಮೆರಿಕ ಒಟ್ಟುಗೂಡಿ ಕಾರ್ಯನಿರ್ವಹಿಸಬಹುದು. ಇದು, ‘ಸರ್ವಾಧಿಕಾರಿ’ ಚೀನಾ ವಿರುದ್ಧ ಹೋರಾಟಕ್ಕಾಗಿ ಅಲ್ಲ, ಬದಲಾಗಿ ಈ ನೆಲದ ಕಾನೂನುಗಳ ರಕ್ಷಣೆಗಾಗಿ ಎಂದು ಅಮೆರಿಕದ ಮಾಜಿ ರಾಯಭಾರಿ, ಹಾರ್ವರ್ಡ್ ಪ್ರೊಫೆಸರ್ ನಿಕೊಲಾಸ್ ಬರ್ನ್ಸ್ ಹೇಳಿದ್ದಾರೆ.</p>.<p>ಇವರು ಶುಕ್ರವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಜೊತೆಗೆ ಸಂವಾದ ನಡೆಸುತ್ತಿದ್ದರು. ‘ನನ್ನ ಪ್ರಕಾರ, ಭಾರತ ಮತ್ತು ಅಮೆರಿಕವು‘ಸರ್ವಾಧಿಕಾರಿ’ ದೇಶಗಳಾದ ರಷ್ಯಾ, ಚೀನಾದಿಂದ ಸವಾಲು ಎದುರಿಸಬೇಕಾಗಬಹುದು’ ಎಂದು ಬರ್ನ್ಸ್ ಹೇಳಿದರು.</p>.<p>ಸಮಾಧಾನ, ಶಾಂತಿ ಈ ನೆಲದ ಗುಣವೇ ಆಗಿರುವ ಕಾರಣ ಭಾರತ ಮತ್ತು ಅಮೆರಿಕದ ಪಾಲುದಾರಿಕೆ ನಡೆಯುತ್ತಿದೆ. ಆದರೆ, ಈ ಮೊದಲು ನಮ್ಮ ಡಿಎನ್ಎಯಲ್ಲಿ ಇದ್ದ ತಾಳ್ಮೆಯ ಪ್ರಮಾಣವನ್ನು ಎರಡೂ ದೇಶಗಳಲ್ಲಿ ಈಗ ಕಾಣಲು ಸಾಧ್ಯವಿಲ್ಲವಾಗಿದೆ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.</p>.<p>‘ಹೊಸ ಚಿಂತನೆಗಳನ್ನು ನಾವು ಒಪ್ಪಿಕೊಳ್ಳಬೇಕು. ನಾವು ಮುಕ್ತವಾಗಿ ಇರಬೇಕು. ಆದರೆ, ಡಿಎನ್ಎಯಲ್ಲಿ ಇದ್ದ ತಾಳ್ಮೆಯ ಲಕ್ಷಣಗಳು ನಿಧಾನಕ್ಕೆ ಮರೆಯಾಗುತ್ತಿವೆ. ಇಂಥ ತಾಳ್ಮೆಯ ಗುಣ ನನಗೆ ಅಮೆರಿಕದಲ್ಲಿ ಅಥವಾ ಅಥವಾ ಭಾರತದಲ್ಲಿ ಕಾಣುತ್ತಿಲ್ಲ. ಇದು, ಬೇಸರದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ಅಮೆರಿಕದಲ್ಲಿ ವ್ಯಾಪಕವಾಗಿ ಕಂಡುಬಂದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಈ ಮಾತು ಹೇಳಿದರು.</p>.<p>ಈ ಮೊದಲು ಶಿಕ್ಷಣ, ರಕ್ಷಣೆ, ಆರೋಗ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಿಗೆ ಅನ್ವಯಿಸಿ ಇದ್ದ ಬಾಂಧವ್ಯ ಈಗ ಕೇವಲ ರಕ್ಷಣಾಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಭಾರತ ಮತ್ತು ಅಮೆರಿಕ ಒಟ್ಟುಗೂಡಿ ಕಾರ್ಯನಿರ್ವಹಿಸಬಹುದು. ಇದು, ‘ಸರ್ವಾಧಿಕಾರಿ’ ಚೀನಾ ವಿರುದ್ಧ ಹೋರಾಟಕ್ಕಾಗಿ ಅಲ್ಲ, ಬದಲಾಗಿ ಈ ನೆಲದ ಕಾನೂನುಗಳ ರಕ್ಷಣೆಗಾಗಿ ಎಂದು ಅಮೆರಿಕದ ಮಾಜಿ ರಾಯಭಾರಿ, ಹಾರ್ವರ್ಡ್ ಪ್ರೊಫೆಸರ್ ನಿಕೊಲಾಸ್ ಬರ್ನ್ಸ್ ಹೇಳಿದ್ದಾರೆ.</p>.<p>ಇವರು ಶುಕ್ರವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಜೊತೆಗೆ ಸಂವಾದ ನಡೆಸುತ್ತಿದ್ದರು. ‘ನನ್ನ ಪ್ರಕಾರ, ಭಾರತ ಮತ್ತು ಅಮೆರಿಕವು‘ಸರ್ವಾಧಿಕಾರಿ’ ದೇಶಗಳಾದ ರಷ್ಯಾ, ಚೀನಾದಿಂದ ಸವಾಲು ಎದುರಿಸಬೇಕಾಗಬಹುದು’ ಎಂದು ಬರ್ನ್ಸ್ ಹೇಳಿದರು.</p>.<p>ಸಮಾಧಾನ, ಶಾಂತಿ ಈ ನೆಲದ ಗುಣವೇ ಆಗಿರುವ ಕಾರಣ ಭಾರತ ಮತ್ತು ಅಮೆರಿಕದ ಪಾಲುದಾರಿಕೆ ನಡೆಯುತ್ತಿದೆ. ಆದರೆ, ಈ ಮೊದಲು ನಮ್ಮ ಡಿಎನ್ಎಯಲ್ಲಿ ಇದ್ದ ತಾಳ್ಮೆಯ ಪ್ರಮಾಣವನ್ನು ಎರಡೂ ದೇಶಗಳಲ್ಲಿ ಈಗ ಕಾಣಲು ಸಾಧ್ಯವಿಲ್ಲವಾಗಿದೆ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.</p>.<p>‘ಹೊಸ ಚಿಂತನೆಗಳನ್ನು ನಾವು ಒಪ್ಪಿಕೊಳ್ಳಬೇಕು. ನಾವು ಮುಕ್ತವಾಗಿ ಇರಬೇಕು. ಆದರೆ, ಡಿಎನ್ಎಯಲ್ಲಿ ಇದ್ದ ತಾಳ್ಮೆಯ ಲಕ್ಷಣಗಳು ನಿಧಾನಕ್ಕೆ ಮರೆಯಾಗುತ್ತಿವೆ. ಇಂಥ ತಾಳ್ಮೆಯ ಗುಣ ನನಗೆ ಅಮೆರಿಕದಲ್ಲಿ ಅಥವಾ ಅಥವಾ ಭಾರತದಲ್ಲಿ ಕಾಣುತ್ತಿಲ್ಲ. ಇದು, ಬೇಸರದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ಅಮೆರಿಕದಲ್ಲಿ ವ್ಯಾಪಕವಾಗಿ ಕಂಡುಬಂದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಈ ಮಾತು ಹೇಳಿದರು.</p>.<p>ಈ ಮೊದಲು ಶಿಕ್ಷಣ, ರಕ್ಷಣೆ, ಆರೋಗ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಿಗೆ ಅನ್ವಯಿಸಿ ಇದ್ದ ಬಾಂಧವ್ಯ ಈಗ ಕೇವಲ ರಕ್ಷಣಾಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>