<p><strong>ಮೋತಿಹರಿ:</strong> 'ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಿದರೆ ಎನ್ಡಿಎ ಸರ್ಕಾರ ಪತನಗೊಳ್ಳುವುದು ಖಚಿತ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಗುರುವಾರ) ಹೇಳಿದ್ದಾರೆ. </p><p>'ರಾಜ್ಯದಲ್ಲಿ ಬಡವರು, ದಲಿತರು, ಮಹಿಳೆಯರು ಹಾಗೂ ಯುವ ಜನರ ಪರ ಕೆಲಸ ಮಾಡುವ ಸರ್ಕಾರವನ್ನು ರಚಿಸಲಾಗುವುದು' ಎಂದು ಅವರು ಭರವಸೆ ನೀಡಿದ್ದಾರೆ. </p><p>ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, 'ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಬಿಹಾರದ ಜನರ ಬಗ್ಗೆ ಎನ್ಡಿಎ ಸರ್ಕಾರಕ್ಕೆ ಕಿಂಚಿತ್ತು ಗೌರವ ಇಲ್ಲ' ಎಂದು ಟೀಕಿಸಿದ್ದಾರೆ. </p><p>'ಅಭಿವೃದ್ಧಿಗಾಗಿ ಅಲ್ಲ, ಧರ್ಮದ ಹೆಸರಿನಲ್ಲಿ ಮತಹಾಕುವಂತೆ ಬಿಜೆಪಿ ನಾಯಕರು ಜನರನ್ನು ಒತ್ತಾಯಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ. </p><p>ರಾಜ್ಯದಲ್ಲಿ ಕಳಪೆ ಮಟ್ಟದ ಮೂಲಸೌಕರ್ಯಕ್ಕಾಗಿ ಎನ್ಡಿಎ ಸರ್ಕಾರವನ್ನು ಟೀಕಿಸಿದ ಅವರು 'ಕಳೆದ ಮೂರು ವರ್ಷಗಳಲ್ಲಿ 27 ಸೇತುವೆಗಳು ಕುಸಿದಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ. </p>.Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ.Bihar: ಅವಕಾಶವಾದಿ ಆಡಳಿತಗಾರರಿಗೆ ಪಾಠ ಕಲಿಸಲು ಸುವರ್ಣಾವಕಾಶ; ಮತದಾರರಿಗೆ ಖರ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೋತಿಹರಿ:</strong> 'ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಿದರೆ ಎನ್ಡಿಎ ಸರ್ಕಾರ ಪತನಗೊಳ್ಳುವುದು ಖಚಿತ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಗುರುವಾರ) ಹೇಳಿದ್ದಾರೆ. </p><p>'ರಾಜ್ಯದಲ್ಲಿ ಬಡವರು, ದಲಿತರು, ಮಹಿಳೆಯರು ಹಾಗೂ ಯುವ ಜನರ ಪರ ಕೆಲಸ ಮಾಡುವ ಸರ್ಕಾರವನ್ನು ರಚಿಸಲಾಗುವುದು' ಎಂದು ಅವರು ಭರವಸೆ ನೀಡಿದ್ದಾರೆ. </p><p>ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, 'ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಬಿಹಾರದ ಜನರ ಬಗ್ಗೆ ಎನ್ಡಿಎ ಸರ್ಕಾರಕ್ಕೆ ಕಿಂಚಿತ್ತು ಗೌರವ ಇಲ್ಲ' ಎಂದು ಟೀಕಿಸಿದ್ದಾರೆ. </p><p>'ಅಭಿವೃದ್ಧಿಗಾಗಿ ಅಲ್ಲ, ಧರ್ಮದ ಹೆಸರಿನಲ್ಲಿ ಮತಹಾಕುವಂತೆ ಬಿಜೆಪಿ ನಾಯಕರು ಜನರನ್ನು ಒತ್ತಾಯಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ. </p><p>ರಾಜ್ಯದಲ್ಲಿ ಕಳಪೆ ಮಟ್ಟದ ಮೂಲಸೌಕರ್ಯಕ್ಕಾಗಿ ಎನ್ಡಿಎ ಸರ್ಕಾರವನ್ನು ಟೀಕಿಸಿದ ಅವರು 'ಕಳೆದ ಮೂರು ವರ್ಷಗಳಲ್ಲಿ 27 ಸೇತುವೆಗಳು ಕುಸಿದಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ. </p>.Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ.Bihar: ಅವಕಾಶವಾದಿ ಆಡಳಿತಗಾರರಿಗೆ ಪಾಠ ಕಲಿಸಲು ಸುವರ್ಣಾವಕಾಶ; ಮತದಾರರಿಗೆ ಖರ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>